AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವರ ಅಂತ ಆಸ್ಪತ್ರೆ ಸೇರಿದ್ದ ಡಿಪ್ಲೋಮಾ ವಿದ್ಯಾರ್ಥಿ ಸಾವು: 20 ದಿನ ಟ್ರೀಟ್ಮೆಂಟ್-9 ಲಕ್ಷ ಬಿಲ್, ಆಸ್ಪತ್ರೆ ವಿರುದ್ದ ಪೋಷಕರ ಆಕ್ರೋಶ

ಯುವಕನ ಸಾವಿಗೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಎರಡೂ ಕಡೆಯಿಂದಲೂ ಹೇಳಿಕೆ ಪಡೆದಕೊಂಡಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಸ್ಪಂದನ ಆಸ್ಪತ್ರೆಯಲ್ಲಿ ಜರುಗುತ್ತಿದ್ದು ಆರೊಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಅನ್ನೋದು ಸಾರ್ವಜನನಿಕರ ಆಗ್ರಹವಾಗಿದೆ.

ಜ್ವರ ಅಂತ ಆಸ್ಪತ್ರೆ ಸೇರಿದ್ದ ಡಿಪ್ಲೋಮಾ ವಿದ್ಯಾರ್ಥಿ ಸಾವು: 20 ದಿನ ಟ್ರೀಟ್ಮೆಂಟ್-9 ಲಕ್ಷ ಬಿಲ್, ಆಸ್ಪತ್ರೆ ವಿರುದ್ದ ಪೋಷಕರ ಆಕ್ರೋಶ
ಜ್ವರ ಅಂತ ಆಸ್ಪತ್ರೆ ಸೇರಿದ್ದ ಡಿಪ್ಲೋಮೊ ವಿದ್ಯಾರ್ಥಿ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 13, 2023 | 10:59 AM

ಆ ಹುಡುಗ ಆದಿಚುಂಚನಗಿರಿ ಮಠದಲ್ಲಿ ಡಿಪ್ಲೋಮೊ (Diploma) ಓದುತ್ತಿದ್ದ, ತಂದೆ ತಾಯಿಗೆ ಮಾತಾಡಿಸಿಕೊಂಡು ಬರೋಣ ಅಂತ ಸರ್ಜಾಪುರಕ್ಕೆ ಬಂದಿದ್ದ. ಇದಕ್ಕಿದ್ದಂತೆ ಆತನಿಗೆ ಜ್ವರ (fever) ಕಾಣಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆಯವರೆಗೂ ಸ್ನೇಹಿತರ ಜತೆ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದ ಆತ ಬೆಳಗಾಗೋದ್ರಲ್ಲಿ ಇಹಲೋಕ ತ್ಯಜಿಸಿದ್ದಾನೆ. ಈ ಸಾವಿಗೆ ವೈದ್ಯರೇ ಕಾರಣ (hospital negligence) ಅಂತ ಪೋಷಕರು ಆರೋಪ ಮಾಡಿದ್ದಾರೆ. ಪೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ದೀಪಕ್ .. ಆನೇಕಲ್ (anekal) ತಾಲ್ಲೂಕಿನ ಮುತ್ತಾನಲ್ಲೂರು ಸಮೀಪದ ಕೊಮ್ಮಸಂದ್ರ ಗ್ರಾಮದ ನಿವಾಸಿ. ಮೂರು ಜನ ಗಂಡು ಮಕ್ಕಳಲ್ಲಿ ಮೊದಲನೇ ಮಗ ಈತ. ಹಾಸನದ ಆದಿ‌ಚುಂಚನಗಿರಿ ಮಠದಲ್ಲಿ ಡಿಪ್ಲೋಮೊ ವ್ಯಾಸಂಗ (student) ಮಾಡ್ತಿದ್ದ. ಹಿರಿಯ ಮಗನ ಮೇಲೆ ಬಹಳಷ್ಟು ಆಸೆ ಆಕಾಂಕ್ಷೆಗಳ ಜೊತೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ಕುಟುಂಬದ ಮೇಲೆ ನಿನ್ನೆ ರಾತ್ರಿಯ ಸಾವಿನ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಕೆಲ ದಿನಗಳ ಹಿಂದೆ ಜ್ವರ, ಕೈಕಾಲು ನೋವಿನಿಂದಾಗಿ ಬಳಲುತ್ತಿದ್ದ ದೀಪಕ್ ಗೆ ಸರ್ಜಾಪುರ ಬಳಿಯ (sarjapura) ಸೋಂಪುರದ ಸ್ಪಂದನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದೀಪಕ್ ಗುಣಮುಖವಾಗಿ ಡಿಸ್ಚಾರ್ಜ್​​ ಆಗ್ತಾನೆ ಅಂದುಕೊಂಡಿದ್ರು, ಆದರೆ ಆಗಿದ್ದೇ ಬೇರೆ…

ಮೊನ್ನೆ ರಾತ್ರಿಯ ಸಂಜೆವರೆಗೂ ಗೆಳೆಯರಿಗೆ ವಿಡಿಯೋ ಕಾಲ್ ಮಾಡಿದ್ದ ದೀಪಕ್ ಇದಕ್ಕಿದ್ದಂತೆ ಅದ್ಹೇಗೆ ಈ ಲೋಕ ಬಿಟ್ಟು ಹೋದ? ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಅಂತ ಪೋಷಕರು ಆರೋಪ‌ ಮಾಡಿದ್ದಾರೆ. ಇದು ಸ್ಪಂದನಾ ಆಸ್ಪತ್ರೆ ಅಲ್ಲ ಬದಲಿಗೆ ಸ್ಮಶಾನ ಆಸ್ಪತ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಚಿಕ್ಕಪ್ಪ ಹರೀಶ್‌ ಮತ್ತು ಸ್ನೇಹಿತ ಹೇಮಂತ್.

ಡಿಸೆಂಬರ್​ 23ರಂದು ಜ್ವರದ ಕಾರಣ ದೀಪಕ್ ಗೆ ಸ್ಪಂದನ ಆಸ್ಪತ್ರೆ ಯಲ್ಲಿ ದಾಖಲು ಮಾಡಲಾಗಿತ್ತು. ದಾಖಲು ಮಾಡಿದ ಎರಡನೇ ದಿನವೇ ಐಸಿಯುಗೆ ಶಿಫ್ಟ್​​ ಮಾಡಿ ಚಿಕಿತ್ಸೆ ನೀಡಲಾಗ್ತಿತ್ತು.‌ ತಮ್ಮ ಮಗನಿಗೆ ಅತ್ಯಂತ‌ ದುಬಾರಿಯ ಇಂಜೆಕ್ಷನ್ ಗಳನ್ನು ತರಿಸಿ ಇಂಜೆಕ್ಟ್ ಮಾಡಿದ್ದಾರೆ. ಆದರೆ ಅವನ ಆರೋಗ್ಯ ಹೇಗಿದೆ? ಅನ್ನೋ ಸರಿಯಾದ‌ ಮಾಹಿತಿಯೇ ನಮಗೆ ಕೊಟ್ಟಿಲ್ಲ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ದೀಪಕ್ ರಾತ್ರಿ ಒಂದು ಗಂಟೆಗೆ ತೀರಿಕೊಂಡಿದ್ರೂ, ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ಡೆತ್ ನೋಟ್ ಕೊಟ್ಟಿದ್ದಾರೆ. ದುಡ್ಡು ತಿನ್ನೋದಕ್ಕಾ ಹೀಗೆ ಮಾಡಿದ್ದು ಅಂತ ಪ್ರಶ್ನೆ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪಂದನ ಅಸ್ಪತ್ರೆ ವೈದ್ಯರು, ದೀಪಕ್ ಅರೋಗ್ಯಕ್ಕೆ ಸಂಬಂಧಿಸಿದಂತೆ ತಂದೆ ತಾಯಿಗೆ ಪ್ರತಿಯೊಂದು ವಿಚಾರ ಮುಟ್ಟಿಸಿದ್ದೇವೆ. ದೀಪಕ್ ಬಹುಅಂಗಾಂಗ ವೈಫಲ್ಯ ದಿಂದ ಬಳಲುತ್ತಿದ್ದು ಅವರಲ್ಲಿ ರೋಗ ನಿರೋಧಕ ಶಕ್ತಿ ಇರಲಿಲ್ಲ ಅಂತ ಹೇಳಿದ್ದಾರೆ.

ಯುವಕನ ಸಾವಿಗೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಎರಡೂ ಕಡೆಯಿಂದಲೂ ಹೇಳಿಕೆ ಪಡೆದಕೊಂಡಿದ್ದಾರೆ. ಆದರೆ ಪದೇ ಪದೇ ಇಂತಹ ಘಟನೆಗಳು ಸ್ಪಂದನ ಆಸ್ಪತ್ರೆಯಲ್ಲಿ ಜರುಗುತ್ತಿದ್ದು ಆರೊಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಅನ್ನೋದು ಸಾರ್ವಜನನಿಕರ ಆಗ್ರಹವಾಗಿದೆ.

ವರದಿ: ಸೈಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್

Published On - 10:57 am, Fri, 13 January 23

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ