AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Venus Transit: ಶುಕ್ರನ ಸಂಚಾರದಿಂದ ಯಾವ ರಾಶಿಯ ಜನರಿಗೆ ತೊಂದರೆ, ಪರಿಹಾರವೇನು?

ಶುಕ್ರನು ಸದ್ಯ ಇರುವುದು ಪುನರ್ವಸು ನಕ್ಷತ್ರದಲ್ಲಿ. ಮುಂದೆ ಸಂಚಾರ ಮಾಡಲಿರುವ ನಕ್ಷತ್ರ ಪುಷ್ಯಾ. ಪುನರ್ವಸು ನಕ್ಷತ್ರದ ಗ್ರಹ ಗುರು. ಪುಷ್ಯಾ ನಕ್ಷತ್ರದ ಗ್ರಹ ಶನಿ.‌ ಗುರುವಿಗೆ ಶುಕ್ರ ಶತ್ರು, ಶುಕ್ರನಿಗೆ ಗುರುವು ಸಮಾನ. ಇನ್ನು ಶುಕ್ರನಿಗೆ ಶನಿಯು ಮಿತ್ರ, ಶನಿಗೆ ಶುಕ್ರನು ಮಿತ್ರ. ಈ ಶತ್ರುತ್ವ ಮಿತ್ರತ್ವಗಳು ಮನುಷ್ಯನ ಮೇಲೆ ಪರಿಣಾಮ ಉಟುಮಾಡುತ್ತವೆ.

Venus Transit: ಶುಕ್ರನ ಸಂಚಾರದಿಂದ ಯಾವ ರಾಶಿಯ ಜನರಿಗೆ ತೊಂದರೆ, ಪರಿಹಾರವೇನು?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 09, 2024 | 10:41 AM

Share

ಜ್ಯೋತಿಷ್ಯದಲ್ಲಿ ಶುಕ್ರನು ಮಹತ್ತ್ವವುಳ್ಳ ಗ್ರಹ. ಶುಭಫಲವನ್ನು ನೀಡುವಲ್ಲಿ ಶುಕ್ರ ಗ್ರಹದ ಸ್ಥಾನ ದೊಡ್ಡದು. ಮುಖ್ಯ ಶುಕ್ರನು ಸುಖವನ್ನು, ಸಂತೋಷವನ್ನು ನೀಡುತ್ತಾನೆ. ಸೌಂದರ್ಯ ಆಕರ್ಷಣೆ ಇವುಗಳಿಗೆ ಶುಕ್ರನೇ ಮೂಲ. ಪ್ರೇಮ, ಕಾಮ ಇವುಗಳು ಶುಕ್ರನ ಅನುಕೂಲದಿಂದ ಆಗುತ್ತವೆ. ಆತ ಉತ್ತಮ ರಾಶಿಯಲ್ಲಿ ಇದ್ದರೆ ಶುಭವಾದ ಫಲವನ್ನೇ ನೀಡುವನು. ನೀಚನಾದರೆ ಸುಖದ ಸ್ಥಾನದಲ್ಲಿ ದುಃಖ, ಅಸಮಾಧಾನವನ್ನು ಕೊಡಿಸುವನು.

ಇಂತಹ ಶುಕ್ರನು ಸದ್ಯ ಇರುವುದು ಪುನರ್ವಸು ನಕ್ಷತ್ರದಲ್ಲಿ. ಮುಂದೆ ಸಂಚಾರ ಮಾಡಲಿರುವ ನಕ್ಷತ್ರ ಪುಷ್ಯಾ. ಪುನರ್ವಸು ನಕ್ಷತ್ರದ ಗ್ರಹ ಗುರು. ಪುಷ್ಯಾ ನಕ್ಷತ್ರದ ಗ್ರಹ ಶನಿ.‌

ಗುರುವಿಗೆ ಶುಕ್ರ ಶತ್ರು, ಶುಕ್ರನಿಗೆ ಗುರುವು ಸಮಾನ. ಇನ್ನು ಶುಕ್ರನಿಗೆ ಶನಿಯು ಮಿತ್ರ, ಶನಿಗೆ ಶುಕ್ರನು ಮಿತ್ರ. ಈ ಶತ್ರುತ್ವ ಮಿತ್ರತ್ವಗಳು ಮನುಷ್ಯನ ಮೇಲೆ ಪರಿಣಾಮ ಉಟುಮಾಡುತ್ತವೆ.

ತುಲಾ ರಾಶಿ :

ಶುಕ್ರನ ಅವಕೃಪೆ ಇರುವ ರಾಶಿ ಇದು. ಈ ರಾಶಿಗೆ ಶುಕ್ರನೇ ಅಧಿಪತಿಯಾದರೂ, ವರ್ತಮಾನದ ಶುಕ್ರನಿಂದ ನಾಲ್ಕನೇ ರಾಶಿಯು ತುಲಾರಾಶಿ. ವಿಶಾಖಾ ನಕ್ಷತ್ರವು ಇದೇ ರಾಶಿಯಲ್ಲಿ ಇರುವುದು. ಹಾಗಾಇ ವಿಶಾಖಾ ನಕ್ಷತ್ರದ ತುಲಾರಾಶಿಯವರಿಗೆ ವೈಮನಸ್ಯ, ಏನೋ ಚಿಂತೆಯಲ್ಲಿ ಇರುವರು. ಎಲ್ಲವನ್ನೂ ಆಪಾರ್ಥ ಮಾಡಿಕೊಳ್ಳುವುದು ಹೆಚ್ಚು. ಸಂತೋಷದಿಂದ ಇರುವ ಸಂದರ್ಭದಲ್ಲಿಯೂ ಸಂಕಟಪಡುವಿರಿ. ನಿಮಗೆ ಏನೋ ಆದಂತೆ ಕಾಣಿಸುವುದು.

ವೃಶ್ಚಿಕ ರಾಶಿ :

ವಿಶಾಖಾ ನಕ್ಷತ್ರಕ್ಕೆ ಈ ರಾಶಿಯೂ ಬರು ಕಾರಣ ವೃಶ್ಚಿಕ ರಾಶಿಯವರೂ ಮಕ್ಕಳಿಂದ ತೊಂದರೆ, ಸಂತೋಷಪಡಲಾಗದು. ವಿದ್ಯಾಭ್ಯಾಸದಲ್ಲಿ ಏಕಾಗ್ರವಾಗಿ ಇರುವುದು ಕಷ್ಟ.‌ ಮನಸ್ಸು ಕ್ಷಣ ಕ್ಷಣಕ್ಕೂ ಚಂಚಲವಾಗುವುದು.

ಕುಂಭ ರಾಶಿ :

ಪೂರ್ವಾಷಾಢಾ ನಕ್ಷತ್ರದ ರಾಶಿಯು ಇದೆ ಆಗಿದೆ. ಇದರ ಗ್ರಹವೂ ಗುರು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಕಫಕ್ಕೆ ಸಂಬಂಧಿಸಿದ ರೋಗದಿಂದ ಬಳಲುವಿರಿ. ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸದೇ ಇರುವಿರಿ. ಆಲಂಕಾರಿಕ ವಸ್ತುಗಳ ಬಗ್ಗೆ ಮನಸ್ಸು ಇರದು.

ಇದನ್ನೂ ಓದಿ: ಎಂಟು ತಿಂಗಳ ನಂತರ ರಾಹುವಿನ ಸ್ಥಾನ ಬದಲು..! ಯಾರಿಗೆ ರಾಹುವಿನಿಂದ ಶುಭ ಫಲ..?

ಮೀನ ರಾಶಿ :

ಸ್ತ್ರೀಯರಿಂದ ಅಗೌರವ ಸಾಧ್ಯತೆ ಇದೆ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವಿರಿ. ಧನಾತ್ಮಕ ಚಿಂತೆನೆಯಲ್ಲೂ ಋಣಾತ್ಮಕತೆ ನಿಮಗೆ ಹೆಚ್ಚು ಕಾಣಿಸುವುದು. ಐಷಾರಾಮಿ ವಸ್ತುಗಳಿದ್ದರೂ ಅದನ್ನು ಬಳಸಲು ಮನಸ್ಸು ಇರದು ಅಥವಾ ಬಳಸಲಾಗದು.

ಹೀಗೆ ಶುಕ್ರನು ಈ ನಾಲ್ಕು ರಾಶಿಯವರಿಗೆ ಅಶುಭವನ್ನು ಮಾಡುವನು. ದೇವಿಯ ಅನುಗ್ರಹದಿಂದ ನಿಮ್ಮ ವ್ಯಾಕುಲತೆಯನ್ನು ನೀಗಿಸಿಕೊಂಡು ಕಾರ್ಯದಲ್ಲಿ ಯಶಸ್ಸು ಪಡೆಯಬಹುದು. ದೇವಿಗೆ ಕುಂಕುಮಾರ್ಚನೆಯ ಸೇವೆ ನೀಡಿ.

ಹಿಮಕುಂದಮೃಣಾಲಾಭಂ

ದೈತ್ಯಾನಾಂ ಪರಮಂ ಗುರುಮ್ |

ಸರ್ವಶಾಸ್ತ್ರಪ್ರವಕ್ತಾರಂ

ಭಾರ್ಗವಂ ಪ್ರಣಮಾಮ್ಯಹಮ್ ||

ಈ ಸ್ತೋತ್ರವನ್ನು ಪಠಿಸಿ.

-ಲೋಹಿತ ಹೆಬ್ಬಾರ್8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Tue, 9 July 24

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ