Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು

ಚಂದ್ರಯಾನ-3ರ ವಿಕ್ರಮ ಲ್ಯಾಂಡರ್​ ಚಂದಿರನ ಸ್ಪರ್ಶಕ್ಕೆ ಭಾರತ ಅಷ್ಟೆ ಅಲ್ಲದೇ ವಿಶ್ವವೇ ಕೌತಕದಿಂದ ಎದುರು ನೋಡುತ್ತಿದೆ. ಈಗಾಗಲೇ ನಭಕ್ಕೆ ಹಾರಿರುವ ರಾಕೇಟ್​ನ ಬಿಡಿ ಭಾಗಗಳ ತಯಾರಿಕೆಯಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿಯ ನಂಟಿದೆ.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು
ಎಂ.ಡಿ. ದೀಪಕ ಧಡೂತಿ
Follow us
Sahadev Mane
| Updated By: ವಿವೇಕ ಬಿರಾದಾರ

Updated on:Aug 23, 2023 | 12:08 PM

ಬೆಳಗಾವಿ: ಚಂದ್ರಯಾನ-3ರ (Chandrayaana-3) ವಿಕ್ರಮ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡುವ ಗಳಿಗೆಯನ್ನು ನೋಡಲು ವಿಶ್ವವೇ ಕೌತಕದಿಂದ ಕಾಯುತ್ತಿದೆ. ಚಂದ್ರಯಾನ-3 ಉಪಗ್ರಹ ಮತ್ತು ರಾಕೆಟ್​​ನ ತಯಾರಿಕೆಯಲ್ಲಿ ಅನೇಕ ವಿಜ್ಞಾನಿಗಳ ಪರಿಶ್ರಮವಿದೆ. ಈ ಪರಿಶ್ರಮದಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿ (Belagavi)ಯ ಓರ್ವ ಯುವ ವಿಜ್ಞಾಯ ಪಾಲು ಇದೆ. ಹೌದು ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ರಾಕೆಟ್​​​ನ ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯಲ್ಲಿರುವ ರಾಜ್ಯದ ಪ್ರತಿಷ್ಠಿತ ಕಂಪನಿಯ ಸ್ಥಾಪಕ.

ಹೌದು ಚಂದ್ರಯಾನ-3 ರಾಕೇಟ್​​​ಗೆ ಕೆಲವು ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್. ಸ್ವದೇಶಿ ಹಾಗೂ ವಿದೇಶಿ ಟೆಕ್ನಾಲಜಿಯನ್ನು ಬಳಸಿ ರಾಕೇಟ್​​​ನ ಬಿಡಿ ಭಾಗಗಳನ್ನು ತಯಾರಿಸಾಲಾಗಿದೆ. ಈ ಹಿಂದೆ 2013 ರಲ್ಲಿ ನಡೆದ ಭಾರತದ  ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ದ ರಾಕೇಟ್​​​​​ನ ಬಿಡಿಭಾಗಗಳನ್ನೂ ಸಹ ಇದೇ ಕಂಪನಿ ತಯಾರಿಸಿತ್ತು. ಈ ಉಪಗ್ರಹ ಐತಿಹಾಸಿಕ ಪಯಣ ಬೆಳೆಸಿ ಮಂಗಳನ ಅಂಗಳದಲ್ಲಿ ಪ್ರವೇಶ ಮಾಡಿತ್ತು‌. ಅಂದು ಇಡೀ ಭಾರತವೇ ಹೆಮ್ಮೆ ಪಟ್ಟಿತ್ತು. ಈಗ ಮತ್ತೆ ಚಂದ್ರಯಾನ-3ರ ರಾಕೇಟ್​​​​​ನ ಬಿಡಿಭಾಗಗಳನ್ನು ಇದೇ ಕಂಪನಿ ತಯಾರಿಸಿದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್​​ ಕಂಪನಿ ಸ್ಥಾಪಕ ದೀಪಕ ಧಡೂತಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹಂತಗಳನ್ನು ವಿವರಿಸಿದ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ 

ಒಟ್ಟಿನಲ್ಲಿ ಚಂದ್ರಯಾನ-3 ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದು ಇಡೀ ಜಗತ್ತು ನಿಬ್ಬೆರಗಾಗಿ ಭಾರತದತ್ತ ನೋಡುತ್ತಿದೆ. ಚಂದ್ರಯಾನ 3 ಸಕ್ಸಸ್ ಆಗಲಿ ಭಾರತೀಯರು ವಿಶ್ವದ ಮುಂದೆ ಮತ್ತೊಮ್ಮೆ ಹೆಮ್ಮೆ ಪಡುವಂತಾಗಲಿ ಎನ್ನುವುದು ಪ್ರತಿ ಭಾರತೀಯನ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Wed, 23 August 23

ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ