ಆಪ್ತನ ಮನೆಯಲ್ಲಿ ಕಾಲ‌ ಕಳೆಯುತ್ತಿರೋ ರಾಮುಲು: ಸಂಜೆ ಸಿಎಂ ಭೇಟಿ, ರಾಜೀನಾಮೆ?

ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು. ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ. ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು […]

ಆಪ್ತನ ಮನೆಯಲ್ಲಿ ಕಾಲ‌ ಕಳೆಯುತ್ತಿರೋ ರಾಮುಲು: ಸಂಜೆ ಸಿಎಂ ಭೇಟಿ, ರಾಜೀನಾಮೆ?
ಸಚಿವ ಬಿ.ಶ್ರೀರಾಮುಲು
ಸಾಧು ಶ್ರೀನಾಥ್​

Updated on: Oct 12, 2020 | 4:19 PM

ದೇವನಹಳ್ಳಿ: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಬಿ. ಶ್ರೀರಾಮುಲು ತೀವ್ರ ಬೇಸರಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ಶ್ರೀರಾಮುಲು ಖಾತೆ ಬದಲಾವಣೆಯನ್ನು ಪಕ್ಕಾ ಮಾಡುತ್ತಿದ್ದಂತೆ ಸಿಎಂ ನಿವಾಸಕ್ಕೆ ರಾಮುಲು ದೌಡಾಯಿಸಿದ್ದರು.

ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮಲ್ಲಿ ದುಗುಡ ತುಂಬಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ, ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ.

ಆದ್ರೆ ಅದಾಗುತ್ತಿದ್ದಂತೆ ಸೀದಾ ಬೆಂಗಳೂರು ಉತ್ತರದತ್ತ ಮುಖ ಮಾಡಿದ ಶ್ರೀರಾಮುಲು ಚಿಕ್ಕಜಾಲ ಬಳಿಯಿರುವ ತಮ್ಮ ಆಪ್ತನ ಮನೆಗೆ ತೆರಳಿದರು. ಅಲ್ಲಿ ಸಚಿವ ಸ್ಥಾನದ ಅದಲುಬದಲು ಬೇಸರದಲ್ಲಿ ಮನೆಯಲ್ಲೇ ಕಾಲ‌ ಕಳೆಯುತ್ತಿದ್ದಾರೆ ರಾಮುಲು. ಮನೆಯ ಕೊಣೆಯಲ್ಲಿ ಒಂಟಿಯಾಗಿರೋ ರಾಮುಲು, ಆಪ್ತರು ಸೇರಿದಂತೆ ಯಾರಿಗೂ ಒಳಬಾರದಂತೆ ಸೂಚಿಸಿ ಒಂಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಸಂಜೆ ಸಿಎಂ ಭೇಟಿ, ರಾಜೀನಾಮೆ?
ತಮ್ಮ ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂಪಡೆದ ಹಿನ್ನೆಲೆ ತೀವ್ರ ನಿರಾಶೆಗೊಂಡಿರುವ ಸಚಿವ ಬಿ. ಶ್ರೀರಾಮುಲು ಇಂದು ಸಂಜೆ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆ ವೇಳೆ, ಅತೃಪ್ತಿ ಶಮನವಾಗದಿದ್ದರೆ ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Published On - 3:43 pm, Mon, 12 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us