ಹೇಗಿದ್ದರೂ ಪಾಸ್ ಮಾಡುತ್ತಾರೆ ಎಂಬ ಭಾವನೆ ಮಕ್ಕಳಲ್ಲಿ ಬರುತ್ತಿದೆ; ಶಾಲೆ ಆರಂಭಿಸೋಣ: ಸಭಾಪತಿ ಬಸವರಾಜ ಹೊರಟ್ಟಿ

| Updated By: guruganesh bhat

Updated on: Aug 13, 2021 | 5:44 PM

ನನ್ನ ಅಧ್ಯಯನದ ಪ್ರಕಾರ ಮಕ್ಕಳ ಪ್ರಗತಿ ಬಹಳ ಕುಂಠಿತವಾಗುತ್ತಿದೆ. ಹೀಗಾಗಿ ಶಿಕ್ಷಣ ಸಚಿವರನ್ನು ಕರೆದು ನಾನೂ ಸಲಹೆ ಕೊಟ್ಟಿದ್ದೇನೆ. ಶಿಕ್ಷಕರೂ ಸಹಿತ ಪ್ರತಿ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಹೇಗಿದ್ದರೂ ಪಾಸ್ ಮಾಡುತ್ತಾರೆ ಎಂಬ ಭಾವನೆ ಮಕ್ಕಳಲ್ಲಿ ಬರುತ್ತಿದೆ; ಶಾಲೆ ಆರಂಭಿಸೋಣ: ಸಭಾಪತಿ ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Follow us on

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭ ಮಾಡುವುದೇ ಸೂಕ್ತ ಎಂದು ವಿಧಾನಸೌಧದಲ್ಲಿ ವಿಧಾನಪರಿಷತ್ ಸಭಾಪತಿ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಮಕ್ಕಳ ಭವಿಷ್ಯ ಕರಾಳವಾಗುತ್ತಿದೆ. ಮಕ್ಕಳಿಗೆ ಶಾಲೆ ಶಿಕ್ಷಣದ ಸಂಬಂಧವೇ ಕಡಿತಗೊಳ್ಳುತ್ತದೆ. ಡಿಸಿ, ಡಿಡಿಪಿಐ, ಸಿಇಓ ಎಲ್ಲರನ್ನೂ ಕರೆಸಿ ಸಮರ್ಪಕ ಕ್ರಮ ಕೈಗೊಂಡು ಶಾಲೆಗಳಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮೂರನೇ ಅಲೆ ಬಂದಾಗ ಅಂತಹುದೇ ಪ್ರಸಂಗ ಬಂದಾಗ ಶಾಲೆಗಳನ್ನು ಸ್ಥಗಿತಗೊಳಿಸಲಿ. ಇಲ್ಲದೇ ಹೋದರೆ ಶಾಲೆಗಳನ್ನು ಪ್ರಾರಂಭ ಮಾಡುವುದೇ ಸೂಕ್ತ. ನನ್ನ ಅಧ್ಯಯನದ ಪ್ರಕಾರ ಮಕ್ಕಳ ಪ್ರಗತಿ ಬಹಳ ಕುಂಠಿತವಾಗುತ್ತಿದೆ. ಹೀಗಾಗಿ ಶಿಕ್ಷಣ ಸಚಿವರನ್ನು ಕರೆದು ನಾನೂ ಸಲಹೆ ಕೊಟ್ಟಿದ್ದೇನೆ. ಶಿಕ್ಷಕರೂ ಸಹಿತ ಪ್ರತಿ ಮಗುವಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಪ್ರಾರಂಭ ಮಾಡಬೇಕು. ಗೊಂದಲ‌ ಅಥವಾ ತೊಂದರೆ ಬಂದಾಗ ಅದನ್ನು ಸರಿಪಡಿಸಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: 

School Reopen: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಪ್ರಾರಂಭದ ಕುರಿತು ಮಹತ್ವದ ಮಾಹಿತಿ ನೀಡಿದ ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉನ್ನತ ಶಿಕ್ಷಣ ವ್ಯವಸ್ಥೆ ಧ್ವಂಸ, ಜಾರಿ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

(Basavaraj Horatti says Lets start schools in Karnataka)