AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬ ಮಿನಿಸ್ಟರ್ PA ಆಗಿ.. ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ? -ಸಚಿವ ಅಶೋಕ್​ PA ವಿರುದ್ಧ ಅಧಿಕಾರಿಯ ಗಂಭೀರ ಆರೋಪ

ಚೆಲುವರಾಜ್ ಅಶೋಕ್​ PA​ ಗಂಗಾಧರ್​ರನ್ನು ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ ಅಂತಾ ಫುಲ್ ಚಾರ್ಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ಮಿನಿಸ್ಟರ್ PA ಆಗಿ ಲಂಚ ಕೇಳ್ತೀರಾ ಅಂತಾ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಬ್ಬ ಮಿನಿಸ್ಟರ್ PA ಆಗಿ.. ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ? -ಸಚಿವ ಅಶೋಕ್​ PA ವಿರುದ್ಧ ಅಧಿಕಾರಿಯ ಗಂಭೀರ ಆರೋಪ
ಸಚಿವ ಅಶೋಕ್ PA ಗಂಗಾಧರ್​ (ಎಡ); ಸಬ್​ ರೆಜಿಸ್ಟ್ರಾರ್​ ಚೆಲುವರಾಜ್​ (ಬಲ)
KUSHAL V
|

Updated on: Jan 25, 2021 | 7:40 PM

Share

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರ PA ತಮ್ಮ ಬಳಿ ಲಂಚಕ್ಕೆ ಬೇಡಿಕೆಯಿಟ್ಟರು ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಆರೋಪಿಸಿದ್ದಾರೆ. ಸದ್ಯ, ಆರ್.ಅಶೋಕ್ PA ಗಂಗಾಧರ್​ ಸಬ್​ ರೆಜಿಸ್ಟ್ರಾರ್ ಚೆಲುವರಾಜ್ ಜೊತೆ ಈ ಕುರಿತು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಅಶೋಕ್ PA ಗಂಗಾಧರ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಕಂದಾಯ ಸಚಿವ ಆರ್.ಅಶೋಕ್ PA ಗಂಗಾಧರ್ ತಮ್ಮ ಬಳಿ ಎಷ್ಟು ತಂದಿದ್ದೀರಾ? ಕೊಡಿ ಅಂತಾ ಕೇಳಿದ್ದಾರೆ ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಆರೋಪಿಸಿದ್ದಾರೆ.

ಇದಕ್ಕೆ, ಚೆಲುವರಾಜ್ ನನಗೆ ಅಭ್ಯಾಸ ಇಲ್ಲ ಎಂದು ಉತ್ತರಿಸಿದ್ದಾರಂತೆ. ಅದಕ್ಕೆ ಗಂಗಾಧರ್,​ ನಾನು ಹಣ ಕೊಡು ಅಂತಾ ಕೇಳಿಲ್ಲವೆಂದು ಹೇಳಿದರಂತೆ. ಸದ್ಯ, ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಮತ್ತು ಅಶೋಕ್ ಪಿಎ ಗಂಗಾಧರ್​ ನಡುವಿನ ಈ ಸಂಭಾಷಣೆಯ ಆಡಿಯೋ ವೈರಲ್​ ಆಗಿದೆ.

‘ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ’ ಜೊತೆಗೆ ಆಡಿಯೋದಲ್ಲಿ, ಚೆಲುವರಾಜ್ ಅಶೋಕ್​ PA​ ಗಂಗಾಧರ್​ರನ್ನು ಲಂಚ ಕೇಳಲು ನಾಚಿಕೆ ಆಗಲ್ವೇನ್ರೀ ಅಂತಾ ಫುಲ್ ಚಾರ್ಜ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ಮಿನಿಸ್ಟರ್ PA ಆಗಿ ಲಂಚ ಕೇಳ್ತೀರಾ ಅಂತಾ ಕ್ಲಾಸ್ ತಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ನೀವು ಸಚಿವ ಆರ್.ಅಶೋಕ್​ಗೆ ಅಫೀಷಿಯಲ್ PA ಅಲ್ವಾ? ಎಂದು ಮೊಬೈಲ್ ಸಂಭಾಷಣೆಯಲ್ಲಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್​ ಗಂಗಾಧರ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ.

ಇನ್ನು, ಈ ಬಗ್ಗೆ ಶೃಂಗೇರಿ ಸಬ್​​ರಿಜಿಸ್ಟ್ರಾರ್ ಚಲುವರಾಜ್ ಟಿವಿ9ಗೆ ಪ್ರತಿಕ್ರಿಯಿಸಿದ್ದು ಕಾರ್ಯಕ್ರಮವೊಂದು ಮುಗಿದ ಬಳಿಕ ಗಂಗಾಧರ್​ ನನಗೆ ವಾಟ್ಸಾಪ್​ ಕರೆ ಮಾಡಿದ್ದರು. ಬಳಿಕ ಬೆಳಗ್ಗೆ ನಾನು ಕರೆ ಮಾಡಿ ಮಾತಾಡಿದಾಗ ಪ್ಯಾಚ್ ಅಪ್​ ಮಾಡೋಕೆ ಯತ್ನಿಸಿದರು ಎಂದು ಹೇಳಿದ್ದಾರೆ.

ಲಂಚ ಕೇಳಿದ ಬಗ್ಗೆ ಮಾತಾಡದೆ ಪ್ಯಾಚ್ ಅಪ್​ಗೆ ಯತ್ನ​ ಮಾಡಿದರು. ಅದಾದ ಬಳಿಕ R​.ಅಶೋಕ್ PA ಗಂಗಾಧರ್ ನನಗೆ ಕರೆ ಮಾಡಿಲ್ಲ ಎಂದು ಸಬ್​ ರೆಜಿಸ್ಟ್ರಾರ್​ ಚೆಲುವರಾಜ್​ ಟಿವಿ9ಗೆ ಹೇಳಿದ್ದಾರೆ.

ಪರೀಕ್ಷೆಗೂ ಮುನ್ನ FDA ಆನ್ಸರ್ ಕೀ ಸೋರಿಕೆ ಪ್ರಕರಣ: BE ಮುಗಿಸಿ ನೇರವಾಗಿ SDA ಹುದ್ದೆಗೆ ಸೇರಿದ್ದ ರಮೇಶ್​ ಹೆರಕಲ್​

Follow Us
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ