ಕಸ ಹಾಕುವ ವಿಚಾರದಲ್ಲಿ ಕಿರಿಕ್: ರಾಡ್​ನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಕೊಡಗು: ಕಸ ಹಾಕುವ ವಿಚಾರದಲ್ಲಿ 2 ಅಂಗಡಿ ಮಾಲೀಕರು ಕಿರಿಕ್ ಮಾಡಿಕೊಂಡು ಓರ್ವ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಎರಡು ಅಂಗಡಿ ಮಧ್ಯೆ‌‌ ಕಸ ಹಾಕೋ‌ ವಿಚಾರದಲ್ಲಿ ಮೊದಲಿಗೆ ಜಗಳ ಶುರುವಾಗಿದೆ. ಆಗ ಎರಡು ಅಂಗಡಿ‌ ಮಾಲೀಕರ ನಡುವೆ ಗಲಾಟೆಯಾಗಿದೆ. ಮಡಿಕೇರಿ ನಗರದ ಕೋಲ್ಡ್ ಸ್ಟೋರೇಜ್ ಅಂಗಡಿ ಮಾಲೀಕ ಅಬೀಬ್​ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಫರ್ನೀಚರ್ ಅಂಗಡಿಯ ಕಲೀಂ, ಸಮೀರ್, ಹರ್ಷದ್, ಸಮೀರ್ ಎಂಬುವರು ಅಬೀಬ್​ ಮೇಲೆ ಮನಬಂದಂತೆ ಹಲ್ಲೆ […]

ಕಸ ಹಾಕುವ ವಿಚಾರದಲ್ಲಿ ಕಿರಿಕ್: ರಾಡ್​ನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ
ಸಾಧು ಶ್ರೀನಾಥ್​

Updated on: Dec 23, 2019 | 12:24 PM

ಕೊಡಗು: ಕಸ ಹಾಕುವ ವಿಚಾರದಲ್ಲಿ 2 ಅಂಗಡಿ ಮಾಲೀಕರು ಕಿರಿಕ್ ಮಾಡಿಕೊಂಡು ಓರ್ವ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಎರಡು ಅಂಗಡಿ ಮಧ್ಯೆ‌‌ ಕಸ ಹಾಕೋ‌ ವಿಚಾರದಲ್ಲಿ ಮೊದಲಿಗೆ ಜಗಳ ಶುರುವಾಗಿದೆ. ಆಗ ಎರಡು ಅಂಗಡಿ‌ ಮಾಲೀಕರ ನಡುವೆ ಗಲಾಟೆಯಾಗಿದೆ.

ಮಡಿಕೇರಿ ನಗರದ ಕೋಲ್ಡ್ ಸ್ಟೋರೇಜ್ ಅಂಗಡಿ ಮಾಲೀಕ ಅಬೀಬ್​ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಫರ್ನೀಚರ್ ಅಂಗಡಿಯ ಕಲೀಂ, ಸಮೀರ್, ಹರ್ಷದ್, ಸಮೀರ್ ಎಂಬುವರು ಅಬೀಬ್​ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us