AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್; ಬಾಗಲಕೋಟೆಯ ಯುವಕನ ಬಂಧನ

ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ 27 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಠಾಣೆ ಪೊಲೀಸರು ಮಹಮ್ಮದ್ ಅಜೀಜ್ ರೋಣ ಎಂಬಾತನನ್ನು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಜೈಲಲ್ಲಿ ಬಂಧಿಸಿದ ರೀತಿಯಲ್ಲಿ ಆ ಯುವಕ ಫೋಟೋವನ್ನು ಎಡಿಟ್ ಮಾಡಿದ್ದ. ಹೀಗಾಗಿ, ಇದು ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್; ಬಾಗಲಕೋಟೆಯ ಯುವಕನ ಬಂಧನ
Pm Modi
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸುಷ್ಮಾ ಚಕ್ರೆ|

Updated on: May 22, 2025 | 6:36 PM

Share

ಬಾಗಲಕೋಟೆ, ಮೇ 22: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ 103 ಅಮೃತ ಸ್ಟೇಷನ್​ಗಳಲ್ಲಿ ಬಾಗಲಕೋಟೆಯ ರೈಲ್ವೆ ನಿಲ್ದಾಣವೂ ಒಂದು. ಇದರ ನಡುವೆ ಮೋದಿಯ ಫೋಟೋವನ್ನು ಎಡಿಟ್ ಮಾಡಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಬಾಗಲಕೋಟೆಯ ಕಲಾದಗಿ ಪಟ್ಟಣದಲ್ಲಿ ಮೊಹಮ್ಮದ್ ಅಜೀಜ್ ರೋಣ ಎಂಬ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್​ ಹಾಕಿದ್ದ ಮೊಹಮ್ಮದ್​ ಅಜೀಜ್​ ರೋಣ ಎಂಬ 27 ವರ್ಷದ ಯುವಕನನ್ನು ಕಲಾದಗಿ ಪೊಲೀಸರು ಬಂಧಿಸಿದ್ದಾರೆ. ಮೋದಿ ಫೋಟೋ ಎಡಿಟ್​ ಮಾಡಿ ಅವಹೇಳನಾಕಾರಿ ಪೋಸ್ಟ್​ ಹಾಕಿದ್ದ ಮೊಹಮ್ಮದ್ ಕೇಸರಿ ಬಟ್ಟೆ ಧರಿಸಿದ​ ಪ್ರಧಾನಮಂತ್ರಿ ಮೋದಿ ಅವರನ್ನು ಕೈದಿಯಂತೆ ಜೈಲಿನಲ್ಲಿ ಬಂಧಿಸಿದ ರೀತಿ ಎಡಿಟ್ ಮಾಡಿದ್ದ. ಮೋದಿಯವರ ಮುಂದೆ ಒವೈಸಿ ಪೊಲೀಸ್ ಅಧಿಕಾರಿಯ ವೇಷದಲ್ಲಿ‌ ಕೂತಿರುವ ರೀತಿ ಎಡಿಟ್ ಮಾಡಿದ್ದ. ಈ ಫೋಟೋ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

ಇದನ್ನೂ ಓದಿ: ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ: ನರೇಂದ್ರ ಮೋದಿ

ಇದನ್ನೂ ಓದಿ
Image
ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ: ಮೋದಿ
Image
ಆಂಧ್ರಪ್ರದೇಶ: ಕಾರಿನಲ್ಲಿ ಉಸಿರುಗಟ್ಟಿ ನಾಲ್ಕು ಮಕ್ಕಳ ಧಾರುಣ ಸಾವು
Image
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Image
ಭಾರತದಿಂದ ಪಾಕಿಸ್ತಾನದ ಅಧಿಕಾರಿ ಉಚ್ಛಾಟನೆ; ನಾಳೆಯೊಳಗೆ ದೇಶ ತೊರೆಯಲು ಆದೇಶ

ಈ ಫೋಟೋ ವೈರಲ್ ಆಗುತ್ತಿದ್ದಂತೆ ಮೊಹಮ್ಮದ್​ ಅಜಿಜ್ ಅಬ್ದುಲ್ ಸಾಬ್ ರೋಣ ವಿರುದ್ಧ ಸುಮೋಟೋ ಕೇಸ್ ಹಾಕಿ ಆರೋಪಿಯನ್ನು ಕಲಾದಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್​ ಅಜೀಜ್ ಕಲಾದಗಿ ಪಟ್ಟಣದ ನಿವಾಸಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ