AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ 27 KAS ಅಧಿಕಾರಿಗಳ ನೇಮಕ

ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ.

ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ 27 KAS ಅಧಿಕಾರಿಗಳ ನೇಮಕ
ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್ಗಳ ಸಂಖ್ಯೆ
TV9 Web
| Updated By: ಆಯೇಷಾ ಬಾನು|

Updated on: Jan 07, 2022 | 8:41 AM

Share

ಬೆಂಗಳೂರು: ಕೊರೊನಾ 3ನೇ ಅಲೆ ಆರ್ಭಟ ಮಿತಿ ಮೀರುತ್ತಿದೆ. ಬೆಂಗಳೂರು ಸೇರಿ ರಾಜ್ಯಕ್ಕೆ ಕಂಟಕ ಹೆಚ್ಚಾಗ್ತಿದೆ. ಕಳೆದೊಂದು ವಾರದಿಂದ ನಿತ್ಯ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗ್ತಿವೆ. ಕಳೆದೊಂದು ವಾರದ ಹಿಂದೆ 300 ಅಸುಪಾಸಿನಲ್ಲಿ ಬರ್ತಿದ್ದ ಕೇಸ್ ಈಗ 4 ಸಾವಿರದ ಗಡಿ ದಾಟಿದೆ. ನಿನ್ನೆ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದೆ. ಸದ್ಯ ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕಗೊಳಿಸಲಾಗಿದೆ.

ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕ ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ KAS ಅಧಿಕಾರಿಗಳು ನಿಗಾ ಇಡಲಿದ್ದಾರೆ.

ಕಂಟೇನ್‌ಮೆಂಟ್ ಜೋನ್ಗಳ ಪಟ್ಟಿ ಬೊಮ್ಮನಹಳ್ಳಿ ವಲಯ-49, ಮಹದೇವಪುರ ವಲಯ-48, ಪಶ್ಚಿಮ ವಲಯ-16, ದಕ್ಷಿಣ ವಲಯ-15, ಪೂರ್ವ ವಲಯ-12, ಯಲಹಂಕ-10, ದಾಸರಹಳ್ಳಿ-3, ಆರ್.ಆರ್.ನಗರದಲ್ಲಿ 1 ಕಂಟೇನ್‌ಮೆಂಟ್ ಜೋನ್ನನ್ನು ಗುರುತಿಸಲಾಗಿದೆ. ನಗರದ 8 ವಲಯಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಏರಿಕೆಯಾಗಿದೆ. ಮಹದೇವಪುರ ಪಾಸಿಟಿವಿಟಿ ರೇಟ್ 3 % ರಷ್ಟು ಸಮೀಪ ತಲುಪಿದೆ.

ಕೊರೊನಾ ಶಾಕ್ ಡಿಸೆಂಬರ್ 29ರಂದು 566 ಪಾಸಿಟಿವ್ ಕೇಸ್ ಇದ್ವು.. ಜನವರಿ 1 ಅಂದ್ರೆ ಮೂರು ದಿನದ ಅಂತರದಲ್ಲಿ 1ಸಾವಿರದ 33 ಕೇಸ್ ಪತ್ತೆಯಾದ್ವು. ಇದಾದ ನಂತ್ರ ಜನವರಿ 4 ಅಂದ್ರೆ ಮತ್ತೆ ಮೂರು ದಿನದ ಅಂತರದಲ್ಲಿ 2ಸಾವಿರದ 479 ಪಾಸಿಟಿವ್ ಕೇಸ್ ಪತ್ತೆಯಾದ್ವು. ಅಲ್ದೆ, ಜನವರಿ 5 ಅಂದ್ರೆ ಕೇವಲ ಒಂದೇ ದಿನದ ಅಂತರದಲ್ಲಿ 4ಸಾವಿರದ 246 ಕೇಸ್ಗಳು ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕು ಉಲ್ಬಣ: ಮಂಡ್ಯ ಜಿಲ್ಲೆಯಲ್ಲಿ ಜ 19ರವರೆಗೆ ನಿಷೇಧಾಜ್ಞೆ, ಬೆಳಗಾವಿಯಲ್ಲಿ ಪ್ರಸಿದ್ಧ ದೇಗುಲಗಳಿಗೆ ಪ್ರವೇಶ ನಿರ್ಬಂಧ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ