AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ; ಪ್ರಮುಖ ಆರೋಪಿ ಮಂಜುನಾಥ್ ಅರೆಸ್ಟ್

ಮೇ 12 ರಂದು ಕೆ.ಎಸ್‌.ಲೇಔಟ್ ಠಾಣಾ ವ್ಯಾಪ್ತಿಯ ಇಸ್ರೋ ಲೇಔಟ್ನಲ್ಲಿ ನಡೆದಿದ್ದ ಬೆಡ್ ಬ್ಲಾಂಕಿಂಗ್ ಕೇಸ್ನಲ್ಲಿ ಹಣ ಪಡೆಯಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಮಂಜುನಾಥ್ ಅರೆಸ್ಟ್ ಆಗಿದ್ದಾನೆ.

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ; ಪ್ರಮುಖ ಆರೋಪಿ ಮಂಜುನಾಥ್ ಅರೆಸ್ಟ್
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on: May 20, 2021 | 7:53 AM

Share

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ದಕ್ಷಿಣ ವಯಲದ ವಾರ್ ರೂಂ ನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದಿದ್ದರು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಲೇಔಟ್ ಠಾಣಾ ವ್ಯಾಪ್ತಿಯ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 12 ರಂದು ಕೆ.ಎಸ್‌.ಲೇಔಟ್ ಠಾಣಾ ವ್ಯಾಪ್ತಿಯ ಇಸ್ರೋ ಲೇಔಟ್ನಲ್ಲಿ ನಡೆದಿದ್ದ ಬೆಡ್ ಬ್ಲಾಂಕಿಂಗ್ ಕೇಸ್ನಲ್ಲಿ ಹಣ ಪಡೆಯಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಮಂಜುನಾಥ್ ಅರೆಸ್ಟ್ ಆಗಿದ್ದಾನೆ. ಬಿಬಿಎಂಪಿ ಬೆಡ್ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಸೋಂಕಿತನ ಮನೆಗೆ ಬಂದಿದ್ದ ನವೀನ್ನನ್ನು ಬಂಧಿಸಿದ್ದು ನವೀನ್ ಸಹಾಯದಿಂದ ಮಂಜುನಾಥ್ ಕೂಡ ಅರೆಸ್ಟ್ ಆಗಿದ್ದಾನೆ.

ಶ್ರೀನಿವಾಸ ಮೂರ್ತಿ ಎಂಬ ವೃದ್ಧನಿಗೆ ಬಿಬಿಎಂಪಿ ಬೆಡ್ ಕೊಡಿಸಿದ್ದಾಗಿ ಹೇಳಿ 25 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿ ಹಣ ಪಡೆಯಲು ಸೋಂಕಿತನ ಮನೆಗೆ ಬಂದು ಟಿವಿ9 ಕ್ಯಾಮರಾ ಎದುರೇ ಆರೋಪಿ ನವೀನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಟಿವಿ9ನಲ್ಲಿ ವರದಿ ಬಿತ್ತರವಾದ ಬಳಿಕ ಕೆ.ಎಸ್.ಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆರೋಪಿ ನವೀನ್ನನ್ನು ಹಣ ಪಡೆಯಲು ಬಂದಿದ್ದ ಸೋಂಕಿತನ ಮನೆಯಿಂದಲೇ ವಶಕ್ಕೆ ಪಡೆದು ಕರೆದೊಯ್ದಿದ್ದರು. ಆರೋಪಿ ನವೀನ್ ಮಾಹಿತಿ ಮೇರೆಗೆ ಸಂಚು ರೂಪಿಸಿದ್ದ ಮಂಜುನಾಥ್ನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್​ ಬೆಡ್ ಬ್ಲಾಕಿಂಗ್ ದಂಧೆ!?

ಕೇವಲ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆ: ಸಂಸದ ತೇಜಸ್ವಿ ಸೂರ್ಯ