AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಖೈದಿಗಳ ಕೈಯಲ್ಲಿ ಮೊಬೈಲ್​, ಜೈಲಿನಿಂದಲೇ ಕಾಲಿಂಗ್; ಏನಿದು ಕಥೆ?

ಈ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಸಿಗುತ್ತೆ ಎನ್ನುವ ಮಾತಿದೆ. ಜೈಲಿನಲ್ಲಿ ಇರುವ ಖೈದಿಗಳಿಗೆ ಗುಂಡು, ತುಂಡು, ಗಾಂಜಾ ಸರಳವಾಗಿ ಸಿಗುತ್ತಂತೆ. ಹೌದು ಬಳ್ಳಾರಿ ಜೈಲಿನ ಖೈದಿಗಳ ಕೈಗೆ ಮೊಬೈಲ್ ಪೋನ್ ಸಿಗುತ್ತಿದೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡುತ್ತಿದ್ದವರು ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ.

ಬಳ್ಳಾರಿ: ಖೈದಿಗಳ ಕೈಯಲ್ಲಿ ಮೊಬೈಲ್​, ಜೈಲಿನಿಂದಲೇ ಕಾಲಿಂಗ್; ಏನಿದು ಕಥೆ?
ಬಳ್ಳಾರಿ ಕೇಂದ್ರ ಕಾರಾಗೃಹ
ಕಿರಣ್ ಹನುಮಂತ್​ ಮಾದಾರ್
|

Updated on: Apr 02, 2023 | 7:05 AM

Share

ಬಳ್ಳಾರಿ: ಜಿಲ್ಲಾ ಕೇಂದ್ರ ಕಾರಾಗೃಹ ಅಂದರೆ ಸಾಕಷ್ಟು ಪ್ರಖ್ಯಾತಿ. ಸ್ವಾತಂತ್ರ್ಯ ಹೋರಾಟಗಾರರಿದ್ದ ಈ ಜೈಲು ಸಾಕಷ್ಟು ವಿಸ್ತಾರವಾಗಿದೆ. ಸಾವಿರದ ಸಮೀಪ ಖೈದಿಗಳನ್ನ ಇಲ್ಲಿ ಬಂಧಿಸಿಡಲಾಗಿದೆ. ಆದರೆ ಜೈಲಿನೊಳಗೆ ಇರುವ ಖೈದಿಗಳಿಗೆ ನಿತ್ಯ ಗುಂಡು, ತುಂಡು, ಗಾಂಜಾ, ಸಿಗರೇಟು ಸಿಗುತ್ತೆ ಎನ್ನುವ ಆರೋಪ ಕೇಳಿ ಬರುತ್ತಿತ್ತು. ಆದರೀಗ ಚುನಾವಣೆ ವೇಳೆ ಖೈದಿಗಳ ಕೈಗೆ ಮೊಬೈಲ್ ಪೋನ್​ಗಳು ಸಿಕ್ಕವೆ. ಹೌದು ಜೈಲಿನಲ್ಲಿರುವ ಖೈದಿಗಳು ಮೊಬೈಲ್ ಬಳಕೆ‌ ಮಾಡುತ್ತಾ ಹೊರಗಿನವರ ಜೊತೆ ಮಾತನಾಡುತ್ತಿದ್ದು, ಜೈಲಿನಿಂದಲೇ ಹೊರಗಿನ ಜಗತ್ತನ್ನ ಖೈದಿಗಳು ಆಳುತ್ತಾ ಇರುವುದು ಬಯಲಾಗಿದೆ.

ಜೈಲಿನೊಳಗಿರುವ ಖೈದಿಗಳಿಗೆ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಮೊದಲಿನಿಂದಲೂ ಇದ್ದವು. ಆದರೆ ಚುನಾವಣೆಯ ವೇಳೆ ಖೈದಿಗಳು ಜೈಲಿನಿಂದಲೇ ಹೊರಗಿನವರಿಗೆ ಬೆದರಿಕೆ ಕರೆ ಹಾಗೂ ಒಳಗಿನಿಂದಲೇ ರಾಜಕೀಯ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕ ಬೆನ್ನಲ್ಲೆ ಪೊಲೀಸರು ದಾಳಿ ನಡೆಸಿ ಖೈದಿಗಳು ಬಳಸುತ್ತಿದ್ದ ಮೊಬೈಲ್ ಹಾಗೂ ಸಿಮ್ ಕಾರ್ಡ್​ಗಳನ್ನ ಜಪ್ತಿ‌ ಮಾಡಿದ್ದಾರೆ. ಮೊಬೈಲ್ ಬಳಕೆ ಮಾಡಲು ಖೈದಿಗಳ ಜೊತೆ ಸಂಪರ್ಕ ಸಾಧಿಸಿದ್ದು ಹೇಗೆ?, ಜೈಲಿನ ಸಿಬ್ಬಂದಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರಾ ಎನ್ನುವ ಬಗ್ಗೆಯೂ ಪೊಲೀಸರು ಇದೀಗ ತನಿಖೆ ತೀವ್ರಗೊಳಿಸಿದ್ದಾರೆ. ಬಳ್ಳಾರಿಯ ಗಾಂಧಿನಗರ ಪೊಲೀಸ ಠಾಣೆಯಲ್ಲಿ ದಾಖಲಾಗಿರುವ ದೂರಿನ ಮೇರೆಗೆ ಜೈಲಿನ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಮಗು ಕಳ್ಳಿಯ ಸುಳಿವು ಕೊಟ್ಟ ಉಪ್ಪಿಟ್ಟು: ಮಗು ಕಳ್ಳತನ ಮಾಡಿದ ಆರೋಪಿ ಹಿಸ್ಟರಿಯೇ ಭಯಾನಕ

ಬಳ್ಳಾರಿ ಜೈಲಿನ ಪಕ್ಕದಲ್ಲಿರುವ ಗುಡ್ಡದ ಕಡೆಯಿಂದ ಹಾಗೂ ಜೈಲು ಪಕ್ಕದಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಹಾಯ್ದು ಹೋಗುವವರು ಜೈಲಿನೊಳಗೆ ಏನೂ ಬೇಕಾದರೂ ಎಸೆದು ಖೈದಿಗಳಿಗೆ ತಲುಪಿಸುತ್ತಿದ್ದರು. ಎನ್ನುವುದು ಖಾತರಿಯಾಗಿದೆ. ಹೀಗಾಗಿ ಸಧ್ಯ ಬಳ್ಳಾರಿ ಕೇಂದ್ರ ಕಾರಾಗೃಹದ ಸುತ್ತಲೂ ಭದ್ರತೆಗಾಗಿ 27 ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ. ಜೊತೆಗೆ ಹೋಮ್ ಗಾರ್ಡ್​ ಸಿಬ್ಬಂದಿಗಳನ್ನ ಸಹ ಭದ್ರತೆ ತಪಾಸಣೆಗಾಗಿ ನಿಯೋಜನೆ ಮಾಡಲಾಗಿದೆ. ಆದರೂ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಗಾಂಜಾ, ಗುಂಡು, ತುಂಡು ಮೊಬೈಲ್​ಗಳು ಸರಳವಾಗಿ ಸರಬರಾಜು ಆಗುತ್ತಿದೆ ಎನ್ನುವ ಆರೋಪ ಈಗಲೂ ಇದೆ. ಹೀಗಾಗಿ ಇನ್ನಷ್ಟು ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಿದ್ರೆ ಮಾತ್ರ ಜೈಲಿನೊಳಗಿನ ಅಕ್ರಮವನ್ನ ತಡೆಗಟ್ಟಬಹುದಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ