AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?

ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ. ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಇದಲ್ಲದೇ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?
ಸಿಂಹರಾಶಿಯಲ್ಲಿ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 15, 2023 | 8:38 PM

Share

ಇದೇ ತಿಂಗಳ ಹದಿನಾರರಂದು ಸೂರ್ಯನು ಸ್ವಸ್ಥಾನವಾದ ಸಿಂಹರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಸೇರಿ ಒಟ್ಟು ನಾಲ್ಕು ಗ್ರಹಗಳು (Planets) ಇರಲಿದೆ. ಸರಿಸುಮಾರು ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಬುದ್ಧಿವಂತರೂ, ಎಲ್ಲ ಕಾರ್ಯಗಳಲ್ಲಿ ನಿಪುಣರೂ, ರಾಜಸಮಾನರಿಂದ ಪೂಜಿತರೂ ಆಗುವರು. ಈ ರಾಶಿಯ (Rashi) ಮೇಲೆ ಗುರುವಿನ ಪೂರ್ಣದೃಷ್ಟಿಯು ಇರಲಿದೆ.

ಇದಲ್ಲದೇ ಈ ಸಂದರ್ಭದಲ್ಲಿ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ:

ರಾಶ್ಯಧಿಪತಿಯಾದ ಕುಜನು ಮಿತ್ರನಾದ ಸೂರ್ಯನ‌ ಜೊತೆ ಇರುವನು. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಆಗಿರುವ ಕಾರಣ ಮಾನ ಸಮ್ಮಾನಗಳು ಹೆಚ್ಚು ಸಿಗಲಿವೆ. ಈ ರಾಶಿಯವರ ವರ್ಚಸ್ಸು ಎಲ್ಲ ಕಡೆಗೂ ಇರಲಿದೆ. ಪ್ರತಿಭೆಗೆ ಸಂಬಂಧಿಸಿದಂತೆ ಯಶಸ್ಸನ್ನು ಗಳಿಸುವಿರಿ. ನಿಮ್ಮ ಇಷ್ಟವನ್ನು ಪೂರ್ಣಗೊಳಿಸಿಕೊಳ್ಳುವಿರಿ. ಉನ್ನತ ಅಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ.

ಮಿಥುನ ರಾಶಿ:

ರಾಶ್ಯಧಿಪತಿಯಾದ ಬುಧನು ಸೂರ್ಯನ ಜೊತೆ ಇರುವುದು ಬಹಳ ಶುಭ. ಬುಧನು ಬುದ್ಧಿಯನ್ನು ತೀಕ್ಷ್ಣ ಮಾಡಿದರೆ, ರವಿಯು ಅದನ್ನು ಪ್ರಕಾಶಗೊಳಿಸಲು ಸಹಾಯ ಮಾಡುವನು. ಬುಧಾದಿತ್ಯ ಯೋಗವು ಉತ್ತಮವಾದುದಾಗಿದೆ. ತೃತೀಯದಲ್ಲಿ ಬುಧನು ರವಿಯ‌ ಜೊತೆ ಇರುವ ಕಾರಣ ನಿಮ್ಮ ಪ್ರತಿಭೆಯ ಬೃಹದ್ರೂಪದ ದರ್ಶನವು ಆಗುವುದು.

ತುಲಾ ರಾಶಿ:

ಈ ರಾಶಿಗೆ ಸೂರ್ಯನು ಏಕಾದಶಕ್ಕೆ ಬರುವ ಕಾರಣ ಸರ್ಕಾರಿ ಉದ್ಯೋಗಪ್ರಾಪ್ತಿಯಾಗುವುದು. ತಂದೆಯಿಂದ ಅಥವಾ ಹಿರಿಯರಿಂದ ಧನಲಾಭವಾಗುವುದು. ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗವು ಬರುವುದು.

ವೃಶ್ಚಿಕ ರಾಶಿ:

ರಾಶ್ಯಧಿಪತಿಯು ದಶಮಸ್ಥಾನದಲ್ಲಿ ಇರುವುದರಿಂದ ತಂತ್ರಜ್ಞರು ಹೆಚ್ಚಿನ ಲಾಭವನ್ನು ಗಳಿಸುವರು. ಯಂತ್ರೋಪಕರಣ ಮಾರಾಟಗಾರರಿಗೆ ಆರ್ಥಿಕ ವ್ಯವಸ್ಥೆ ವ್ಯವಹಾರವು ಬಹಳ ಚುರುಕಿನಿಂದ ಆಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು