AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ -ಡಿಕೆ ಶಿವಕುಮಾರ್ ಗಂಭೀರ ಆರೋಪ

ಕೋವಿಡ್ ಇದೆ ಅಂತ ರಾಹುಲ್ ಗಾಂಧಿಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ. ಮೇಕೆದಾಟು ಸಮಯದಲ್ಲೂ ನಮಗೆ ಇದೇ ರೀತಿ ಆಗಿತ್ತು. ಆಗ ಕೇಸ್ ಕೂಡ ಹಾಕಿದ್ರು.

ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ -ಡಿಕೆ ಶಿವಕುಮಾರ್ ಗಂಭೀರ ಆರೋಪ
ಡಿಕೆ ಶಿವಕುಮಾರ
TV9 Web
| Edited By: ಆಯೇಷಾ ಬಾನು|

Updated on:Dec 22, 2022 | 12:47 PM

Share

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಆತಂಕ ಮತ್ತೆ ಹುಟ್ಟುಕೊಂಡಿದೆ. ನೆರೆಯ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಸಭೆ, ಚರ್ಚೆಗಳು ಹೆಚ್ಚಾಗುತ್ತಿವೆ. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ. ಹಾಗಾಗಿ ಕೊರೊನಾ ಆತಂಕ ಹುಟ್ಟಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಪಕ್ಷಗಳ ಪ್ರತಿಭಟನೆ ನಡೆದಾಗ ಮಾತ್ರ ಕೋವಿಡ್ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಕೋವಿಡ್ ಇದೆ ಅಂತ ರಾಹುಲ್ ಗಾಂಧಿಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ. ಮೇಕೆದಾಟು ಸಮಯದಲ್ಲೂ ನಮಗೆ ಇದೇ ರೀತಿ ಆಗಿತ್ತು. ಆಗ ಕೇಸ್ ಕೂಡ ಹಾಕಿದ್ರು. ರಾಹುಲ್‌ ಗಾಂಧಿಗೆ ಜನರು ತೋರಿಸುತ್ತಿರುವ ಪ್ರೀತಿಗೆ ಹೀಗೆ ಮಾಡಲಾಗ್ತಿದೆ. ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡಿ ಅನ್ನೊ ಪ್ಲಾನ್ ಇದೆ ಅಂತ ಡಿಕೆಶಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೋವಿಡ್ ನೆಪದಲ್ಲಿ ಇಲೆಕ್ಷನ್ ಮಾಡಿ ಅಂತ ಹೇಳಲಾಗಿದೆಯಂತೆ‌. ಈ ಬಗ್ಗೆ ಪ್ರಿಪರೇಶನ್ ಮಾಡಿಕೊಳ್ಳಲು ಹೇಳಿದ್ದಾರಂತೆ. ಡಿಜೆ ಜೊತೆ ಮಾತನಾಡಿದ್ದಾರೆ ಅನ್ನೋ ಊಹಾಪೋಹದ ಸುದ್ದಿ ಕೇಳಿ ಬರ್ತಿದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ಹೊಸ ತಳಿ: ಎರಡು ವಾರ ಕಾದು ನೋಡುವ ತಂತ್ರಕ್ಕೆ ಮುಂದಾದ ತಜ್ಞರು

ಸಚಿವ ಸೋಮಶೇಖರ್​ಗೆ ಕೋ ಆಪರೇಟಿವ್ ವಿಷಯ ಗೊತ್ತಿತ್ತು. ಅವರು ಒಳ್ಳೆ ಕೆಲಸ ಮಾಡ್ತಾರೆ ಅನ್ಕೊಂಡಿದ್ದೆ. ಆದ್ರೆ ಭ್ರಷ್ಟಾಚಾರ ನಡೀತಿದೆ. ಫ್ಯಾಕ್ಟರಿಗಳಿಗೆ, ಸುಗರ್ ಫ್ಯಾಕ್ಟರಿಗಳಿಗೆ ಅನುಕೂಲ ಮಾಡಿಕೊಡ್ತಿದಾರೆ. ಇದಕ್ಕೆ ಸೋಮಶೇಖರ್ ಕುಮ್ಮಕ್ಕು ಇದೆ. ಅಮೀತ್ ಶಾ ಭಾಗಿ ಆರೋಪವಿದೆ. ಇಂಥ ಕೆಲಸ ಮಾಡ್ತಾರೆ ಅಂತ ಅಂದುಕೊಂಡಿರ್ಲಿಲ್ಲ ಎಂದು ಡಿಕೆ ಶಿವಕುಮಾರ್ ಸಚಿವ ಸೋಮಶೇಖರ್​ ವಿರುದ್ಧ ಆರೋಪ ಮಾಡಿದ್ರು.

ಇನ್ನು ಇದೇ ವೇಳೆ ಡಿಕೆಶಿ, ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ. ಆದ್ರೆ ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡ್ತಿದೆ. 2ಎ ಮೀಸಲಾತಿ ವಿಚಾರದ ಬಗ್ಗೆ ಪಾರ್ಟಿಲಿ ಚರ್ಚೆ ಮಾಡುತ್ತೇವೆ. ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ. ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಲಿ. ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ಶೇರ್ ಸಿಗಬೇಕು. ಬೇಕು, ಬೇಡ ಅಂತ ಹೇಳಲ್ಲ. ಇಂದು ಪಂಚಮಸಾಲಿ ಸಮಾವೇಶ ಇದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:47 pm, Thu, 22 December 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು