AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನಾಕಾರರಲ್ಲಿ ದೇಶಾಭಿಮಾನ ಕಂಡು ರಾಷ್ಟ್ರಗೀತೆ ಹಾಡಿದ ಡಿಸಿಪಿ

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಿನ್ನೆ ಟೌನ್​ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರನ್ನು ಟ್ಯಾಕಲ್ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ರು. ಮಾನವ ಸರಪಳಿ ಮಾಡಿ ಪೌರತ್ವ ಕಿಚ್ಚನ್ನು ಹಬ್ಬಿಸಿದ್ರು. ಪೊಲೀಸರು ಪ್ರತಿಭಟನಾಕಾರರನ್ನು ನಿಭಾಯಿಸಲು ಹರಸಾಹಸ ಪಟ್ರು. ಈ ವೇಳೆ ಡಿಸಿಪಿ ಚೇತನ್ ಸಿಂಗ್ ರಾಠೋರ್ ಎಲ್ಲಾ ಪ್ರತಿಭಟನಾಕಾರರ ಜೊತೆ ಸೇರಿ ರಾಷ್ಟ್ರಗೀತೆಯನ್ನು ಹಾಡಿ ದೇಶ ಪ್ರೇಮವನ್ನು ಸಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ ವೈರಲ್ ಆಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಪಿ ಚೇತನ್, ಪ್ರತಿಭಟನೆಯಲ್ಲಿ ಸ್ಕೂಲ್ ಮಕ್ಕಳು, […]

ಪ್ರತಿಭಟನಾಕಾರರಲ್ಲಿ ದೇಶಾಭಿಮಾನ ಕಂಡು ರಾಷ್ಟ್ರಗೀತೆ ಹಾಡಿದ ಡಿಸಿಪಿ
ಸಾಧು ಶ್ರೀನಾಥ್​
|

Updated on: Dec 20, 2019 | 4:57 PM

Share

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಿನ್ನೆ ಟೌನ್​ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರನ್ನು ಟ್ಯಾಕಲ್ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ರು. ಮಾನವ ಸರಪಳಿ ಮಾಡಿ ಪೌರತ್ವ ಕಿಚ್ಚನ್ನು ಹಬ್ಬಿಸಿದ್ರು. ಪೊಲೀಸರು ಪ್ರತಿಭಟನಾಕಾರರನ್ನು ನಿಭಾಯಿಸಲು ಹರಸಾಹಸ ಪಟ್ರು. ಈ ವೇಳೆ ಡಿಸಿಪಿ ಚೇತನ್ ಸಿಂಗ್ ರಾಠೋರ್ ಎಲ್ಲಾ ಪ್ರತಿಭಟನಾಕಾರರ ಜೊತೆ ಸೇರಿ ರಾಷ್ಟ್ರಗೀತೆಯನ್ನು ಹಾಡಿ ದೇಶ ಪ್ರೇಮವನ್ನು ಸಾರಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ ವೈರಲ್ ಆಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಪಿ ಚೇತನ್, ಪ್ರತಿಭಟನೆಯಲ್ಲಿ ಸ್ಕೂಲ್ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ರು. ಇವರಲ್ಲಿ ಕೆಲವರು ವಿಡಿಯೋ ಮಾಡ್ತಿದ್ರು, ಕೆಲವರು ಕೂಗಾಡ್ತಿದ್ರು, ಕೆಲವರು ರಾಷ್ಟ್ರಧ್ವಜ ಹಿಡಿದಿದ್ರು. ಅವರಲ್ಲಿ ನಾನು ದೇಶಾಭಿಮಾನ ಕಂಡೆ. ಆಗ ರಾಷ್ಟ್ರಗೀತೆ ಹಾಡ್ಬೇಕು ಅನಿಸಿತು ಅದಕ್ಕೆ ಹಾಡಿದೆ ಎಂದರು.