AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿಯಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಹೆಗ್ಡೆ

Hijab Verdict: ಹಿಜಾಬ್ ವಿಚಾರವಾಗಿ ಕೋರ್ಟ್​ನಲ್ಲಿ ತೀರ್ಪು ಬಂದಿದೆ. ಅದು ಸರಿಯಾ ಅಥವಾ ತಪ್ಪಾ ಎಂದು ಮೇಲಿನ ಕೋರ್ಟ್​ಗೆ ಹೋಗಲಿ. ಅದು ಬಿಟ್ಟು ಬೀದಿಗಿಳೀತೀವಿ, ಬಂದ್ ಮಾಡ್ತೇವೆಂಬುದು ಸರಿಯಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ತಿಳಿವಳಿಕೆ ಕೊಟ್ಟಿದ್ದಾರೆ.

ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿಯಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಹೆಗ್ಡೆ
ದೇಶದಲ್ಲಿ ಒಂದೇ ಧರ್ಮ ಇಲ್ಲ, ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿ ಅಲ್ಲ: ಹಿಜಾಬ್ ಬಗ್ಗೆ ತಿಳಿವಳಿಕೆ ಕೊಟ್ಟ ನ್ಯಾ. ಸಂತೋಷ್ ಹೆಗ್ಡೆ
TV9 Web
| Edited By: |

Updated on: Mar 24, 2022 | 7:27 PM

Share

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಧಾರ್ಮಿಕ ಕ್ಷೇತ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧ ವಿಚಾರವಾಗಿ ನೆಲಮಂಗಲದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿದ್ದಾರೆ. ಧರ್ಮ ಮತ್ತು ಭಾಷೆಯನ್ನು ಎಲ್ಲಿ ಬಳಸಬೇಕೋ ಅಲ್ಲಿ ಬಳಸಬೇಕು. ಧರ್ಮದ ವಿಚಾರ ಮನೆಯಲ್ಲಿರಬೇಕು ಎಂದು ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ (Former Lokayukta, Justice Santosh Hegde). ಸಮಾಜದಲ್ಲಿ ಬೇರೆ ಬೇರೆ ಧರ್ಮಗಳಿರುತ್ತವೆ. ಹಾಗಾಗಿ ಬಿಕ್ಕಟ್ಟು ಎದುರಾಗುತ್ತದೆ. ದೇಶದಲ್ಲಿ ಒಂದೇ ಧರ್ಮ ಇಲ್ಲ. ಹಾಗಾಗಿ ಧರ್ಮ ಹೇಳಿದಂತೆ ನಡೆಯಬೇಕು ಅನ್ನೋದು ಸರಿ ಅಲ್ಲ. ಹಿಜಾಬ್ ವಿಚಾರವಾಗಿ ಕೋರ್ಟ್​ನಲ್ಲಿ ತೀರ್ಪು ಬಂದಿದೆ (hijab verdict). ಅದು ಸರಿಯಾ ಅಥವಾ ತಪ್ಪಾ ಎಂದು ಮೇಲಿನ ಕೋರ್ಟ್​ಗೆ ಹೋಗಲಿ. ಅದು ಬಿಟ್ಟು ಬೀದಿಗಿಳೀತೀವಿ, ಬಂದ್ ಮಾಡ್ತೇವೆಂಬುದು ಸರಿಯಲ್ಲ. ನ್ಯಾಯಾಲಯದ ಮಾತಿಗೆ ನಾವು ಬೆಲೆ ಕೊಡಬೇಕಾಗುತ್ತದೆ. ಇದರ ವಿಚಾರವಾಗಿ ಶಾಂತಿಯುತವಾಗಿ, ಸೌಹಾರ್ದತೆಯಿಂದ ಪರಿಹಾರ ಮಾಡ್ಕೊಳ್ಳಬೇಕು. ಇಲ್ಲ ಅಂದ್ರೆ ಇದಕ್ಕೆಲ್ಲಾ ಅಂತ್ಯ ಅನ್ನೋದೆ ಇರಲ್ಲ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ತಿಳಿವಳಿಕೆ ಕೊಟ್ಟಿದ್ದಾರೆ.

ಶಲ್ಯವನ್ನೇ ದುಪ್ಪಟ್ಟಾ ಮಾಡಿಕೊಂಡ ಸಿದ್ದರಾಮಯ್ಯ ಹಿಜಾಬ್​ಗೆ ಅವಕಾಶ ಕೊಡಿ ಎಂದು ಅಸೆಂಬ್ಲಿಯಲ್ಲಿ ನಾಟಕೀಯವಾಗಿ ಕೇಳಿದರು: ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್​ ಪೂರ್ಣಪೀಠ ಪೂರ್ಣ ಬಹುಮತದ ತೀರ್ಪು ನೀಡಿದ್ದರ ಹೊರತಾಗಿಯೂ ಮುಸಲ್ಮಾನ ವಿದ್ಯಾರ್ಥಿನಿಯರು ಕೋರ್ಟ್​ ತೀರ್ಪಿಗೆ ಮನ್ನಣೆ ನೀಡದೆ ಅಲ್ಲಲ್ಲಿ ಹಿಜಾಬ್​ ಧರಿಸಿ ಕಾಲೇಜಿಗೆ ಬರುವ ಪ್ರಯತ್ನಗಳು ನಡೆದಿವೆ. ಈ ಮಧ್ಯೆ ರಾಜ್ಯದಲ್ಲಿನ ಪ್ರಮುಖ ಪ್ರತಿಪಕ್ಷವೂ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಹಗ್ಗಜಗ್ಗಾಟ ನಡೆಸುತ್ತಿದೆ. ಇಂದು ವಿಧಾನಸೌಧದಲ್ಲಿ ಪ್ರತಿಪಕ್ಷದ ನಾಯಕ ಮತ್ತು ಉಪ ನಾಯಕ ಇಬ್ಬರೂ ವಿಷಯವನ್ನು ಸದನದಲ್ಲಿಯೂ ಪ್ರಸ್ತಾಪ ಮಾಡಿದರು. ಒಂದು ಹಂತದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಾಟಕೀಯವಾಗಿ ತಾವು ಹೆಗಲ ಮೇಲೆ ಹಾಕಿಕೊಂಡಿದ್ದ ಶಲ್ಯವನ್ನೇ ತೆಗೆದು, ದುಪ್ಪಟ್ಟಾ ಹಾಕಿಕೊಳ್ಳುವುದು ಹೇಗೆ ಎಂದು ಸದನದಲ್ಲಿ ಪ್ರದರ್ಶಿಸಿದರು. ಜೊತೆಗೆ, ಪರೀಕ್ಷೆ ವೇಳೆಯಾದ್ದರಿಂದ ವಿದ್ಯಾರ್ಥಿನಿಯರಿಗೆ ದುಪ್ಪಟ್ಟಾ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ಸರ್ಕಾರದ ಗಮನ ಸೆಳೆದರು.

ಮುಂದುವರಿದು ಸದನದಲ್ಲಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಈ ಸಂಬಂಧ ಬೇಕಿದ್ದರೆ ಧರ್ಮಗುರುಗಳ ಸಭೆ ಕರೆದು ಸರ್ಕಾರ ತೀರ್ಮಾನ ಮಾಡಲಿ ಎಂದೂ ಸರ್ಕಾರಕ್ಕೆ ಸಲಹೆ ಕೊಡುತ್ತಾ, ಮನವಿ ಮಾಡಿದರು. ಇವರಿಗೆ ಸಾಥ್​ ಕೊಡುವಂತೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಸಹ ಸದನದಲ್ಲಿ ಮಾತನಾಡುತ್ತಾ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಡಿಗ್ರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಜೊತೆಗೆ ಕನ್ನಡದ ಕವನವೊಂದನ್ನು ವಾಚಿಸುತ್ತಾ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದಾಗಿ ಬಾಳೋಣ ಎಂದರು ಖಾದರ್‌.

ಇದನ್ನೆಲ್ಲಾ ಕೇಳಿಸಿಕೊಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಹೈಕೋರ್ಟ್​ ತೀರ್ಪಿಗೆ ಅನುಗುಣವಾಗಿ ನಾವು ಹೋಗುತ್ತೇವೆ ಎಂದು ಹೇಳುತ್ತಾ, ಹೈಕೋರ್ಟ್ ಸೂಚನೆ ಪಾಲನೆ ಮಾಡಿ ಅಂತಾ ನೀವು ಅವರ ಮನವೊಲಿಸಿ. ಅದರಿಂದ ವಿಷಯ ಇತ್ಯರ್ಥವಾಗುತ್ತದೆ. ನಾವು ಅವರ ಮನವೊಲಿಸಲು ಹೋಗಿ ಫೇಲ್ ಆಗಿದ್ದೇವೆ ಎಂದು ಸಚಿವ ನಾಗೇಶ್ ಅವರು ಇಬ್ಬರೂ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕೇರಳದಲ್ಲಿ ಕೊವಿಡ್​ 19 ನಿಯಂತ್ರಣ ನಿಯಮ ಉಲ್ಲಂಘಿಸಿದವರಿಗೆ ವಿಧಿಸಲಾದ ದಂಡದ ಮೊತ್ತ ಬರೋಬ್ಬರಿ 350 ಕೋಟಿ ರೂ. !

ಇದನ್ನೂ ಓದಿ: ಯೂನಿಫಾರಂ ಧರಿಸಿ ಬಸ್​ನೊಳಗೆ ಬಿಯರ್ ಕುಡಿದ ಶಾಲಾ ವಿದ್ಯಾರ್ಥಿಗಳ ವಿಡಿಯೋ ವೈರಲ್

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?