ರಾಹುವಿನ ಸ್ಥಾನ ಬದಲಾವಣೆ ಯಾವ ರಾಶಿಗೆ ಅಶುಭ? ಪರಿಹಾರವೇನು?

ಸಿಂಹಿಕೆಯ ಗರ್ಭದಿಂದ ಜನಿಸಿದ ರಾಕ್ಷಸನೇ ರಾಹು ಕೇತುವಾಗಿ ಗ್ರಹಗಳ ಸ್ಥಾನವನ್ನು ಅಲಂಕರಿಸಿದ್ದಾರೆ.‌ ಇವರು ಅಶುಭಗ್ರಹರೆಂದೇ ಪ್ರಸಿದ್ಧರಾಗಿದ್ದು, ಪಾಪಕರ್ಮಗಳನ್ನು ಸೂಚಿಸುವ ಗ್ರಹಗಳಾಗಿವೆ. ಚಂದ್ರ ಮತ್ತು ರವಿಯರಿಗೆ ಸದಾಕಾಲ ತೊಂದರೆ ಕೊಡವವರು ಇವರೇ. ಈ ಎರಡೂ ಗ್ರಹರಿಂದ ಮಾತ್ರ ಸೂರ್ಯ ಚಂದ್ರರಿಗೆ ಗ್ರಹಣವಾಗುತ್ತದೆ.

ರಾಹುವಿನ ಸ್ಥಾನ ಬದಲಾವಣೆ ಯಾವ ರಾಶಿಗೆ ಅಶುಭ? ಪರಿಹಾರವೇನು?
ರಾಹುವಿನ ಸ್ಥಾನ ಬದಲಾವಣೆ
Follow us
| Updated By: Digi Tech Desk

Updated on:Jul 11, 2024 | 10:15 AM

ಸದ್ಯ ಮೀನ ರಾಶಿ ಇರುವ ರಾಹುವುದು ಅಪ್ರದಕ್ಷಿಣ ಕ್ರಮದಲ್ಲಿ ಸುತ್ತುವನು. ಹಾಗಾಗಿ ರೇವತೀ ನಕ್ಷತ್ರದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ವಾಸಮಾಡಿ ಅನಂತರ ಉತ್ತರಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿಯಾಗಿದೆ. ಈ ನಕ್ಷತ್ರಗಳ ಅಧಿಪತಿ ಶನಿ. ಶನಿ ರಾಹು ಇಬ್ಬರೂ ನೋಡಲು ಬೇರೆಬೇರೆಯಾದರೂ ಸ್ವಭಾವದಲ್ಲಿ ಹೋಲಿಕೆ ಹೆಚ್ಚು. ಹಾಗಾಗಿ ಶನಿಗೆ ಹೇಳಿದ ಫಲಗಳು ರಾಹುವಿಗೂ ಬರುತ್ತದೆ. ಇನ್ನು ಪರಿವರ್ತನೆಯಿಂದ ಅಶುಭಫಲವನ್ನು ರಾಹುವು ಯಾವ ರಾಶಿಯವರಿಗೆ ಕೊಡುತ್ತಾನೆ ಎನ್ನುವುದನ್ನು ನೋಡಬೇಕಿದೆ.

ಮೇಷ ರಾಶಿ :ಈ ರಾಶಿಯಲ್ಲಿ ಜನಿಸಿದ ಎಲ್ಲರಿಗೂ ಅಶುಭವಲ್ಲ. ಕೃತ್ತಿಕಾ ನಕ್ಷತ್ರದವರಿಗೆ ಮಾತ್ರ ರಾಹುವಿನ ಕೆಟ್ಟ ದೃಷ್ಟಿ ಬೀಳಲಿದೆ. ಕುಟುಂಬದಲ್ಲಿ ಮನಸ್ತಾಪಗಳು ಸಣ್ಣ ವಿಚಾರಕ್ಕೂ ಬರುತ್ತವೆ. ತಂದೆ ಹಾಗೂ ಮಕ್ಕಳಿಗೆ ಹೊಂದಾಣಿಕೆ ಕಷ್ಟ.

ವೃಷಭ ರಾಶಿ :ಈ ರಾಶಿಯಲ್ಲಿ ಜನಿಸಿದವರಿಗೆ ರಾಹುವಿನ ಅಶುಭ ದೃಷ್ಟಿ ಇರಲಿದೆ. ಮನಸ್ಸು ಚಂಚಲವಾಗಿ ಯಾವ ಕಾರ್ಯಕ್ಕೂ ಸ್ಥಿರವಾಗದು. ಒಂದನ್ನು ಮಾಡಲು ಹೋದರೆ, ಮತ್ತೊಂದು ಚೆನ್ನಾಗಿ ಕಾಣಿಸುವುದು. ಹೀಗೆ ಪ್ರತಿಯೊಂದು ಕಾರ್ಯದಲ್ಲಿಯೂ ಪೂರ್ಣವಾಗಿ ತೊಡಗಲು ಆಗದು.

ಮಿಥುನ ರಾಶಿ :ಮೃಗಶಿರ ರಾಶಿಯಲ್ಲಿ ಜನಿಸಿದವರಿಗೆ ಅಶುಭಯೋಗ. ಕೈ ಹಾಕಿದ ಕಾರ್ಯದಿಂದ ಕೈ ಸುಟ್ಟುಕೊಳ್ಳುವಿರಿ. ಯಂತ್ರಜ್ಞರು ಮಹಳ ಸಂಕಟಪಡಬೇಕಾದ ಸ್ಥಿತಿ ಬದಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭಕ್ಕೆ ತೃಪ್ತಿಪಡಬೇಕಾಗುವುದು.

ಸಿಂಹ ರಾಶಿ :ಈ ರಾಶಿಯವರಿಗೆ ತಂದೆಯಿಂದ ಯಾವುದೇ ಸಹಕಾರ ಸಿಗುವುದು ಅಸಾಧ್ಯ. ಉತ್ತರಾ ನಕ್ಷತ್ರದಲ್ಲಿ ಜನಿಸಿದವರು ತಂದೆಯ ಜೊತೆ ನಿರಂತರ ವೈಮನಸ್ಸಿಂದ ಇರುಬೇಕಾಗುತ್ತದೆ. ಸರ್ಕಾರ ಕಾರ್ಯದಲ್ಲಿ ಹಿನ್ನಡೆಯಾಗಲಿದೆ.

ಕನ್ಯಾ ರಾಶಿ :ಸಂಗಾತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಅನುಮಾನದ ಸ್ವಭಾವ ಹೆಚ್ಚಾಗುವುದು. ನಂಬಿಕೆಯನ್ನು ಗಳಿಸಲು, ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲೂ ಕಷ್ಟವಾಗುವುದು.

ತುಲಾ ರಾಶಿ :ಸ್ವಂತ ಉದ್ಯೋವನ್ನು ಇಟ್ಟವರಿಗೆ ಯಂತ್ರಕ್ಕೆ ಸಂಬಂಧಿಸಿದ ಕಾರ್ಯವನ್ನು ಮಾಡುವವರು ಎಚ್ಚರಿಕೆಯಿಂದ ಇರಬೇಕು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಔಚಿತ್ಯಕ್ಕೆ ಭಂಗ ಬರುವುದು.

ಧನು ರಾಶಿ :ಈ ರಾಶಿಯವರಿಗೆ ತೊಂದರೆಗಳಿದ್ದರೂ ಯಾರದೋ ಮೂಲಕ ಅದರ ನಿವಾರಣೆಯಾಗುತ್ತದೆ. ಕಷ್ಟ ಪಕ್ಕಾ ಚಿಂತೆಗೆಡಬಾರದು.

ಮಕರ ರಾಶಿ : ಈ ರಾಶಿಯವರಿಗೆ ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ಕಷ್ಟವಾಗುವುದು. ಇದರಿಂದ ಮಾನಸಿಕ ಒತ್ತಡ ಬೇಸರ, ಕೆಲಸ ಆಗಿಲ್ಲ ಎಂಬ ಸಿಟ್ಟು ನಿಮ್ಮನ್ನು ಬಾಧಿಸುವುದು. ನಿಮ್ಮ ಶ್ರಮಕ್ಕೆ ಪೂರ್ಣಫಲ ಸಿಗದು. ದಾರಿಯನ್ನು ಬದಲಿಸುವ ತೀರ್ಮಾನಕ್ಕೆ ಬರುವಿರಿ.

ಕುಂಭ ರಾಶಿ : ಇದು ಶನಿಯ ಮೂಲತ್ರಿಕೋಣವು ಆದುದರಿಂದ ರಾಹುವಿನ ಬಾಧದೆ ತಟ್ಟದು. ಆದರೆ ಧನಿಷ್ಠಾ ನಕ್ಷತ್ರದವರಿಗೆ ಸಣ್ಣ ಧನನಷ್ಟದ ನೋವನ್ನೂ ಸಹಿಸುವುದು ಕಷ್ಟವಾಗುವುದು. ರಾಹುವಿನಿಂದ ಪ್ರತಿಕೂಲವನ್ನು ಅನುಭವಿಸುವವರು ನಾಗಾರಾಧನೆ, ಪಿತೃಗಳ ಆರಾಧನೆ, ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ, ಬರುವ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದು.

ಲೋಹಿತ ಹೆಬ್ಬಾರ್ – 8762924271

Published On - 10:39 pm, Wed, 10 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್