AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?

ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ. ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಇದಲ್ಲದೇ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?
ಸಿಂಹರಾಶಿಯಲ್ಲಿ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 15, 2023 | 8:38 PM

Share

ಇದೇ ತಿಂಗಳ ಹದಿನಾರರಂದು ಸೂರ್ಯನು ಸ್ವಸ್ಥಾನವಾದ ಸಿಂಹರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಸೇರಿ ಒಟ್ಟು ನಾಲ್ಕು ಗ್ರಹಗಳು (Planets) ಇರಲಿದೆ. ಸರಿಸುಮಾರು ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಬುದ್ಧಿವಂತರೂ, ಎಲ್ಲ ಕಾರ್ಯಗಳಲ್ಲಿ ನಿಪುಣರೂ, ರಾಜಸಮಾನರಿಂದ ಪೂಜಿತರೂ ಆಗುವರು. ಈ ರಾಶಿಯ (Rashi) ಮೇಲೆ ಗುರುವಿನ ಪೂರ್ಣದೃಷ್ಟಿಯು ಇರಲಿದೆ.

ಇದಲ್ಲದೇ ಈ ಸಂದರ್ಭದಲ್ಲಿ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ:

ರಾಶ್ಯಧಿಪತಿಯಾದ ಕುಜನು ಮಿತ್ರನಾದ ಸೂರ್ಯನ‌ ಜೊತೆ ಇರುವನು. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಆಗಿರುವ ಕಾರಣ ಮಾನ ಸಮ್ಮಾನಗಳು ಹೆಚ್ಚು ಸಿಗಲಿವೆ. ಈ ರಾಶಿಯವರ ವರ್ಚಸ್ಸು ಎಲ್ಲ ಕಡೆಗೂ ಇರಲಿದೆ. ಪ್ರತಿಭೆಗೆ ಸಂಬಂಧಿಸಿದಂತೆ ಯಶಸ್ಸನ್ನು ಗಳಿಸುವಿರಿ. ನಿಮ್ಮ ಇಷ್ಟವನ್ನು ಪೂರ್ಣಗೊಳಿಸಿಕೊಳ್ಳುವಿರಿ. ಉನ್ನತ ಅಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ.

ಮಿಥುನ ರಾಶಿ:

ರಾಶ್ಯಧಿಪತಿಯಾದ ಬುಧನು ಸೂರ್ಯನ ಜೊತೆ ಇರುವುದು ಬಹಳ ಶುಭ. ಬುಧನು ಬುದ್ಧಿಯನ್ನು ತೀಕ್ಷ್ಣ ಮಾಡಿದರೆ, ರವಿಯು ಅದನ್ನು ಪ್ರಕಾಶಗೊಳಿಸಲು ಸಹಾಯ ಮಾಡುವನು. ಬುಧಾದಿತ್ಯ ಯೋಗವು ಉತ್ತಮವಾದುದಾಗಿದೆ. ತೃತೀಯದಲ್ಲಿ ಬುಧನು ರವಿಯ‌ ಜೊತೆ ಇರುವ ಕಾರಣ ನಿಮ್ಮ ಪ್ರತಿಭೆಯ ಬೃಹದ್ರೂಪದ ದರ್ಶನವು ಆಗುವುದು.

ತುಲಾ ರಾಶಿ:

ಈ ರಾಶಿಗೆ ಸೂರ್ಯನು ಏಕಾದಶಕ್ಕೆ ಬರುವ ಕಾರಣ ಸರ್ಕಾರಿ ಉದ್ಯೋಗಪ್ರಾಪ್ತಿಯಾಗುವುದು. ತಂದೆಯಿಂದ ಅಥವಾ ಹಿರಿಯರಿಂದ ಧನಲಾಭವಾಗುವುದು. ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗವು ಬರುವುದು.

ವೃಶ್ಚಿಕ ರಾಶಿ:

ರಾಶ್ಯಧಿಪತಿಯು ದಶಮಸ್ಥಾನದಲ್ಲಿ ಇರುವುದರಿಂದ ತಂತ್ರಜ್ಞರು ಹೆಚ್ಚಿನ ಲಾಭವನ್ನು ಗಳಿಸುವರು. ಯಂತ್ರೋಪಕರಣ ಮಾರಾಟಗಾರರಿಗೆ ಆರ್ಥಿಕ ವ್ಯವಸ್ಥೆ ವ್ಯವಹಾರವು ಬಹಳ ಚುರುಕಿನಿಂದ ಆಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ