ಪ್ರಯಾಣಿಕ ಬಿಟ್ಟು ಹೋದ ಹಣ, ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಪ್ರಯಾಣಿಕರೊಬ್ಬರು15 ಗ್ರಾಂ ಚಿನ್ನ ಹಾಗೂ 2,508 ರೂಪಾಯಿ ಇದ್ದ ಪರ್ಸನ್ನು ಆಟೋದಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಚಾಲಕ ಜಗದೀಶ ಟಿ.ಆರ್. ಪೊಲೀಸರಿಗೆ ಎಲ್ಲಾ ವಸ್ತುಗಳನ್ನು ವಾಪಸ್ ನೀಡಿದ್ದಾರೆ.

ದಾವಣಗೆರೆ: ಸುಮ್ಮನೆ ನಡೆದು ಹೋಗುವಾಗ ಕಣ್ಣ ಮುಂದೆ ಐದು ರೂಪಾಯಿ ಸಿಕ್ಕರೇನೆ ಜನ ಬಿಡಲ್ಲ. ಅಂತಹುದರಲ್ಲಿ ಪ್ರಯಾಣಿಕರೊಬ್ಬರು ಆಟೋದಲ್ಲಿ ಮರೆತು ಹೋಗಿದ್ದ ಹಣ ಮತ್ತು ಒಡವೆಯನ್ನು ಚಾಲಕ ಹಿಂತಿರುಗಿಸಿರುವ ಘಟನೆ ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿ ನಡೆದಿದೆ. ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋದ ಪರ್ಸ್ ಪೊಲೀಸ್ ಠಾಣೆಗೆ ನೀಡಿ ದಾವಣಗೆರೆ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಯಾಣಿಕರೊಬ್ಬರು 15 ಗ್ರಾಂ ಚಿನ್ನ ಹಾಗೂ 2,508 ರೂಪಾಯಿ ಇದ್ದ ಪರ್ಸನ್ನು ಆಟೋದಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಚಾಲಕ ಜಗದೀಶ ಟಿ.ಆರ್. ಅವರು ಪೊಲೀಸರಿಗೆ ಎಲ್ಲಾ ವಸ್ತುಗಳನ್ನು ವಾಪಸ್ ನೀಡಿದ್ದಾರೆ. ಪ್ರಾಮಾಣಿಕತೆ ಮೆರೆದ ಆಟೋ ಚಾಲಕನ ಕಾರ್ಯ ಮೆಚ್ಚಿದ ಎಸ್ಪಿ ಹನುಮಂತರಾಯರವರು ಜಗದೀಶ್ರಿಗೆ ಸನ್ಮಾನ ಮಾಡಿದ್ದಾರೆ. ಇನ್ನು ವಾರಸುದಾರರ ಪತ್ತೆ ಹಚ್ಚಿ ಬಡಾವಣೆ ಠಾಣೆ ಪೊಲೀಸರು ಪರ್ಸ್ ತಲುಪಿಸಿದ್ದಾರೆ. ಈ ರೀತಿ ಪ್ರಾಮಾಣಿಕತೆ ಮೆರೆಯುವ ಮಂದಿ ತೀರ ಕಡಿಮೆ.
ಇದನ್ನೂ ಓದಿ: ಪ್ರಯಾಣಿಕನ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
(Auto Driver Returns Purse With Money and Gold to Passenger in Davangere)