ದೋಡ್ಡ ಸಮಾಧಾನ! ರಾಜಧಾನಿಗಿಲ್ಲ ಕೊರೊನಾ ಭೀತಿ, NO CORONA !!!

ಬೆಂಗಳೂರು: ಕರ್ನಾಟಕಕ್ಕೆ ಬಹು ದೊಡ್ಡ ಸಮಾಧಾನಕರ ಸುದ್ದಿಯೊಂದು ಇದೀಗತಾನೇ ಹೊರಬಂದಿದೆ. ಇದು ಡ್ರ್ಯಾಗನ್ ವೈರಸ್ ಕಾಯಿಲೆಗೆ ಸಂಬಂಧಪಟ್ಟಿದ್ದು, ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾದ ನಾಲಕ್ಕೂ ಪ್ರಕರಣಗಳು ನೆಗೆಟೀವ್ ಆಗಿವೆ. ಅಂದ್ರೆ ಯಾರಿಗೂ ಕೊರೊನಾ ವೈರಸ್​ ಸೋಂಕು ಆಗಿಲ್ಲ! ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್​ ಸೋಂಕು ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಪ್ರತ್ಯೇಕ ಕೊರೊನಾ ವಾರ್ಡ್ ನಲ್ಲಿ ದಾಖಲಾಗಿದ್ದ ಶಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಟ್ಟು 5 ಜನ ಕೊರೊನಾ ವೈರಸ್ ಶಂಕಿತರನ್ನ ದಾಖಲು ಮಾಡಿಕೊಳ್ಳಲಾಗಿತ್ತು. ನಿನ್ನೆ […]

ದೋಡ್ಡ ಸಮಾಧಾನ! ರಾಜಧಾನಿಗಿಲ್ಲ ಕೊರೊನಾ ಭೀತಿ, NO CORONA !!!
ಸಾಧು ಶ್ರೀನಾಥ್​

Updated on: Mar 05, 2020 | 12:00 PM

ಬೆಂಗಳೂರು: ಕರ್ನಾಟಕಕ್ಕೆ ಬಹು ದೊಡ್ಡ ಸಮಾಧಾನಕರ ಸುದ್ದಿಯೊಂದು ಇದೀಗತಾನೇ ಹೊರಬಂದಿದೆ. ಇದು ಡ್ರ್ಯಾಗನ್ ವೈರಸ್ ಕಾಯಿಲೆಗೆ ಸಂಬಂಧಪಟ್ಟಿದ್ದು, ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾದ ನಾಲಕ್ಕೂ ಪ್ರಕರಣಗಳು ನೆಗೆಟೀವ್ ಆಗಿವೆ. ಅಂದ್ರೆ ಯಾರಿಗೂ ಕೊರೊನಾ ವೈರಸ್​ ಸೋಂಕು ಆಗಿಲ್ಲ! ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್​ ಸೋಂಕು ಪತ್ತೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

ಪ್ರತ್ಯೇಕ ಕೊರೊನಾ ವಾರ್ಡ್ ನಲ್ಲಿ ದಾಖಲಾಗಿದ್ದ ಶಂಕಿತರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಟ್ಟು 5 ಜನ ಕೊರೊನಾ ವೈರಸ್ ಶಂಕಿತರನ್ನ ದಾಖಲು ಮಾಡಿಕೊಳ್ಳಲಾಗಿತ್ತು. ನಿನ್ನೆ ನಾಲ್ಕು ಜನರ ವರದಿ ಬಂದಿದೆ.‌ ನಾಲ್ಕು ಜನರ ವರದಿ ನೆಗೆಟಿವ್ ಆಗಿದೆ. ನೆಗಟಿವ್ ವರದಿ ಬಂದ ಬೆನ್ನಲ್ಲೇ ನಿನ್ನೆಯೇ 3 ಜನರನ್ನ ಡಿಸ್ ಚಾರ್ಜ್ ಮಾಡಲಾಗಿದೆ. ಇನ್ನುಳಿದ ಇಬ್ಬರ ಪೈಕಿ ಇಂದು ಬೆಳಗ್ಗೆ ಒಬ್ಬರನ್ನ ಡಿಸ್ಚಾರ್ಚ್ ಮಾಡಲಾಗಿದೆ. ಉಳಿದ ಒಬ್ಬರನ್ನ ಮಾತ್ರ ಇನ್ನೂ ಡಿಸ್ಚಾರ್ಜ್ ಮಾಡಿಲ್ಲ ಎಂದು ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.

Published On - 11:59 am, Thu, 5 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us