ಎಲೆಕ್ಟ್ರಾನಿಕ್ ಬೈಕ್ ಸಾಗಿಸ್ತಿದ್ದ ಕಂಟೈನರ್​ಗೆ ಬೆಂಕಿ; 40 ಬೈಕ್​ಗಳ ಪೈಕಿ 20 ಬೆಂಕಿಗಾಹುತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 01, 2024 | 8:35 PM

ರಾಜ್ಯ ಗಡಿಭಾಗ ತಮಿಳುನಾಡಿನ ಥಳಿರಸ್ತೆಯ ಉಳಿವೀರಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ಬೈಕ್ ಸಾಗಿಸುತ್ತಿದ್ದ ಕಂಟೈನರ್​ಗೆ ಬೆಂಕಿ ತಗುಲಿ ಕಂಟೈನರ್ ಜೊತೆಗೆ 20 ಎಲೆಕ್ಟ್ರಾನಿಕ್ ಬೈಕ್​ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ವಾಹನದಲ್ಲಿದ್ದ 40 ಎಲೆಕ್ಟ್ರಾನಿಕ್ ಬೈಕ್​ಗಳ ಪೈಕಿ 20 ಬೈಕ್​ಗಳು ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲೆಕ್ಟ್ರಾನಿಕ್ ಬೈಕ್ ಸಾಗಿಸ್ತಿದ್ದ ಕಂಟೈನರ್​ಗೆ ಬೆಂಕಿ; 40 ಬೈಕ್​ಗಳ ಪೈಕಿ 20 ಬೆಂಕಿಗಾಹುತಿ
ಎಲೆಕ್ಟ್ರಾನಿಕ್ ಬೈಕ್ ಸಾಗಿಸ್ತಿದ್ದ ಕಂಟೈನರ್​ಗೆ ಬೆಂಕಿ
Follow us on

ಬೆಂಗಳೂರು ಗ್ರಾಮಾಂತರ, ಮಾ.01: ಎಲೆಕ್ಟ್ರಾನಿಕ್ ಬೈಕ್(Electric Bike)ಸಾಗಿಸುತ್ತಿದ್ದ ಕಂಟೈನರ್​ಗೆ ಬೆಂಕಿ ತಗುಲಿ ಕಂಟೈನರ್ ಜೊತೆಗೆ 20 ಎಲೆಕ್ಟ್ರಾನಿಕ್ ಬೈಕ್​ಗಳು ಬೆಂಕಿಗಾಹುತಿಯಾದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಥಳಿರಸ್ತೆಯ ಉಳಿವೀರಹಳ್ಳಿಯಲ್ಲಿ ನಡೆದಿದೆ. ಕಂಪನಿಯಿಂದ 40 ಎಲೆಕ್ಟ್ರಾನಿಕ್ ಬೈಕ್​ಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನ, ಬೆಂಗಳೂರಿನ ಜಯನಗರ ಶೋ ರೂಮ್​ಗೆ ಬರಬೇಕಿತ್ತು. ಆದರೆ, ಮಾರ್ಗ ಮಧ್ಯೆ ರಸ್ತೆಯಲ್ಲಿಯೇ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿದ ಕೂಡಲೇ ಕಂಟೈನರ್ ಧಗದಧಗನೆ ಹೊತ್ತಿ ಉರಿದಿದ್ದು. ವಾಹನದಲ್ಲಿದ್ದ 40 ಎಲೆಕ್ಟ್ರಾನಿಕ್ ಬೈಕ್​ಗಳ ಪೈಕಿ 20 ಬೈಕ್​ಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಮತ್ತಿಗೆರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಬಸ್​ ಪಲ್ಟಿ; ಮೂವರಿಗೆ ಗಂಭೀರ ಗಾಯ

ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಕೈಗಾರಿಕಾ ವಲಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್​ ಪಲ್ಟಿಯಾದ ಘಟನೆ ನಡೆದಿದ್ದು, ಬಸ್​​ನಲ್ಲಿದ್ದ 30ಕ್ಕೂ ಹೆಚ್ಚು ಮಂದಿಯಲ್ಲಿ ಮೂವರು ಗಂಭೀರ ಗಾಯವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗಾಯಾಳುಗಳಿಗೆ ಸಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾರ್ಮೆಂಟ್ಸ್ ಪ್ಯಾಕ್ಟರಿಯಿಂದ ಬರುವ ವೇಳೆ ಈ ದುರ್ಘಟನೆ ನಡೆದಿದ್ದು, ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಅವಘಡ: 30 ರಿಂದ 40 ವಾಹನಗಳು ಬೆಂಕಿಗಾಹುತಿ

ಬ್ರೆಕ್‌ ಫೇಲಾಗಿ ಆಟೋ, ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್

ಗದಗ: ನಗರದ ಹಳೆ ಬಸ್​ ನಿಲ್ದಾಣದ ಬಳಿ ಕೆಎಸ್​ಆರ್​ಟಿಸಿ ಬಸ್​ವೊಂದು ಬ್ರೇಕ್​​ ಫೇಲಾಗಿ ಆಟೋ ಹಾಗೂ ಸ್ಕೂಟಿಗೆ ಡಿಕ್ಕಿಯಾಗಿ ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್​ ಬಸ್​​ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದು, ಆಟೋದಲ್ಲಿದ್ದ ಓರ್ವ ಯುವಕ, ವಿದ್ಯಾರ್ಥಿನಿಗೆ ಗಾಯವಾಗಿದೆ. ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಬಸ್ ಗದಗ ನಗರದ ಬಸ್​ ನಿಲ್ದಾಣದಿಂದ ಹಾತಲಗೇರಿ ಗ್ರಾಮಕ್ಕೆ ಹೊರಟಿತ್ತು​. ಈ ಕುರಿತು ಗದಗ ಶಹರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ