ದೊಡ್ಡಬಳ್ಳಾಪುರ: ಪಾನಮತ್ತ ಕಿಡಿಗೇಡಿಗಳಿಂದ ಆಡಿದ್ದೇ ಆಟ: ಬೈಕ್​ಗೆ ಡಿಕ್ಕಿ ಹೊಡೆದು, ಕಿಡಿ ಹಚ್ಚಿ ಪರಾರಿ! ಮುಂದೇನಾಯ್ತು?

ಖದೀಮರು ಚಾಕು ತೋರಿಸುತ್ತಿದ್ದಂತೆ ಬೈಕ್ ಮಾಲೀಕ ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಲೀಕ‌‌ ಪರಾರಿಯಾದ ಅಂತ ಬೈಕ್ ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ. ಕಿಡಿಗೇಡಿಗಳು, ಶೈನ್ ಬೈಕ್ ಅನ್ನ ರಸ್ತೆ ಬದಿಯ ಹಳ್ಳಕ್ಕೆ ಹಾಕಿ ಕಿಡಿ ಹಚ್ಚಿದ್ದಾರೆ.

ದೊಡ್ಡಬಳ್ಳಾಪುರ: ಪಾನಮತ್ತ ಕಿಡಿಗೇಡಿಗಳಿಂದ ಆಡಿದ್ದೇ ಆಟ: ಬೈಕ್​ಗೆ ಡಿಕ್ಕಿ ಹೊಡೆದು, ಕಿಡಿ ಹಚ್ಚಿ ಪರಾರಿ! ಮುಂದೇನಾಯ್ತು?
ಪಾನಮತ್ತ ಕಿಡಿಗೇಡಿಗಳಿಂದ ಆಡಿದ್ದೇ ಆಟ: ಬೈಕ್​ಗೆ ಡಿಕ್ಕಿ ಹೊಡೆದು, ಕಿಡಿ ಹಚ್ಚಿ ಪರಾರಿ! ಮುಂದೇನಾಯ್ತು?
Edited By: ಸಾಧು ಶ್ರೀನಾಥ್​

Updated on: Sep 30, 2021 | 12:26 PM

ದೊಡ್ಡಬಳ್ಳಾಪುರ: ಖದೀಮರು ಕುಡಿದ ನಶೆಯಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇನ್ನು ಡಿಕ್ಕಿ‌ ಹೊಡೆದಿದ್ದನ್ನ ಪ್ರಶ್ನಿಸಿದಕ್ಕೆ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿ ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಕೋಟೆ ಗ್ರಾಮದ ಬಳಿ ಘಟನೆ ನಡೆದಿದೆ.

ಖದೀಮರು ಚಾಕು ತೋರಿಸುತ್ತಿದ್ದಂತೆ ಬೈಕ್ ಮಾಲೀಕ ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಲೀಕ‌‌ ಪರಾರಿಯಾದ ಅಂತ ಬೈಕ್ ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ. ಕಿಡಿಗೇಡಿಗಳು, ಶೈನ್ ಬೈಕ್ ಅನ್ನ ರಸ್ತೆ ಬದಿಯ ಹಳ್ಳಕ್ಕೆ ಹಾಕಿ ಕಿಡಿ ಹಚ್ಚಿದ್ದಾರೆ.

ಆದರೆ ಗ್ರಾಮಸ್ಥರು ಬೆಂಕಿ ಹಚ್ಚಿ ಎಸ್ಕೇಪ್ ಆಗ್ತಿದ್ದವರನ್ನ ಮುಂದಿನ ಗ್ರಾಮದ ಬಳಿ ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಸ್ಥಳೀಯರು ಹೆಸರಘಟ್ಟ ಮೂಲದ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Also Read:
ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಬೈಕ್​ನಲ್ಲಿ ಬಂದವರಿಂದ ಮನೆ ಮುಂದೆ ನಿಲ್ಲಿಸಿದ್ದ 17 ಕಾರಿನ ಗಾಜುಗಳು ಪುಡಿ ಪುಡಿ

Also Read:
ಇದು ಬೈಕ್​ ವೀಲಿಂಗ್​ ಅಲ್ಲ ಸೈಕಲ್ ವೀಲಿಂಗ್! ನಡುರಸ್ತೆಯಲ್ಲಿ ಯುವಕರ ಸೈಕಲ್ ವೀಲಿಂಗ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿ

 

Web contact

TV9 Kannada

Read More
Follow Us