AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ನಾಲ್ಕು ರಾಶಿಯವರಿಗೆ ಈ ವರ್ಷ ಹೆಚ್ಚು ಶುಭ

ಗುರು ಗ್ರಹವು ತನ್ನ ಸ್ಥಾನವನ್ನು ಬದಲಿಸುತ್ತಿದೆ. ರಾಶಿ ಚಕ್ರದ ಎರಡನೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುವ ಕಾಲವು ಸಮೀಪಿಸುತ್ತಿದ್ದೆ. ಇನ್ನು ಒಂದು ವರ್ಷ ಕೆಲವು ರಾಶಿಯವರಿಗೆ ಶುಭ. ಯಾವೆಲ್ಲ ರಾಶಿಯವರಿಗೆ ಶುಭ ಇದೆ. ಇಲ್ಲಿದೆ ನೋಡಿ.

Horoscope: ಈ ನಾಲ್ಕು ರಾಶಿಯವರಿಗೆ ಈ ವರ್ಷ ಹೆಚ್ಚು ಶುಭ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 25, 2024 | 10:40 AM

Share

ಗುರು ಗ್ರಹವು ತನ್ನ ಸ್ಥಾನವನ್ನು ಬದಲಿಸುತ್ತಿದೆ. ರಾಶಿ ಚಕ್ರದ ಎರಡನೇ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸುವ ಕಾಲವು ಸಮೀಪಿಸುತ್ತಿದ್ದೆ. ಇನ್ನು ಒಂದು ವರ್ಷ ಕೆಲವು ರಾಶಿಯವರಿಗೆ ಶುಭ.

ಮೇಷ ರಾಶಿ :

ಈ ರಾಶಿಯವರಿಗೆ ದ್ವೀತೀಯ ಸ್ಥಾನದಲ್ಲಿ ಗುರುವು ಇರಲಿದ್ದಾನೆ. ಸಂಪತ್ತಿನ ಸ್ಥಾನವಾಗಿದ್ದರಿಂದ ಅಲ್ಪ ಪ್ರಮಾಣದಲ್ಲಿ ಪೂರ್ವಾರ್ಜಿತವಾದ ಸಂಪತ್ತು ಬರಲಿದೆ. ನೀವಾಡಿದ ಮಾತುಗಳು ಸತ್ಯವಾಗುವುದು. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆಯೂ ಯಶಸ್ಸೂ ಸಿಗಲಿದೆ.

ಕರ್ಕಟಕ ರಾಶಿ :

ಇದು ಗುರುವಿನ ಉಚ್ಚಸ್ಥಾನದ ರಾಶಿಯಾಗಿದೆ. ರಾಶಿ ಚಕ್ರದ ನಾಲ್ಕನೇ ರಾಶಿಯೂ ಹೌದು. ಏಕಾದಶ ಸ್ಥಾನವು ನಿಮ್ಮ ಪರಿಶ್ರಮದಿಂದ ಸಿಗುವ ಸಂಪತ್ತಿನ ಸ್ಥಾನವಾಗಿದೆ. ಉದ್ಯಮಗಳಲ್ಲಿ ನಡೆಸುತ್ತಿದ್ದರೆ ಅಧಿಕ ಹಣದ ಹರಿವು ಇರಲಿದೆ. ಅಷ್ಟು ಮಾತ್ರವಲ್ಲದೇ ಉದ್ಯಮದ ವಿಸ್ತಾರವನ್ನೂ ಮಾಡಲು ಅವಕಾಶವು ಪ್ರಾಪ್ತವಾಗುವುದು. ಹೈನು ಉದ್ಯಮ, ಕೃಷಿ, ಆಲಂಕಾರಿಕ ವಿಚಾರಕ್ಕೆ ಸಂಬಂಧಿಸಿದ ಉದ್ಯಮ, ವಿನ್ಯಾಸಕ್ಕೆ ಸಂಬಂಧಿಸಿದ ಕಾರ್ಯಗಳು ಹಾಗೂ ಕಲಾವಿದರು ಹೆಚ್ಚಿ ಸಂಪತ್ತು ಕೀರ್ತಿಯನ್ನು ಪಡೆಯುವರು.

ವೃಶ್ಚಿಕ ರಾಶಿ :

ಇದು ರಾಶಿ ಚಕ್ರದ ಎಂಟನೇ ರಾಶಿಯು ಇದಾಗಿದ್ದು, ಗುರುವಿನ ರಾಶಿಗೆ ಏಳನೇ ರಾಶಿಯಾಗುತ್ತದೆ.‌ ಪರಸ್ಪರರಿಗೂ ಏಳನೇ ರಾಶಿಯಾಗುವುದಿಂದ ಅನೇಕ ಶುಭಫಲವನ್ನು ಈ ರಾಶಿಯವರು ಪಡೆಯುವರು. ಅವಿವಾಹಿತರಿಗೆ ವಿವಾಹಯೋಗವು ಬರುವುದು.‌ ಒಳ್ಳೆಯ ಕುಲದ ವಧೂ ಅಥವಾ ವರರು ಸಿಗಲಿದ್ದಾರೆ. ದಾಂಪತ್ಯದಲ್ಲಿ ಕಲಹಗಳು ಇದ್ದಿದ್ದರೆ, ಅದು ಅನ್ಯೋನ್ಯತೆಯನ್ನು ಕಾಣಲಿವೆ. ಮನಸ್ಸು ಪರಿವರ್ತನೆ ಆಗುವುದು.

ಇದನ್ನೂ ಓದಿ: ಗುರುವಿನ ಪರಿವರ್ತನೆಯಿಂದ ಯಾರಿಗೆ ಈ ವರ್ಷ ಅನುಕೂಲವಿದೆ? ಯಾವ ರಾಶಿಗೆ ಗುರುಬಲ?

ಮಕರ ರಾಶಿ :

ಇದು ರಾಶಿ ಚಕ್ರದ ಹತ್ತನೇ ರಾಶಿಯಾಗಲಿದೆ. ಗುರುವಿನ ಸ್ಥಾನದಿಂದ ಇದು ಒಂಭತ್ತನೇ ರಾಶಿಯೂ ಆಗುವುದು. ಇದು ಗೌರವ ಸ್ಥಾನಮಾನಗಳು ಪ್ರಾಪ್ತಿಯಾಗುವ ಸ್ಥಾನವಾಗಿದೆ. ಬೇರೆ ಬೇರೆ ಕಡೆಗಳಿಂದ‌ ಸಮ್ಮಾನಗಳು ಆಗುವುದು. ಹಿರಿಯರ ಆಶೀರ್ವಾದವನ್ನು ಪಡೆಯುವಿರಿ. ಪೂರ್ವಪುಣ್ಯವು ಫಲಿಸುವ ವರ್ಷವು ಇದಾಗಲಿದೆ. ಇಷ್ಟು ದಿನ ಉಂಟಾದ ದುಃಖಕ್ಕೆ ಸಂತೋಷದ ಹೂ ಮಳೆ ನಿಮ್ಮ ಪಾಲಿಗೆ ಸಿಗಲಿದ್ದು, ಬಯಸಿದ್ದನ್ನು ಅನಾಯಾಸವಾಗಿ ಪಡೆದುಕೊಳ್ಳುವಿರಿ.‌ ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯಿತ್ತಿರುವುದು ನಿಮ್ಮ ನೆಮ್ಮದಿಯನ್ನು ಇಮ್ಮಡಿ ಮಾಡುವುದು.

ಇಷ್ಟು ರಾಶಿಯವರು ಈ ವರ್ಷದ ಹೆಚ್ಚು ಸುಖಿಗಳು, ಸಂಪತ್ತಿನಿಂದ ಕೂಡಿದವರು.

– ಲೋಹಿತ ಹೆಬ್ಬಾರ್, ಇಡುವಾಣಿ

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​:FSL ವರದಿಯನ್ನೇ ತಿರುಚಿದ ಗ್ಯಾಂಗ್!
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?