AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ. ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ […]

ಕರ್ತವ್ಯನಿರತ ಕಂಡಕ್ಟರ್ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನ ದರ್ಪ
ಸಾಧು ಶ್ರೀನಾಥ್​
|

Updated on: Feb 04, 2020 | 12:36 PM

Share

ಬಾಗಲಕೋಟೆ: ಬಿಜೆಪಿ ಶಾಸಕನ ಬೆಂಬಲಿಗ ಕರ್ತವ್ಯನಿರತ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಡಕ್ಟರ್ ಮೈತುಂಬಾ ರಕ್ತ ಸೋರ್ತಿದೆ. ತಲೆಗೊಂದು ದೊಡ್ಡ ಬ್ಯಾಂಡೇಜ್ ಬಿದ್ದಿದೆ. ಮೈಮೇಲೆ ಹಾಕಿರೋ ಖಾಕಿ ಶರ್ಟ್ ಕೂಡ ಕಿತ್ತೋಗಿದೆ. ನೋವಿನಲ್ಲೇ ನರಳಾಡ್ತಿದ್ದಾರೆ. ಒಂದ್ ಹೆಜ್ಜೆ ಇಡೋಕು ಆಗದೆ ಕಣ್ಣೀರಿಡ್ತಿದ್ದಾರೆ.

ಕಂಡಕ್ಟರ್ ಮೇಲೆ ಬಿಜೆಪಿ ಶಾಸಕರ ಬೆಂಬಲಿಗನ ರೌಡಿಸಂ! ಅಂದ್ಹಾಗೆ ಹೀಗೆ ನೋವಿನಲ್ಲಿ ನರಳಾಡ್ತಿರೋ ಈತನ ಹೆಸರು ಮುರುಗೇಶ್ ಹುಲ್ಲಳ್ಳಿ. ವೃತ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್ ಆಗಿರೋ ಮುರುಗೇಶ್ ಟಿಕೆಟ್ ಕೊಡೋದ್ರಲ್ಲಿ ಬ್ಯುಸಿಯಾಗಿದ್ರು. ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್ ಹೋಗ್ತಿತ್ತಂತೆ.

ಈ ವೇಳೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್​ ಬೆಂಬಲಿಗ ಅಶೋಕ್ ಬಂಡರಗಲ್ ಬೆಂಬಲಿಗರು ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಬಸ್​ನ್ನ ನಿಲ್ಲಿಸಿ ನಿರ್ವಾಹಕ ಮುರುಗೇಶ್ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಬಳಿಕ ಮುರುಗೇಶ್​​ ಅವರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸ್ತಿದ್ದಾರೆ.

ಇನ್ನು, ಶಾಸಕ ದೊಡ್ಡನಗೌಡ ಪಾಟೀಲ್ ಬೆಂಬಲಿಗ ಅಶೋಕ್ ಬಂಡರಗಲ್ ರೌಡಿಶೀಟರ್ ಅಂತೆ. ಜೊತೆಗೆ ಮುರುಗೇಶ್ ಮೇಲೆ ದಾಳಿಯಾಗಿರೋದಕ್ಕೆ ಸಾಕ್ಷಿ ಎಂಬಂತೆ ಬಸ್​ನಲ್ಲಿ ಖಾರದಪುಡಿ ಎಲ್ಲೆಲ್ಲೂ ಚೆಲ್ಲಾಡಿದೆ. ಅಲ್ಲದೇ, ಹಲ್ಲೆಗೊಳಗಾಗಿರೋ ನಿರ್ವಾಹಕ ಮುರುಗೇಶ್ ಹುಲ್ಲಳ್ಳಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಜೊತೆಗೆ ಈ ಹಲ್ಲೆಗೆ ಹಳೆಯ ರಾಜಕೀಯ ದ್ವೇಷವೇ ಕಾರಣ ಎನ್ನಲಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಬೇಕು ಅಂತ ಹಲ್ಲೆಗೊಳಗಾಗಿರೋ ಮುರುಗೇಶ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಒಟ್ನಲ್ಲಿ ಶಾಸಕರ ಬೆಂಬಲಿಗ ಅಂದ್ಕೊಂಡು ಕರ್ತವ್ಯನಿರತ ನಿರ್ವಾಹಕನ ಮೇಲೆ ಹಲ್ಲೆ ಮಾಡಿರೋದು ಖಂಡನೀಯ.

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ