ಬೆಂಗಳೂರಿಂದ ಹೊರರಾಜ್ಯಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್​ಗೆ ಬಂದ ಪ್ರಯಾಣಿಕರಿಗೆ ಶಾಕ್ ಆಗಿದೆ. ಯಾಕಂದ್ರೆ ವಿವಿಧ ರಾಜ್ಯಗಳಿಗೆ ಹೋಗಲು ಬೆಳಗ್ಗೆಯೇ ಏರ್‌ಪೋರ್ಟ್​ಗೆ ಬಂದಿದ್ದ ಪ್ರಯಾಣಿಕರು ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್, ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ. ಹಲವು ತಾಂತ್ರಿಕ ಕಾರಣಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾಗಿವೆ. ಫ್ಲೈಟ್​ಗಾಗಿ ಬೆಳ್ಳಂ ಬೆಳಗ್ಗೆ ಆಗಮಿಸಿರುವ ಪ್ರಯಾಣಿಕರು ಏರ್‌ಪೋರ್ಟ್​ನಲ್ಲೇ ಕಾಯುವಂತಾಗಿದೆ. ಇನ್ನು […]

ಬೆಂಗಳೂರಿಂದ ಹೊರರಾಜ್ಯಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್

Updated on: May 28, 2020 | 2:46 PM

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್​ಗೆ ಬಂದ ಪ್ರಯಾಣಿಕರಿಗೆ ಶಾಕ್ ಆಗಿದೆ. ಯಾಕಂದ್ರೆ ವಿವಿಧ ರಾಜ್ಯಗಳಿಗೆ ಹೋಗಲು ಬೆಳಗ್ಗೆಯೇ ಏರ್‌ಪೋರ್ಟ್​ಗೆ ಬಂದಿದ್ದ ಪ್ರಯಾಣಿಕರು ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್, ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ.

ಹಲವು ತಾಂತ್ರಿಕ ಕಾರಣಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾಗಿವೆ. ಫ್ಲೈಟ್​ಗಾಗಿ ಬೆಳ್ಳಂ ಬೆಳಗ್ಗೆ ಆಗಮಿಸಿರುವ ಪ್ರಯಾಣಿಕರು ಏರ್‌ಪೋರ್ಟ್​ನಲ್ಲೇ ಕಾಯುವಂತಾಗಿದೆ.

ಇನ್ನು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಅಂತಾರಾಜ್ಯದಿಂದ KIABಗೆ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಮುಂಬೈ, ದೆಹಲಿ, ಗೋವಾ, ಕೋಲ್ಕತ್ತಾ, ಇಂದೋರ್, ಹೈದರಾಬಾದ್, ಜೈಪುರದಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ.

Published On - 8:49 am, Thu, 28 May 20