ಬೆಂಗಳೂರಿಂದ ಹೊರರಾಜ್ಯಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್​ಗೆ ಬಂದ ಪ್ರಯಾಣಿಕರಿಗೆ ಶಾಕ್ ಆಗಿದೆ. ಯಾಕಂದ್ರೆ ವಿವಿಧ ರಾಜ್ಯಗಳಿಗೆ ಹೋಗಲು ಬೆಳಗ್ಗೆಯೇ ಏರ್‌ಪೋರ್ಟ್​ಗೆ ಬಂದಿದ್ದ ಪ್ರಯಾಣಿಕರು ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್, ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ. ಹಲವು ತಾಂತ್ರಿಕ ಕಾರಣಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾಗಿವೆ. ಫ್ಲೈಟ್​ಗಾಗಿ ಬೆಳ್ಳಂ ಬೆಳಗ್ಗೆ ಆಗಮಿಸಿರುವ ಪ್ರಯಾಣಿಕರು ಏರ್‌ಪೋರ್ಟ್​ನಲ್ಲೇ ಕಾಯುವಂತಾಗಿದೆ. ಇನ್ನು […]

ಬೆಂಗಳೂರಿಂದ ಹೊರರಾಜ್ಯಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್
ಆಯೇಷಾ ಬಾನು

Updated on: May 28, 2020 | 2:46 PM

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಏರ್‌ಪೋರ್ಟ್​ಗೆ ಬಂದ ಪ್ರಯಾಣಿಕರಿಗೆ ಶಾಕ್ ಆಗಿದೆ. ಯಾಕಂದ್ರೆ ವಿವಿಧ ರಾಜ್ಯಗಳಿಗೆ ಹೋಗಲು ಬೆಳಗ್ಗೆಯೇ ಏರ್‌ಪೋರ್ಟ್​ಗೆ ಬಂದಿದ್ದ ಪ್ರಯಾಣಿಕರು ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್, ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ.

ಹಲವು ತಾಂತ್ರಿಕ ಕಾರಣಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾಗಿವೆ. ಫ್ಲೈಟ್​ಗಾಗಿ ಬೆಳ್ಳಂ ಬೆಳಗ್ಗೆ ಆಗಮಿಸಿರುವ ಪ್ರಯಾಣಿಕರು ಏರ್‌ಪೋರ್ಟ್​ನಲ್ಲೇ ಕಾಯುವಂತಾಗಿದೆ.

ಇನ್ನು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಅಂತಾರಾಜ್ಯದಿಂದ KIABಗೆ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಮುಂಬೈ, ದೆಹಲಿ, ಗೋವಾ, ಕೋಲ್ಕತ್ತಾ, ಇಂದೋರ್, ಹೈದರಾಬಾದ್, ಜೈಪುರದಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ.

Published On - 8:49 am, Thu, 28 May 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us