Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್‌ಗೆ ವಿಮಾನ ಹಾರಾಟ ನಿಲ್ಲಿಸಿದ ಆಕಾಸ ಏರ್​ಲೈನ್ಸ್​: ಕಾರಣ?

ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹಾರಾಟ ನಡೆಸಬೇಕಿದ್ದ ಆಕಾಸ ಏರ್ ವಿಮಾನ ರದ್ದು ಮಾಡಲಾಗಿದೆ. ಹೀಗಾಗಿ ಈ ಎರಡು ಮಾರ್ಗಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದವರು ಟಿಕೆಟ್ ಹಣ ಮರುಪಾವತಿಗಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಹಾರಾಟ ನಡೆಸುತ್ತಿದ್ದ ಅನೇಕ ವಿಮಾನಗಳ ಕಾರ್ಯಾಚರಣೆಯನ್ನು ಏರ್‌ಲೈನ್ ರದ್ದುಗೊಳಿಸುವ ಸಾಧ್ಯತೆಯಿದೆ.

ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್‌ಗೆ ವಿಮಾನ ಹಾರಾಟ ನಿಲ್ಲಿಸಿದ ಆಕಾಸ ಏರ್​ಲೈನ್ಸ್​: ಕಾರಣ?
ಆಕಾಸ ಏರ್
Follow us
ಆಯೇಷಾ ಬಾನು
|

Updated on:Oct 12, 2023 | 9:20 AM

ಬೆಂಗಳೂರು, ಅ.12: ಕಡಿಮೆ ದರದ ವಿಮಾನಯಾನ ಸಂಸ್ಥೆ ಆಗಿರುವ ದೇಶೀಯ ವಿಮಾನಯಾನ ಸಂಸ್ಥೆ ಆಕಾಸ ಏರ್‌ಗೆ (Akasa Air) ಮೂರು ಜಿಸಿಸಿ ದೇಶಗಳಿಗೆ ಸೇವೆಗಳನ್ನು ನಿರ್ವಹಿಸಲು ನಾಗರಿಕ ವಿಮಾನಯಾನ ಪ್ರಾಧಿಕಾರ ಅನುಮತಿ ನೀಡಿದೆ. ಹೀಗಾಗಿ ಆಕಾಸ ಏರ್​ ಸೌದಿ ಅರೇಬಿಯಾ, ಕುವೈತ್ ಮತ್ತು ಕತಾರ್‌ಗೆ ಪ್ರಯಾಣಿಸಲಿದೆ. ಆದರೆ ಮತ್ತೊಂದೆಡೆ ಬಿಕ್ಕಟ್ಟಿನಿಂದ ಬಳಲುತ್ತಿರುವ ಆಕಾಸ ಏರ್, ಕೆಲ ಕಾರಣಗಳನ್ನು ಉಲ್ಲೇಖಿಸಿ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹಾರಾಟವನ್ನು ಸ್ಥಗಿತಗೊಳಿಸಿದೆ.

ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹಾರಾಟ ನಡೆಸಬೇಕಿದ್ದ ಆಕಾಸ ಏರ್ ವಿಮಾನ ರದ್ದು ಮಾಡಲಾಗಿದೆ. ಹೀಗಾಗಿ ಈ ಎರಡು ಮಾರ್ಗಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದವರು ಟಿಕೆಟ್ ಹಣ ಮರುಪಾವತಿಗಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಹಾರಾಟ ನಡೆಸುತ್ತಿದ್ದ ಅನೇಕ ವಿಮಾನಗಳ ಕಾರ್ಯಾಚರಣೆಯನ್ನು ಏರ್‌ಲೈನ್ ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಕಾಸ ಏರ್, ಪ್ರತಿದಿನ ಚೆನ್ನೈಗೆ ಎರಡು ವಿಮಾನ ಮತ್ತು ಹೈದರಾಬಾದ್‌ಗೆ ಒಂದು ವಿಮಾನ ಹಾರಾಟ ನಡೆಸುತ್ತಿತ್ತು. ಚೆನ್ನೈ, ಹೈದರಾಬಾದ್‌ಗೆ ಹೋಗಲು ಹಲವಾರು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದರೂ ಸಹ ವಾರಗಳ ಹಿಂದೆಯೇ ಆಕಾಸ ಏರ್ ಬೆಂಗಳೂರು-ಹೈದರಾಬಾದ್ ವಿಮಾನವನ್ನು ಹಠಾತ್ ಸ್ಥಗಿತಗೊಳಿಸಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಭಾರತದ ಮೊದಲ ಪರಿಸರ ಸ್ನೇಹಿ ಬೋಯಿಂಗ್: 20ನೇ ಆಕಾಸ ಏರ್​ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್

ಸೆಪ್ಟೆಂಬರ್ 15 ಕ್ಕೆ ಬೆಂಗಳೂರು-ಹೈದರಾಬಾದ್ ಹೋಗಲು ಆಕಾಸ ವಿಮಾನದಲ್ಲಿ ಸೀಟು ಕಾಯ್ದಿರಿಸಿದ ನೋಯ್ಡಾದ ಗೌರವ್ ಚೌಹಾಣ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆಕಾಸ ವಿಮಾನಯಾನ ಸಂಸ್ಥೆಯು ವಿಮಾನಯಾನ ಕ್ಯಾನ್ಸಲ್ ಮಾಡಿದ್ದು ಇನ್ನೂ ಪೂರ್ಣ ಟಿಕೆಟ್ ಹಣ ಬಂದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡರು.

ಆಕಾಸ ಏರ್, ಬೆಂಗಳೂರಿನಿಂದ ಚೆನ್ನೈಗೆ ವಿಮಾನಯಾನವನ್ನು ಸ್ಥಗಿತಗೊಳಿಸಿದೆ. 2022 ರ ಮಧ್ಯದಲ್ಲಿ ಬಹಳ ಸಂಭ್ರಮದಿಂದ ಈ ಮಾರ್ಗಗಳಿಗೆ ಆಕಾಸ ವಿಮಾನಯಾನ ಪ್ರಾರಂಭಿಸಲಾಗಿತ್ತು. ಕೆಲವು ಕಾರ್ಯಾಚರಣೆಯ ಅಡಚಣೆಗಳಿಂದಾಗಿ ಸೇವೆ ನಿಲ್ಲಿಸಲಾಗುತ್ತಿದೆ. ನಾವು ಇನ್ನು ಮುಂದೆ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ವಿಮಾನ ಹಾರಾಟವನ್ನು ನಿಲ್ಲಿಸುತ್ತಿದ್ದೇವೆ. ಬೆಂಗಳೂರು-ಕೊಚ್ಚಿ ಮಾರ್ಗದಲ್ಲೂ ಇತ್ತೀಚಿನ ವಾರಗಳಲ್ಲಿ ವಿಮಾನ ಟಿಕೆಟ್ ರದ್ದತಿಯಂತಹ ಬಿಕ್ಕಟ್ಟುಗಳು ಎದುರಾಗುತ್ತಿವೆ. ಇದು ಇತರೆ ಪ್ರಯಾಣಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು KIA ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕಾಸ ಏರ್ ಗ್ರೌಂಡ್ ಸಿಬ್ಬಂದಿ ತಿಳಿಸಿದರು. ಮುಂದಿನ ವಾರಗಳಲ್ಲಿ ಬೆಂಗಳೂರು ಮತ್ತು ಇತರ ಕೆಲವು ಸ್ಥಳಗಳ ನಡುವೆ ಹೆಚ್ಚಿನ ವಿಮಾನಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:18 am, Thu, 12 October 23