AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ 27 KAS ಅಧಿಕಾರಿಗಳ ನೇಮಕ

ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ.

ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ 27 KAS ಅಧಿಕಾರಿಗಳ ನೇಮಕ
ಬೆಂಗಳೂರನ್ನ ಕಾಡುತ್ತಿದೆ ಕೊರೊನಾ; 2 ದಿನದಲ್ಲಿ 152ಕ್ಕೆ ಏರಿಕೆಯಾದ ಕಂಟೇನ್‌ಮೆಂಟ್ ಜೋನ್ಗಳ ಸಂಖ್ಯೆ
TV9 Web
| Edited By: ಆಯೇಷಾ ಬಾನು|

Updated on: Jan 07, 2022 | 8:41 AM

Share

ಬೆಂಗಳೂರು: ಕೊರೊನಾ 3ನೇ ಅಲೆ ಆರ್ಭಟ ಮಿತಿ ಮೀರುತ್ತಿದೆ. ಬೆಂಗಳೂರು ಸೇರಿ ರಾಜ್ಯಕ್ಕೆ ಕಂಟಕ ಹೆಚ್ಚಾಗ್ತಿದೆ. ಕಳೆದೊಂದು ವಾರದಿಂದ ನಿತ್ಯ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗ್ತಿವೆ. ಕಳೆದೊಂದು ವಾರದ ಹಿಂದೆ 300 ಅಸುಪಾಸಿನಲ್ಲಿ ಬರ್ತಿದ್ದ ಕೇಸ್ ಈಗ 4 ಸಾವಿರದ ಗಡಿ ದಾಟಿದೆ. ನಿನ್ನೆ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದೆ. ಸದ್ಯ ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ ನಿಗಾ ಇಡಲು ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕಗೊಳಿಸಲಾಗಿದೆ.

ಬಿಬಿಎಂಪಿ ವಾರ್ ರೂಮ್‌ಗಳಿಗೆ KAS ಅಧಿಕಾರಿಗಳ ನೇಮಕ ಬಿಬಿಎಂಪಿಯ 8 ವಲಯಗಳ ವಾರ್ ರೂಮ್‌ಗಳಿಗೆ 27 ಅಧಿಕಾರಿಗಳನ್ನ ನೇಮಿಸಲಾಗಿದೆ. ನಗರದ 27 ವಿಧಾನಸಭಾ ಕ್ಷೇತ್ರಗಳಿಗೂ ಅಧಿಕಾರಿಗಳ ನೇಮಕಗೊಳಿಸಲಾಗಿದೆ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಟೆಸ್ಟಿಂಗ್, ಕಂಟೇನ್ಮೆಂಟ್ ಜೋನ್, ಹೋಮ್ ಐಸೋಲೇಷನ್ ಬಗ್ಗೆ KAS ಅಧಿಕಾರಿಗಳು ನಿಗಾ ಇಡಲಿದ್ದಾರೆ.

ಕಂಟೇನ್‌ಮೆಂಟ್ ಜೋನ್ಗಳ ಪಟ್ಟಿ ಬೊಮ್ಮನಹಳ್ಳಿ ವಲಯ-49, ಮಹದೇವಪುರ ವಲಯ-48, ಪಶ್ಚಿಮ ವಲಯ-16, ದಕ್ಷಿಣ ವಲಯ-15, ಪೂರ್ವ ವಲಯ-12, ಯಲಹಂಕ-10, ದಾಸರಹಳ್ಳಿ-3, ಆರ್.ಆರ್.ನಗರದಲ್ಲಿ 1 ಕಂಟೇನ್‌ಮೆಂಟ್ ಜೋನ್ನನ್ನು ಗುರುತಿಸಲಾಗಿದೆ. ನಗರದ 8 ವಲಯಗಳಲ್ಲಿ ಕೊವಿಡ್ ಪಾಸಿಟಿವಿಟಿ ದರ ಏರಿಕೆಯಾಗಿದೆ. ಮಹದೇವಪುರ ಪಾಸಿಟಿವಿಟಿ ರೇಟ್ 3 % ರಷ್ಟು ಸಮೀಪ ತಲುಪಿದೆ.

ಕೊರೊನಾ ಶಾಕ್ ಡಿಸೆಂಬರ್ 29ರಂದು 566 ಪಾಸಿಟಿವ್ ಕೇಸ್ ಇದ್ವು.. ಜನವರಿ 1 ಅಂದ್ರೆ ಮೂರು ದಿನದ ಅಂತರದಲ್ಲಿ 1ಸಾವಿರದ 33 ಕೇಸ್ ಪತ್ತೆಯಾದ್ವು. ಇದಾದ ನಂತ್ರ ಜನವರಿ 4 ಅಂದ್ರೆ ಮತ್ತೆ ಮೂರು ದಿನದ ಅಂತರದಲ್ಲಿ 2ಸಾವಿರದ 479 ಪಾಸಿಟಿವ್ ಕೇಸ್ ಪತ್ತೆಯಾದ್ವು. ಅಲ್ದೆ, ಜನವರಿ 5 ಅಂದ್ರೆ ಕೇವಲ ಒಂದೇ ದಿನದ ಅಂತರದಲ್ಲಿ 4ಸಾವಿರದ 246 ಕೇಸ್ಗಳು ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕು ಉಲ್ಬಣ: ಮಂಡ್ಯ ಜಿಲ್ಲೆಯಲ್ಲಿ ಜ 19ರವರೆಗೆ ನಿಷೇಧಾಜ್ಞೆ, ಬೆಳಗಾವಿಯಲ್ಲಿ ಪ್ರಸಿದ್ಧ ದೇಗುಲಗಳಿಗೆ ಪ್ರವೇಶ ನಿರ್ಬಂಧ

Follow Us
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು