AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯ ಅವಾಂತರ; ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ, ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ ರೋಗಿ

ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ಸೇತುವೆ ದಾಟಲು ಆಟೋದಲ್ಲಿ ತೆರಳುತ್ತಿದ್ದ ರೋಗಿ ಪರದಾಡುತ್ತಿದ್ದಾರೆ. ಬಳ್ಳಾರಿಯಿಂದ ಗಂಗಾವತಿಗೆ ತೆರಳುತ್ತಿದ್ದ ಹನೀಫ್ ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ್ದಾರೆ.

ಮಳೆಯ ಅವಾಂತರ; ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ, ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ ರೋಗಿ
ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ, ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ ರೋಗಿ
TV9 Web
| Updated By: ಆಯೇಷಾ ಬಾನು|

Updated on:Jul 13, 2022 | 5:04 PM

Share

ಬಳ್ಳಾರಿ: ರಾಜ್ಯದ ಹಲವೆಡೆ ರಣಮಳೆ ಒಂದೇ ಸಮನೆ ಸುರಿಯುತ್ತಿದೆ. ಇನ್ನೂ ಕೆಲವಡೆ ಮಳೆ ಕಡಿಮೆಯಾದ್ರೂ, ಮಳೆ ಅವಾಂತರಗಳು ಮಾತ್ರ ತಗ್ಗುತ್ತಲೇ ಇಲ್ಲ. ವ್ಯಾಪಕ ವರ್ಷಧಾರೆಯಿಂದ ಜನರ ಬದುಕು ಬೀದಿಗೆ ಬಂದಿದೆ. ಮನೆಗಳು, ಗುಡ್ಡ, ರಸ್ತೆಗಳೇ ಕುಸಿದು ಬೀಳುತ್ತಿವೆ. ಜಲಾಶಯಗಳ ಅಪಾರ ನೀರಿನಿಂದ ನದಿಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ರೆ, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಜಲಸಮಾಧಿಯಾಗಿದೆ. ಸೇತುವೆಗಳು ಮುಳುಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗದಂತಾಗಿದೆ. ಅದರಂತೆಯೇ ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ರೋಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಂಪ್ಲಿ-ಗಂಗಾವತಿ ಸೇತುವೆಯ ಮೇಲೆ ಸಂಚಾರ ಸ್ಥಗಿತ ಹಿನ್ನೆಲೆ ಸೇತುವೆ ದಾಟಲು ಆಟೋದಲ್ಲಿ ತೆರಳುತ್ತಿದ್ದ ರೋಗಿ ಪರದಾಡುತ್ತಿದ್ದಾರೆ. ಬಳ್ಳಾರಿಯಿಂದ ಗಂಗಾವತಿಗೆ ತೆರಳುತ್ತಿದ್ದ ಹನೀಫ್ ಅರ್ಧಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ನರಳಾಡಿದ್ದಾರೆ. ಚಿಕಿತ್ಸೆಯ ದಾಖಲಾತಿ ತೋರಿಸಿದರೂ ಪೊಲೀಸರು ಹನೀಫ್ರನ್ನ ತಡೆದಿದ್ದು ಸ್ಥಳೀಯರ ಮನವಿಯ ಮೇರೆಗೆ ರೋಗಿ ತೆರಳಲು ಅನುಮತಿ ನೀಡಲಾಗಿದೆ. ಬಳ್ಳಾರಿಯ ಟಿಬಿ ಸ್ಯಾನಟರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದು ಊರಿಗೆ ತೆರಳುವ ವೇಳೆ ರೋಗಿ ಹನೀಫ್ ಪರದಾಡಿದ್ದಾರೆ.

ಮುಳ್ಳಿನ ಬೇಲಿ ದಾಟಿ ಕಿರು ಸೇತುವೆ ಮೇಲೆ ಹೋದ ಜನ ಇನ್ನು ಮತ್ತೊಂದು ಕಡೆ ಕೊಪ್ಪಳ ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ ಮುಂಭಾಗ ಇರುವ ಸೇತುವೆಗೆ ಮುಳ್ಳಿನ ಬೇಲಿ ಹಾಕಿದ್ದು ಅದನ್ನೇ ದಾಟಿ ಜನ ಹೋಗುವ ದೃಶ್ಯಗಳು ಕಂಡು ಬಂದಿವೆ. ಅಧಿಕಾರಿಗಳು, ಪೊಲೀಸರು ಹೋಗುತ್ತಲೇ ಸೇತುವೆ ಮೇಲೆ ನುಗ್ಗಿದ ಜನ ಮುಳ್ಳಿನ ಬೇಲಿ ದಾಟಿ ಕಿರು ಸೇತುವೆ ಮೇಲೆ ಹೋಗಿದ್ದಾರೆ.

ಈ ಕಿರು ಸೇತುವೆ ಮುನಿರಾಬಾದ್ – ಟಿಬಿ ಡ್ಯಾಮ್ ಗೆ ಸಂಪರ್ಕ ಕಲ್ಲಿಸುತ್ತೆ. ಸೇತುವೆ ಮೇಲೆ ಜನ ಓಡಾಡದಂತೆ ಮುಳ್ಳಿನ ಬೇಲಿ ಹಾಕಲಾಗಿತ್ತು. ಮುಳ್ಳಿನ ಬೇಲಿ ಹಾಕಿ ಪೊಲೀಸರು, ಅಧಿಕಾರಿಗಳು ಹೋದ ತಕ್ಷಣ ಮತ್ತೆ ಕಿರು ಸೇತುವೆ ಮೇಲೆ ಜನ ಓಡಾಟ ಶುರು ಮಾಡಿದ್ದಾರೆ. ಅಲ್ಲದೆ ಕಿರು ಸೇತುವೆ ಮುಂಭಾಗ ಯುವಕರು‌ ಸೆಲ್ಪಿಗೆ ಪೋಜ್ ಕೊಟ್ಟು ಫೋಟೋ ತೆಗೆದುಕೊಳ್ಳುತ್ತಿದ್ದಾರೆ.

Published On - 4:55 pm, Wed, 13 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ