AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಬ್ಲಿಘಿ, ಅಜ್ಮೀರ್ ಧೂರ್ತರಿಂದ ಭಾನುವಾರ ರಾಜ್ಯದಲ್ಲಿ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ ಎಷ್ಟು?

ಬೆಂಗಳೂರು: ತಬ್ಲಿಘಿ ಭೂತಗಳು ಅಹಮದಾಬಾದ್​ನಿಂದ ಹಾರಿ ಬಂದು ಸೀದ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲೇ 7 ಮಂದಿಯ ಶಿಕಾರಿ ಮಾಡಿ, ಇನ್ನೂ ಒಂದಿರಲಿ ಎಂದು ಪಕ್ಕದ ತೀರ್ಥಹಳ್ಳಿಗೂ ಕೊಡುಗೆ ನೀಡಿದ್ದಾರೆ. ಧೂರ್ತರು ಒಟ್ಟಾರೆಯಾಗಿ ರಾಜ್ಯದಲ್ಲಿ 39 ಪ್ರಕರಣಗಳನ್ನು ಕೊಡಗೆಯಾಗಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗವನ್ನು ತಬ್ಲಿಘಿ ಕಂಟಕರು ಹೀಗೆ ರೆಡ್ ಜೋನ್​ಗೆ ತಳ್ಳಿದ್ದಾರೆ. ಇಂದು ಭಾನುವಾರ ತಬ್ಲಿಘಿ ಮತ್ತು ಅಜ್ಮೀರ್ ಧೂರ್ತರಿಂದಾಗಿ ರಾಜ್ಯದ ಇತರೆಡೆ ಅಂದ್ರೆ ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 8, ಶಿವಮೊಗ್ಗ 8, ದಾವಣೆಗೆರೆಯಲ್ಲಿ […]

ತಬ್ಲಿಘಿ, ಅಜ್ಮೀರ್ ಧೂರ್ತರಿಂದ ಭಾನುವಾರ ರಾಜ್ಯದಲ್ಲಿ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ ಎಷ್ಟು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 10, 2020 | 2:36 PM

Share

ಬೆಂಗಳೂರು: ತಬ್ಲಿಘಿ ಭೂತಗಳು ಅಹಮದಾಬಾದ್​ನಿಂದ ಹಾರಿ ಬಂದು ಸೀದ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲೇ 7 ಮಂದಿಯ ಶಿಕಾರಿ ಮಾಡಿ, ಇನ್ನೂ ಒಂದಿರಲಿ ಎಂದು ಪಕ್ಕದ ತೀರ್ಥಹಳ್ಳಿಗೂ ಕೊಡುಗೆ ನೀಡಿದ್ದಾರೆ. ಧೂರ್ತರು ಒಟ್ಟಾರೆಯಾಗಿ ರಾಜ್ಯದಲ್ಲಿ 39 ಪ್ರಕರಣಗಳನ್ನು ಕೊಡಗೆಯಾಗಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗವನ್ನು ತಬ್ಲಿಘಿ ಕಂಟಕರು ಹೀಗೆ ರೆಡ್ ಜೋನ್​ಗೆ ತಳ್ಳಿದ್ದಾರೆ.

ಇಂದು ಭಾನುವಾರ ತಬ್ಲಿಘಿ ಮತ್ತು ಅಜ್ಮೀರ್ ಧೂರ್ತರಿಂದಾಗಿ ರಾಜ್ಯದ ಇತರೆಡೆ ಅಂದ್ರೆ ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 8, ಶಿವಮೊಗ್ಗ 8, ದಾವಣೆಗೆರೆಯಲ್ಲಿ 1 ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ವರದಿಯಾದ 53 ರ ಪೈಕಿ 39 ಸೋಂಕು ಇವರದ್ದೇ ಕೊಡುಗೆಯಾಗಿದೆ.

ಕುಂದಾನಗರಿಯಲ್ಲಿ ಒಂದೇ ದಿನ 22 ಜನರಿಗೆ ಸೋಂಕು: ಕುಂದಾನಗರಿ ಬೆಳಗಾವಿಗೆ ಕೊರೊನಾ ಕಂಟಕ ಶುರುವಾಗಿದೆ. ಇವತ್ತು ಒಂದೇ ದಿನ 22 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ ಸೋಂಕಿತ ಸಂಖ್ಯೆ ಶತಕದ ಗಡಿ ದಾಟಿ 105ಕ್ಕೆ ಏರಿಕೆಯಾಗಿದೆ.

ಅಜ್ಮೀರ್‌ ದರ್ಗಾಕ್ಕೆ ಹೋಗಿ ಬಂದಿದ್ದವರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮಾರ್ಚ್17ರಂದು 38 ಜನರು ಬಸ್ ಮಾಡಿಕೊಂಡು ಅಜ್ಮೀರಕ್ಕೆ ಹೋಗಿದ್ದರು. ನಂತರ ಮೇ 2ರಂದು ಖಾಸಗಿ ಬಸ್‌ನಲ್ಲಿ ಕಳ್ಳ ದಾರಿಯಲ್ಲಿ ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆ.

ಈ ವೇಳೆ ಮಹಾರಾಷ್ಟ್ರ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬಿಡದ ಹಿನ್ನೆಲೆಯಲ್ಲಿ ಕಣ್ತಪ್ಪಿಸಿ ಬೆಳಗಾವಿ ಜಿಲ್ಲೆಯ ಒಳಗೆ ನುಸುಳಿದ್ದರು. ನಂತರ ನಿಪ್ಪಾಣಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಜಿಲ್ಲಾಡಳಿತದ ನಿಪ್ಪಾಣಿಯಲ್ಲಿ 38ಜನರನ್ನು ಕ್ವಾರಂಟೈನ್ ಮಾಡಿದ್ದರು.

ಸದ್ಯ 38 ಜನರ ಪರೀಕ್ಷಾ ವರದಿ ಬಂದಿದ್ದು, 38ರ ಪೈಕಿ ಬೆಳಗಾವಿಯ 22 ಮಂದಿಗೆ ಹಾಗೂ ಬಾಗಲಕೋಟೆ 8 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾಹಿತಿ ನೀಡಿದ್ದಾರೆ. ಅಜ್ಮೀರ್​ಗೆ ಹೋದವರ ಪೈಕಿ ಎಂಟು ಜನ ಬಾಗಲಕೋಟೆ, ಮೂವತ್ತು ಜನ ಬೆಳಗಾವಿ ಜಿಲ್ಲೆಯವರಾಗಿದ್ದರು. ಅಜ್ಮೀರ್​ಗೆ ಹೋಗಿದ್ದ ಬಾಗಲಕೋಟೆಯ 8 ಮಂದಿಗೆ ಸೊಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

Published On - 1:37 pm, Sun, 10 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು