AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೊಂದು ಖತರ್ನಾಕ್ ಜೋಡಿ: ಪ್ರೀತಿ, ಪ್ರೇಮದ ಜೊತೆಗೆ ಇನ್ನೇನೋ ಮಾಡಲು ಹೋಗಿ ತಗ್ಲಾಕೊಂಡರು​

ನಗರದೆಲ್ಲೆಡೆ ಬೈಕ್​ ಕಳ್ಳತನ ಜಾಸ್ತಿಯಾಗಿದ್ದು, ಅದರಂತೆ ಇದೀಗ ಇಬ್ಬರು ಖತರ್ನಾಕ್ ಜೋಡಿಗಳನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮೋಜು ಮಸ್ತಿಗಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಜೋಡಿ ಇದೀಗ ಪೊಲೀಸ್​ ಅತಿಥಿಯಾಗಿದ್ದಾರೆ.

ಬೆಂಗಳೂರಿನಲ್ಲೊಂದು ಖತರ್ನಾಕ್ ಜೋಡಿ: ಪ್ರೀತಿ, ಪ್ರೇಮದ ಜೊತೆಗೆ ಇನ್ನೇನೋ ಮಾಡಲು ಹೋಗಿ ತಗ್ಲಾಕೊಂಡರು​
ಬೈಕ್​ ಕಳ್ಳತನ ಮಾಡಿ ಸಿಕ್ಕಿಬಿದ್ದ ಜೋಡಿ
ಕಿರಣ್ ಹನುಮಂತ್​ ಮಾದಾರ್
|

Updated on:Apr 26, 2023 | 12:53 PM

Share

ಬೆಂಗಳೂರು: ನಗರದೆಲ್ಲೆಡೆ ಬೈಕ್​ ಕಳ್ಳತನ ಜಾಸ್ತಿಯಾಗಿದ್ದು, ಅದರಂತೆ ಇದೀಗ ಇಬ್ಬರು ಖತರ್ನಾಕ್ ಜೋಡಿಗಳನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಹೌದು ಆರೋಪಿ ಮುರುಗಾ ಮತ್ತು ಆತನ ಪ್ರೇಯಸಿ ಸೇರಿ ಮೋಜು, ರಾಯಲ್ ಲೈಫ್​​ಗಾಗಿ ಬೈಕ್​ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಬಂದ ಹಣದಲ್ಲಿ ಈ ಜೋಡಿ ಹಕ್ಕಿಗಳು ಮಾದಕವಸ್ತು ಸೇವಿಸಿ ಮೋಜು ಮಾಡುತ್ತಿದ್ದರು. ಕೇವಲ ಪ್ರಿಯಕರ ಮಾತ್ರವಲ್ಲದೆ ಆತನ ಪ್ರೇಯಸಿಯೇ ಖುದ್ದು ಬೈಕ್ ಕದಿಯುತ್ತಿದ್ದಳು. ಇದೀಗ ಈ ಲವರ್ಸ್ ಬೈಕ್ ಕದ್ದು ಪೊಲೀಸರ ಅತಿಥಿಯಾಗಿದ್ದಾರೆ. ಇನ್ನು ಇವರಿಬ್ಬರ ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುರುಗನ ಪ್ರೀತಿಯಲ್ಲಿ ಬಿದ್ದು ಕಳ್ಳತನಕ್ಕೆ ಸಾಥ್ ಕೊಟ್ಟಿದ್ದ ಯುವತಿ

ಹೌದು ಮುರುಗನ ಪ್ರೀತಿಯಲ್ಲಿ ಬಿದ್ದು, ಈ ಯುವತಿ ಕೂಡ ಆತನ ಕ್ರೈಂ ಚಟುವಟಿಕೆಗೆ ಸಾಥ್​ ಕೊಟ್ಟಿದ್ದಳು. ಹೇಗೆ ಅಂದರೆ, ಒಂದು ಟೈಂ ಮುರುಗಾ ಬೈಕ್ ಕಳ್ಳತನ ಮಾಡಿದ್ರೆ, ಇನ್ನೊಂದು ಬಾರಿ ಆತನ ಪ್ರೇಯಸಿ ಬೈಕ್ ಕಳ್ಳತನ ಮಾಡುತ್ತಿದ್ದಳು. ಬಳಿಕ ಬಂದ ಹಣದಲ್ಲಿ ಎಂಡಿಎಂಎ, ಗಾಂಜಾ ಸೇವಿಸಿ ಮಜಾ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಗಾ‌ ಎಂಬಾತ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗೆ ಬೇಕಾಗಿದ್ದನು. ಇದೀಗ ಬೆಂಗಳೂರು ಮಲ್ಲೇಶ್ವರಂ ಪೊಲೀಸರಿಂದ ಚೋರ್ ಲವ್ವರ್ಸ್ ಅರೆಸ್ಟ್​ಯಾಗಿದ್ದು, ಬಂಧಿತರಿಂದ 3 ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:Atiq Ahmad Killers: ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಂತಕರನ್ನು 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದ ನ್ಯಾಯಾಲಯ

ಪ್ರಿಯತಮೆಗೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಗಿಫ್ಟ್‌ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್

ಬೆಂಗಳೂರು: ಹೌದು ಇಂತಹ ಕೇಸ್​ಗಳು ಸರ್ವೇಸಾಮಾನ್ಯವಾಗಿದ್ದು, ಕಳೆದ 2021 ರಲ್ಲಿ ಲಾಂಗ್‌ ಡ್ರೈವ್‌ ಹೋಗಲಿಕ್ಕೆ ಹಾಗೂ ಗಿಫ್ಟ್‌ ಕೊಡಿಸಲು ಹಣವಿಲ್ಲದ ಕಾರಣ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರೇಮಿಗಳನ್ನು ಬಂಧಿಸಿದ್ದರು. ಬೆಂಗಳೂರಿನ ರಾಜಾಜಿನಗರ ರೌಡಿಶೀಟರ್ ವಿನಯ್ ಹಾಗೂ ಪ್ರಿಯತಮೆ ಕೀರ್ತನಾ ಬಂಧಿತರು.

ರೌಡಿಶೀಟರ್ ವಿನಯ್​ ಆತನ ಪ್ರಿಯತಮೆ ಕೀರ್ತನಾ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗು, ಗಿಫ್ಟ್ ಕೊಡ್ಸು ಎಂದು ಪೀಡಿಸುತ್ತಿದ್ದಳಂತೆ. ಆಗ ವಿನಯ್ ನಾನೇ ಕಳ್ಳ ನಿನಗೇನು ಗಿಫ್ಟ್ ಕೊಡಿಸಲಿ, ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದನಂತೆ. ನೀನ್ ರೌಡಿ ಆದ್ರು, ನಿನ್ನನ್ನೆ ಲವ್ ಮಾಡಿದ್ದೀನಿ ನಿನ್ ಜೊತೆ ಜೈಲಿಗೆ ಬೇಕಾದ್ರು ಬರ್ತಿನಿ ಎಂದು ಕೀರ್ತನಾ ವಿನಯ್ ಬಳಿ ತನ್ನ ಪ್ರೀತಿ ತೋರ್ಪಡಿಸುತ್ತಿದ್ದಳಂತೆ. ಅದರಂತೆ ರೌಡಿಶೀಟರ್ ವಿನಯ್ ತನ್ನ ಲವರ್ ಕೀರ್ತನಾ ಜೊತೆ ಸೇರಿ ಕಳ್ಳತನಕ್ಕೆ ಮುಂದಾಗಿ, ಗಂಡ ಹೆಂಡತಿ ರೂಪದಲ್ಲಿ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಮನೆ ಕಳ್ಳತನಕ್ಕೆ ಮುಂದಾಗಿದ್ದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Wed, 26 April 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?