ಟಿವಿ9 ಇಂಪ್ಯಾಕ್ಟ್​: ಒಳ ರೋಗಿಗಳಿಗೆ ಊಟ ಕೊಟ್ಟು ಹಸಿವು ನೀಗಿಸಿದ ನೆಲಮಂಗಲ ತಾಲೂಕು ಆಸ್ಪತ್ರೆ

ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕಾಗಿದ್ದ ನೆಲಮಂಗಲ ತಾಲೂಕು ಆಸ್ಪತ್ರೆಗೆ ರೋಗ ಹಿಡಿದಿತ್ತು. ಅಧಿಕಾರಿಗಳು ನಿಷ್ಕ್ರಿಯವಾಗಿದ್ದು, ಬಡ ರೋಗಿಗಳು ಊಟವಿಲ್ಲದೆ ಪರದಾಡುತ್ತಿದ್ದರು. ಈ ಕುರಿತು ಟಿವಿ9 ನಲ್ಲಿ ಸುದ್ದಿ ಬಂದಿದ್ದೆ ತಡ, ಕೂಡಲೇ ಒಳ ರೋಗಿಗಳಿಗೆ ಊಟ ಕೊಟ್ಟು ಹಸಿವು ನೀಗಿಸಿದ್ದಾರೆ.

ಟಿವಿ9 ಇಂಪ್ಯಾಕ್ಟ್​: ಒಳ ರೋಗಿಗಳಿಗೆ ಊಟ ಕೊಟ್ಟು ಹಸಿವು ನೀಗಿಸಿದ ನೆಲಮಂಗಲ ತಾಲೂಕು ಆಸ್ಪತ್ರೆ
ನೆಲಮಂಗಲ ತಾಲೂಕು ಆಸ್ಪತ್ರೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Mar 03, 2024 | 8:45 PM

ಬೆಂಗಳೂರು ಗ್ರಾಮಾಂತರ, ಮಾ.03: ಕಳೆದ ಮೂರು ದಿನದಿಂದ ಒಳರೋಗಿಗಳಿಗೆ ಊಟ ಕೊಡದೆ ಟೆಂಡರ್ ಅವಧಿ ಮುಗಿದಿದೆ ಎಂದು ನೆಪ ಹೇಳಿಕೊಂಡು ರೋಗಿಗಳಿಗೆ ಊಟ ಕೂಡದೆ ಆಸ್ಪತ್ರೆಯ ಆಡಳಿತ ಮಂಡಳಿ, ಉದ್ದಡತನ ಮೆರೆದಿದ್ದರು. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಆಸ್ಪತ್ರೆ(Nelamangala Taluk Hospital)ಯ ರೋಗಿಗಳು, ಊಟವಿಲ್ಲದೆ ಅಸಹಾಯಕರಾಗಿದ್ದರು. ಯಾವಾಗ ಈ ಕುರಿತು ಟಿವಿ9 ವರದಿ ಬಿತ್ತರಿಸಿತೋ, ತಕ್ಷಣ ಆಸ್ಪತ್ರೆಯ ಚಿತ್ರಣವೇ ಬದಲಾಗಿದೆ. ಈಗ ರೋಗಿಗಳಿಗೆ ಮೊಟ್ಟೆ,ಬಾಳೆಹಣ್ಣು,ಅನ್ನ-ಸಾಂಬಾರ್ ನೀಡಿ ರೋಗಿಗಳ ಹಸಿವನ್ನ ನೀಗಿಸಿದ್ದಾರೆ.

ಟಿವಿ9 ನಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಒಂದೇ ದಿನದಲ್ಲಿ ಆಸ್ಪತ್ರೆ ಚಿತ್ರಣವೇ ಬದಲಾಗಿ ಹೋಗಿದೆ. ಇನ್ನು ಆಸ್ಪತ್ರೆಗೆ ಅಂಟಿದ್ದ ಜಿಡ್ಡನ್ನ ತೊಳೆದು ಹಾಕೋಕೆ ಡಿಎಚ್ಒ ಸುನಿಲ್ ಕುಮಾರ್, ಟಿಎಚ್​ಒ ಆಗಿರುವ ಹೇಮಾವತಿ ಅವರು ಬಂದಿದ್ದರು. ಸೋಮಾರಿಯಾಗಿದ್ದ ಎಎಂಓ ಸೋನಿಯಾ ಎಂಬುವವರಿಗೆ ಬಿಸಿ ಮುಟ್ಟಿಸಿ, ಸರಿಯಾಗಿ ಕೆಲಸ ಮಾಡುವಂತೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಊಟದಲ್ಲಿ ಏನೇ ಸಮಸ್ಯೆ ಆದರೂ ಕ್ಯಾಂಟೀನ್ ನಿರ್ವಾಹಕ ಹಾಗೂ ಆಸ್ಪತ್ರೆ ಆಡಳಿತದ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಮತ್ತು ರೋಗಿಗಳಿಗೆ ಚಿಕಿತ್ಸೆಗೂ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ.

ಇದನ್ನೂ ಓದಿ:ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ

ಇನ್ನು ಆಸ್ಪತ್ರೆ ವಾತಾವರಣ ದಿಢೀರ್ ಎಂದು ಚೇಂಜ್ ಆಗಿದ್ದಕ್ಕೆ ಮಾತನಾಡಿದ ರೋಗಿಗಳು, ‘ಸಂತಸ ವ್ಯಕ್ತಪಡಿಸಿದ್ದು, ಟಿವಿ9 ಕಾರ್ಯವನ್ನ ಸ್ಲಾಗಿಸಿದ್ದಾರೆ.  ಸುದ್ದಿ ಪ್ರಸಾರಗೊಂಡ ಕಾರಣ ಆಸ್ಪತ್ರೆಯ ಊಟದ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಮತ್ತೆ ಏನಾದರೂ ಊಟದ ಸಮಸ್ಯೆ ಜೊತೆ ಇನ್ನೇನಾದರೂ ಸಮಸ್ಯೆ ಬಂದರೆ, ಟಿವಿ9 ಗೆ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಏನೇ ಹೇಳಿ ಒಂದೇ ದಿನದಲ್ಲಿ ಆಸ್ಪತ್ರೆ ವಾತಾವರಣವೇ ಬದಲಾಗಿ ಹೋಗಿದ್ದು, ಆಸ್ಪತ್ರೆ ಸಿಬ್ಬಂದಿ ಇನ್ನು ಮುಂದೆ ಆದರೂ ನಿರ್ಲಕ್ಷ್ಯ ವಹಿಸದೆ ರೋಗಿಗಳ ಹಿತ ಕಾಪಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us