AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?

ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ. ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಇದಲ್ಲದೇ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?
ಸಿಂಹರಾಶಿಯಲ್ಲಿ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: Rakesh Nayak Manchi|

Updated on: Aug 15, 2023 | 8:38 PM

Share

ಇದೇ ತಿಂಗಳ ಹದಿನಾರರಂದು ಸೂರ್ಯನು ಸ್ವಸ್ಥಾನವಾದ ಸಿಂಹರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಸೇರಿ ಒಟ್ಟು ನಾಲ್ಕು ಗ್ರಹಗಳು (Planets) ಇರಲಿದೆ. ಸರಿಸುಮಾರು ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಬುದ್ಧಿವಂತರೂ, ಎಲ್ಲ ಕಾರ್ಯಗಳಲ್ಲಿ ನಿಪುಣರೂ, ರಾಜಸಮಾನರಿಂದ ಪೂಜಿತರೂ ಆಗುವರು. ಈ ರಾಶಿಯ (Rashi) ಮೇಲೆ ಗುರುವಿನ ಪೂರ್ಣದೃಷ್ಟಿಯು ಇರಲಿದೆ.

ಇದಲ್ಲದೇ ಈ ಸಂದರ್ಭದಲ್ಲಿ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ:

ರಾಶ್ಯಧಿಪತಿಯಾದ ಕುಜನು ಮಿತ್ರನಾದ ಸೂರ್ಯನ‌ ಜೊತೆ ಇರುವನು. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಆಗಿರುವ ಕಾರಣ ಮಾನ ಸಮ್ಮಾನಗಳು ಹೆಚ್ಚು ಸಿಗಲಿವೆ. ಈ ರಾಶಿಯವರ ವರ್ಚಸ್ಸು ಎಲ್ಲ ಕಡೆಗೂ ಇರಲಿದೆ. ಪ್ರತಿಭೆಗೆ ಸಂಬಂಧಿಸಿದಂತೆ ಯಶಸ್ಸನ್ನು ಗಳಿಸುವಿರಿ. ನಿಮ್ಮ ಇಷ್ಟವನ್ನು ಪೂರ್ಣಗೊಳಿಸಿಕೊಳ್ಳುವಿರಿ. ಉನ್ನತ ಅಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ.

ಮಿಥುನ ರಾಶಿ:

ರಾಶ್ಯಧಿಪತಿಯಾದ ಬುಧನು ಸೂರ್ಯನ ಜೊತೆ ಇರುವುದು ಬಹಳ ಶುಭ. ಬುಧನು ಬುದ್ಧಿಯನ್ನು ತೀಕ್ಷ್ಣ ಮಾಡಿದರೆ, ರವಿಯು ಅದನ್ನು ಪ್ರಕಾಶಗೊಳಿಸಲು ಸಹಾಯ ಮಾಡುವನು. ಬುಧಾದಿತ್ಯ ಯೋಗವು ಉತ್ತಮವಾದುದಾಗಿದೆ. ತೃತೀಯದಲ್ಲಿ ಬುಧನು ರವಿಯ‌ ಜೊತೆ ಇರುವ ಕಾರಣ ನಿಮ್ಮ ಪ್ರತಿಭೆಯ ಬೃಹದ್ರೂಪದ ದರ್ಶನವು ಆಗುವುದು.

ತುಲಾ ರಾಶಿ:

ಈ ರಾಶಿಗೆ ಸೂರ್ಯನು ಏಕಾದಶಕ್ಕೆ ಬರುವ ಕಾರಣ ಸರ್ಕಾರಿ ಉದ್ಯೋಗಪ್ರಾಪ್ತಿಯಾಗುವುದು. ತಂದೆಯಿಂದ ಅಥವಾ ಹಿರಿಯರಿಂದ ಧನಲಾಭವಾಗುವುದು. ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗವು ಬರುವುದು.

ವೃಶ್ಚಿಕ ರಾಶಿ:

ರಾಶ್ಯಧಿಪತಿಯು ದಶಮಸ್ಥಾನದಲ್ಲಿ ಇರುವುದರಿಂದ ತಂತ್ರಜ್ಞರು ಹೆಚ್ಚಿನ ಲಾಭವನ್ನು ಗಳಿಸುವರು. ಯಂತ್ರೋಪಕರಣ ಮಾರಾಟಗಾರರಿಗೆ ಆರ್ಥಿಕ ವ್ಯವಸ್ಥೆ ವ್ಯವಹಾರವು ಬಹಳ ಚುರುಕಿನಿಂದ ಆಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್