AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾರಂಟೈನ್​ಗೆ ಒಪ್ಪದ 25 ಮಂದಿ ಬೆಂಗಳೂರಿನಿಂದ ದೆಹಲಿಗೆ ವಾಪಸ್

ಬೆಂಗಳೂರು: ಕ್ವಾರಂಟೈನ್​ಗೆ ಒಪ್ಪದ ಹಿನ್ನೆಲೆಯಲ್ಲಿ 25 ಜನರನ್ನು ಬಂದ ಊರುಗಳಿಗೆ ವಾಪಸ್ ಕಳುಹಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು 25 ಮಂದಿಗೆ ರಿಟರ್ನ್ ಟಿಕೆಟ್ ನೀಡಿ ಊರುಗಳಿಗೆ ಕಳುಹಿಸಿದ್ದಾರೆ. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದವರಲ್ಲಿ ಕೆಲವರು ಹೋಟೆಲ್ ಕ್ವಾರಂಟೈನ್​ಗೆ ವಿರೋಧಿಸಿದ್ರು. ಕ್ವಾರಂಟೈನ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪ್ರತಿಭಟನೆ ನಡೆಸಿದ್ರು. ವಾಪಸ್ ನಮ್ಮೂರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ರು. ಹೀಗಾಗಿ ಬಿಬಿಎಂಪಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ನಿನ್ನೆ ಬೆಂಗಳೂರಿನಿಂದ ದೆಹಲಿಗೆ ಹೋದ ಶ್ರಮಿಕ್ ರೈಲಿನಲ್ಲಿ […]

ಕ್ವಾರಂಟೈನ್​ಗೆ ಒಪ್ಪದ 25 ಮಂದಿ ಬೆಂಗಳೂರಿನಿಂದ ದೆಹಲಿಗೆ ವಾಪಸ್
ಸಾಧು ಶ್ರೀನಾಥ್​
|

Updated on:May 15, 2020 | 11:44 AM

Share

ಬೆಂಗಳೂರು: ಕ್ವಾರಂಟೈನ್​ಗೆ ಒಪ್ಪದ ಹಿನ್ನೆಲೆಯಲ್ಲಿ 25 ಜನರನ್ನು ಬಂದ ಊರುಗಳಿಗೆ ವಾಪಸ್ ಕಳುಹಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು 25 ಮಂದಿಗೆ ರಿಟರ್ನ್ ಟಿಕೆಟ್ ನೀಡಿ ಊರುಗಳಿಗೆ ಕಳುಹಿಸಿದ್ದಾರೆ.

ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದವರಲ್ಲಿ ಕೆಲವರು ಹೋಟೆಲ್ ಕ್ವಾರಂಟೈನ್​ಗೆ ವಿರೋಧಿಸಿದ್ರು. ಕ್ವಾರಂಟೈನ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪ್ರತಿಭಟನೆ ನಡೆಸಿದ್ರು. ವಾಪಸ್ ನಮ್ಮೂರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ರು. ಹೀಗಾಗಿ ಬಿಬಿಎಂಪಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ನಿನ್ನೆ ಬೆಂಗಳೂರಿನಿಂದ ದೆಹಲಿಗೆ ಹೋದ ಶ್ರಮಿಕ್ ರೈಲಿನಲ್ಲಿ 25 ಮಂದಿಯನ್ನು ಸಿಕಂದರಾಬಾದ್​ಗೆ ವಾಪಸ್ ಕಳುಹಿಸಿದ್ದಾರೆ.

Published On - 8:38 am, Fri, 15 May 20