AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು

ಚಂದ್ರಯಾನ-3ರ ವಿಕ್ರಮ ಲ್ಯಾಂಡರ್​ ಚಂದಿರನ ಸ್ಪರ್ಶಕ್ಕೆ ಭಾರತ ಅಷ್ಟೆ ಅಲ್ಲದೇ ವಿಶ್ವವೇ ಕೌತಕದಿಂದ ಎದುರು ನೋಡುತ್ತಿದೆ. ಈಗಾಗಲೇ ನಭಕ್ಕೆ ಹಾರಿರುವ ರಾಕೇಟ್​ನ ಬಿಡಿ ಭಾಗಗಳ ತಯಾರಿಕೆಯಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿಯ ನಂಟಿದೆ.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು
ಎಂ.ಡಿ. ದೀಪಕ ಧಡೂತಿ
Sahadev Mane
| Edited By: |

Updated on:Aug 23, 2023 | 12:08 PM

Share

ಬೆಳಗಾವಿ: ಚಂದ್ರಯಾನ-3ರ (Chandrayaana-3) ವಿಕ್ರಮ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡುವ ಗಳಿಗೆಯನ್ನು ನೋಡಲು ವಿಶ್ವವೇ ಕೌತಕದಿಂದ ಕಾಯುತ್ತಿದೆ. ಚಂದ್ರಯಾನ-3 ಉಪಗ್ರಹ ಮತ್ತು ರಾಕೆಟ್​​ನ ತಯಾರಿಕೆಯಲ್ಲಿ ಅನೇಕ ವಿಜ್ಞಾನಿಗಳ ಪರಿಶ್ರಮವಿದೆ. ಈ ಪರಿಶ್ರಮದಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿ (Belagavi)ಯ ಓರ್ವ ಯುವ ವಿಜ್ಞಾಯ ಪಾಲು ಇದೆ. ಹೌದು ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ರಾಕೆಟ್​​​ನ ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯಲ್ಲಿರುವ ರಾಜ್ಯದ ಪ್ರತಿಷ್ಠಿತ ಕಂಪನಿಯ ಸ್ಥಾಪಕ.

ಹೌದು ಚಂದ್ರಯಾನ-3 ರಾಕೇಟ್​​​ಗೆ ಕೆಲವು ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್. ಸ್ವದೇಶಿ ಹಾಗೂ ವಿದೇಶಿ ಟೆಕ್ನಾಲಜಿಯನ್ನು ಬಳಸಿ ರಾಕೇಟ್​​​ನ ಬಿಡಿ ಭಾಗಗಳನ್ನು ತಯಾರಿಸಾಲಾಗಿದೆ. ಈ ಹಿಂದೆ 2013 ರಲ್ಲಿ ನಡೆದ ಭಾರತದ  ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ದ ರಾಕೇಟ್​​​​​ನ ಬಿಡಿಭಾಗಗಳನ್ನೂ ಸಹ ಇದೇ ಕಂಪನಿ ತಯಾರಿಸಿತ್ತು. ಈ ಉಪಗ್ರಹ ಐತಿಹಾಸಿಕ ಪಯಣ ಬೆಳೆಸಿ ಮಂಗಳನ ಅಂಗಳದಲ್ಲಿ ಪ್ರವೇಶ ಮಾಡಿತ್ತು‌. ಅಂದು ಇಡೀ ಭಾರತವೇ ಹೆಮ್ಮೆ ಪಟ್ಟಿತ್ತು. ಈಗ ಮತ್ತೆ ಚಂದ್ರಯಾನ-3ರ ರಾಕೇಟ್​​​​​ನ ಬಿಡಿಭಾಗಗಳನ್ನು ಇದೇ ಕಂಪನಿ ತಯಾರಿಸಿದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್​​ ಕಂಪನಿ ಸ್ಥಾಪಕ ದೀಪಕ ಧಡೂತಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹಂತಗಳನ್ನು ವಿವರಿಸಿದ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ 

ಒಟ್ಟಿನಲ್ಲಿ ಚಂದ್ರಯಾನ-3 ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದು ಇಡೀ ಜಗತ್ತು ನಿಬ್ಬೆರಗಾಗಿ ಭಾರತದತ್ತ ನೋಡುತ್ತಿದೆ. ಚಂದ್ರಯಾನ 3 ಸಕ್ಸಸ್ ಆಗಲಿ ಭಾರತೀಯರು ವಿಶ್ವದ ಮುಂದೆ ಮತ್ತೊಮ್ಮೆ ಹೆಮ್ಮೆ ಪಡುವಂತಾಗಲಿ ಎನ್ನುವುದು ಪ್ರತಿ ಭಾರತೀಯನ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Wed, 23 August 23

Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!