AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ. ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ […]

ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ
ಸಾಧು ಶ್ರೀನಾಥ್​
|

Updated on: Feb 04, 2020 | 12:36 PM

Share

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ.

ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ ಕೊಡೋದ್ರಲ್ಲಿ ಬ್ಯುಸಿಯಾಗಿದ್ರು. ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್ ಹೋಗ್ತಿತ್ತಂತೆ.

ಈ ವೇಳೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್​ ಬೆಂಬಲಿಗ ಅಶೋಕ್ ಬಂಡರಗಲ್ ಬೆಂಬಲಿಗರು ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಬಸ್​ನ್ನ ನಿಲ್ಲಿಸಿ ನಿರ್ವಾಹಕ ಮುರುಗೇಶ್ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಬಳಿಕ ಮುರುಗೇಶ್​​ ಅವರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸ್ತಿದ್ದಾರೆ.

ಇನ್ನು, ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗ ಅಶೋಕ್ ಬಂಡರಗಲ್ ರೌಡಿಶೀಟರ್ ಅಂತೆ. ಜೊತೆಗೆ ಮುರುಗೇಶ್ ಮೇಲೆ ದಾಳಿಯಾಗಿರೋದಕ್ಕೆ ಸಾಕ್ಷಿ ಎಂಬಂತೆ ಬಸ್​ನಲ್ಲಿ ಖಾರದಪುಡಿ ಎಲ್ಲೆಲ್ಲೂ ಚೆಲ್ಲಾಡಿದೆ. ಅಲ್ಲದೇ, ಹಲ್ಲೆಗೊಳಗಾಗಿರೋ ನಿರ್ವಾಹಕ ಮುರುಗೇಶ್ ಹುಲ್ಲಳ್ಳಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಜೊತೆಗೆ ಈ ಹಲ್ಲೆಗೆ ಹಳೆಯ ರಾಜಕೀಯ ದ್ವೇಷವೇ ಕಾರಣ ಎನ್ನಲಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಬೇಕು ಅಂತ ಹಲ್ಲೆಗೊಳಗಾಗಿರೋ ಮುರುಗೇಶ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ಶಾಸಕರ ಬೆಂಬಲಿಗ ಅಂದ್ಕೊಂಡು ಕರ್ತವ್ಯನಿರತ ನಿರ್ವಾಹಕನ ಮೇಲೆ ಹಲ್ಲೆ ಮಾಡಿರೋದು ಖಂಡನೀಯ.

Follow Us
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು