ವನ್ಯಜೀವಿಗಳೊಂದಿಗೆ ಟಿಕ್​-ಟಾಕ್​ ವಿಡಿಯೋ ಮಾಡಲು ಹೋದ ಯುವಕ ಅಂದರ್​!

ಬಾಗಲಕೋಟೆ: ನಮ್ಮ ಯುವಕರಿಗೆ ಸದಾ ತಮ್ಮ ಪ್ರತಿಭೆಯನ್ನು ಹೊರಹಾಕುವ ತವಕ, ಕಾತುರ. ಇದಕ್ಕೆ ಅನುಗುಣವಾಗಿ ಇಂದಿನ ಯುವಪೀಳಿಗೆಗೆ ತಮ್ಮ ಟ್ಯಾಲೆಂಟ್ ತೋರಿಸಲು ಸಿಕ್ಕಿರುವ ಬ್ರಹ್ಮಾಸ್ತ್ರ ಟಿಕ್​-ಟಾಕ್​. ಮನಸ್ಸಿಗೆ ತೋಚುವಂತೆ, ಜನರಿಗೆ ನಾಟುವಂಥ ಹತ್ತು ಹಲವಾರು ವಿಡಿಯೋಗಳನ್ನು ಮಾಡಿ ಫೇಮಸ್​ ಆಗುವ ಆಸೆ. ಇಂಥದ್ದೇ ಆಸೆ ಹೊತ್ತ ಯುವಕ ವನ್ಯಜೀವಿಗಳೊಂದಿಗೆ ಟಿಕ್ ಟಾಕ್​ವಿಡಿಯೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಡೆದಿದೆ. ಮೊಲ ಮತ್ತು ನಮ್ಮ ರಾಷ್ಟ್ರಪಕ್ಷಿಯಾದ ನವಿಲಿನೊಂದಿಗೆ ಟಿಕ್ […]

ವನ್ಯಜೀವಿಗಳೊಂದಿಗೆ ಟಿಕ್​-ಟಾಕ್​ ವಿಡಿಯೋ ಮಾಡಲು ಹೋದ ಯುವಕ ಅಂದರ್​!
ಸಾಧು ಶ್ರೀನಾಥ್​

Updated on: Jun 11, 2020 | 4:58 PM

ಬಾಗಲಕೋಟೆ: ನಮ್ಮ ಯುವಕರಿಗೆ ಸದಾ ತಮ್ಮ ಪ್ರತಿಭೆಯನ್ನು ಹೊರಹಾಕುವ ತವಕ, ಕಾತುರ. ಇದಕ್ಕೆ ಅನುಗುಣವಾಗಿ ಇಂದಿನ ಯುವಪೀಳಿಗೆಗೆ ತಮ್ಮ ಟ್ಯಾಲೆಂಟ್ ತೋರಿಸಲು ಸಿಕ್ಕಿರುವ ಬ್ರಹ್ಮಾಸ್ತ್ರ ಟಿಕ್​-ಟಾಕ್​. ಮನಸ್ಸಿಗೆ ತೋಚುವಂತೆ, ಜನರಿಗೆ ನಾಟುವಂಥ ಹತ್ತು ಹಲವಾರು ವಿಡಿಯೋಗಳನ್ನು ಮಾಡಿ ಫೇಮಸ್​ ಆಗುವ ಆಸೆ. ಇಂಥದ್ದೇ ಆಸೆ ಹೊತ್ತ ಯುವಕ ವನ್ಯಜೀವಿಗಳೊಂದಿಗೆ ಟಿಕ್ ಟಾಕ್​ವಿಡಿಯೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಡೆದಿದೆ.

ಮೊಲ ಮತ್ತು ನಮ್ಮ ರಾಷ್ಟ್ರಪಕ್ಷಿಯಾದ ನವಿಲಿನೊಂದಿಗೆ ಟಿಕ್ ಟಾಕ್ ಮಾಡಿದ ಮಮದಾಪುರ ಗ್ರಾಮದ ವಿಠ್ಠಲ ವಾಲಿಕಾರನ್ನು ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ ವಾಲಿಕಾರ ಅಕ್ರಮವಾಗಿ ಕಾಡು ಮೊಲ ಹಾಗೂ ನವಿಲನ್ನ ಬೇಟೆಯಾಡಿ ನಂತರ ಅವುಗಳೊಂದಿಗೆ ವಿಡಿಯೊ ಮಾಡಿ ಟಿಕ್-ಟಾಕ್​ನಲ್ಲಿ ಶೇರ್​ ಮಾಡಿದ್ದ. ಇದನ್ನು ಗಮನಿಸಿದ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ ಈತನ ವಿರುದ್ಧ ಕೇಸ್ ದಾಖಲಿಸಿದ್ದರು. ಸದ್ಯಕ್ಕೆ ಪೊಲೀಸರು ಯುವಕನನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ1972ರ ಅಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us