AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿದ್ದಕ್ಕೆ ದಂಡ: ಅಸಲಿ ಕಾರಣ ಬಿಚ್ಚಿಟ್ಟ ಯುವಕ

ನಿನ್ನೆ ವಿಜಯನಗರದ ಮೆಟ್ರೋ ಸ್ಟೇಷನ್​ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಯುತ್ತಾ ಕುಳಿತ್ತಿದ್ದಕ್ಕೆ ಪ್ರಯಾಣಿಕರೊಬ್ಬರಿಗೆ 50 ರೂ. ದಂಡ ವಿಧಿಸಲಾಗಿತ್ತು. ಅರುಣ್​ ಜುಗಳಿ ಎಂಬ ಪ್ರಯಾಣಿಕರು ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಬಿಎಂಆರ್​ಸಿಎಲ್​​ ಸಂಪೂರ್ಣ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿದ್ದಕ್ಕೆ ದಂಡ: ಅಸಲಿ ಕಾರಣ ಬಿಚ್ಚಿಟ್ಟ ಯುವಕ
ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿದ್ದಕ್ಕೆ ದಂಡ, ಅಸಲಿ ಕಾರಣ ಬಿಚ್ಚಿಟ್ಟ ಯುವಕ
ಗಂಗಾಧರ​ ಬ. ಸಾಬೋಜಿ
|

Updated on: May 12, 2024 | 5:48 PM

Share

ಬೆಂಗಳೂರು, ಮೇ 12: ನಿನ್ನೆ ವಿಜಯನಗರದ ಮೆಟ್ರೋ ಸ್ಟೇಷನ್​ನಲ್ಲಿ (namma metro) 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಯುತ್ತಾ ಕುಳಿತ್ತಿದ್ದಕ್ಕೆ ಪ್ರಯಾಣಿಕರೊಬ್ಬರಿಗೆ 50 ರೂ. ದಂಡ ವಿಧಿಸಲಾಗಿತ್ತು. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್​ನ (BMRCL) ಈ ಹೊಸ ರೂಲ್ಸ್​ನಿಂದ ಪ್ರಯಾಣಿಕರು ದಂಗಾಗಿದ್ದರು. ಜೊತೆಗೆ ಮೆಟ್ರೋ ಅಧಿಕಾರಿಗಳ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ದಂಡ ಕಟ್ಟಿದ್ದ ಯುವಕ ಘಟನೆ ಕುರಿತಾಗಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅರುಣ್​ ಜುಗಳಿ ಎಂಬ ಪ್ರಯಾಣಿಕರು ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಆ ದಿನ ನಿಜವಾಗಿ ಏನಾಯಿತು ಅಂದರೆ, ಗುರುವಾರ ಭಾರೀ ಮಳೆ ಬರುತ್ತಿತ್ತು. ಆದ್ದರಿಂದ ವಿಜಯನಗರ ಮೆಟ್ರೋದಲ್ಲಿ ಮೆಟ್ರೋದ ನಿರ್ಗಮನ ಸ್ಥಳದ ಹೊರಗೆ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಹಾಗೆಯೇ ನನ್ನ ಫೋನ್ ಡೆಡ್ ಆಗಿತ್ತು ಮತ್ತು ನಿರ್ಗಮನ ಭಾಗದಲ್ಲಿ ಯಾವುದೇ ವಿದ್ಯುತ್ ಪ್ಲಗ್‌ಗಳು ಆನ್ ಆಗಿರಲಿಲ್ಲ, ಆದ್ದರಿಂದ ಮತ್ತೆ ಒಳಗೆ ಪ್ರವೇಶಿಸಿ ಮತ್ತು ಮಳೆ ನಿಲ್ಲುವವರೆಗೆ ನನ್ನ ಫೋನ್ ಅನ್ನು ಚಾರ್ಜ್ ಮಾಡಲು ಯೋಚಿಸಿದೆ’.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ

‘ನಾನು ಕೇವಲ 5 ನಿಮಿಷ ತಡವಾಗಿ ನಿರ್ಗಮಿಸಿದೆ, ಆದ್ದರಿಂದ ಮೆಟ್ರೋ ಸಿಬ್ಬಂದಿಗಳು ನನಗೆ ಮೆಟ್ರೋದಲ್ಲಿ ಹೆಚ್ಚು ಸಮಯ ಸ್ಟೇಷನ್​ನಲ್ಲಿ ಇದದ್ದಕ್ಕಾಗಿ 50 ರೂ. ದಂಡ ವಿಧಿಸಿದ್ದಾರೆ. ನಾನು ವಿನಂತಿಸಿಕೊಂಡರೂ  ನನ್ನ ಮೆಟ್ರೋ ಕಾರ್ಡ್‌ನಿಂದ ದಂಡವನ್ನು ವಿಧಿಸಿದರು’.

‘ನನ್ನ ಜೊತೆಗೆ 10 ಕ್ಕೂ ಹೆಚ್ಚು ಪ್ರಯಾಣಿಕರು ಈ ವಿಷಯದ ಬಗ್ಗೆ ಯಾರೋ ಮಾತನಾಡಲಿಲ್ಲ. ವಿಜನಗರದ ಮೆಟ್ರೊ ನಿಲ್ದಾಣದಲ್ಲಿ ಅದೇ ಮೆಟ್ರೋ ನಿಲ್ದಾಣದಲ್ಲಿ ಎಲ್ಲೆಲ್ಲಿಯೂ ಗ್ರಾಹಕರಿಂದ ವಸೂಲಿ ಮಾಡಿರುವುದನ್ನು ಬಿಎಂಎಸಿಎಲ್ ಉಲ್ಲೇಖಿಸಿಲ್ಲ. ಹೀಗಾಗಿ ನಾನು ಕರೆ ಮಾಡಿ ಹಣ ವಾಪಸ್ ಕೇಳಿದೆ’.

ಇದನ್ನೂ ಓದಿ: Bengaluru Rains: ಕೆಂಪೇಗೌಡ ವಿಮಾನ ನಿಲ್ದಾಣದ ‘ಟರ್ಮಿನಲ್​ 2’ ಚಾವಣಿಯಲ್ಲಿ ಸೋರಿಕೆ, ಏರ್​​ಪೋರ್ಟ್​​​​ನೊಳಗೆ ನುಗ್ಗಿದ ನೀರು

‘ಈ ಘಟನೆಯ ನಂತರ ಅವರು ಅದೇ ಕಾರಣಕ್ಕಾಗಿ ಯಾವುದೇ ದಂಡವಿಲ್ಲದೆ ಸುಮಾರು 15 ಜನರನ್ನು ಕಳುಹಿಸಿದರು. ನನ್ನ ಅನುಮತಿಯ ಮೇರೆಗೆ ಇದನ್ನು ರೆಕಾರ್ಡ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ ಮಾಧ್ಯಮ ವರದಿಗಾರ ಸಹ ಅವರ ಜೊತೆಗಿದ್ದರು. ಇದು ಬಿಎಂಆರ್​ಸಿಎಲ್​​ ಸಂಪೂರ್ಣ ವಂಚನೆ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ