AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಗಲ್‌ ಪ್ರೇಮಿ ಹುಚ್ಚಾಟದಿಂದ ಆ್ಯಸಿಡ್‌ ದಾಳಿಗೊಳಗಾದ ಯುವತಿಯ ಪರಿಸ್ಥಿತಿ ಈಗ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಏನು? ದಾಳಿಕೋರನ ಬಗ್ಗೆ ಪೊಲೀಸ್ ಮಾಹಿತಿ ಎನಿದೆ?

ಆಸಿಡ್ ದಾಳಿಗೆ ಒಳಗಾದ ಯುವತಿಯ ಸ್ಥಿತಿ ಬಗ್ಗೆ ಸೆಂಟ್ ಜಾನ್ ಆಸ್ಪತ್ರೆಯ CMO ಮಾಹಿತಿ ನೀಡಿದ್ದಾರೆ. ಇದುವರೆಗೂ ಯುವತಿಗೆ ಎರಡು ಬಾರಿ ಆಪರೇಷನ್ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಯುವತಿಗೆ ಜ್ವರ ಬಂದರೆ ಪರಿಸ್ಥಿತಿ ಕ್ರಿಟಿಕಲ್ ಆಗುತ್ತದೆ. ಜ್ವರ ಬಂದರೆ ಯುವತಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ ಎಂದರು.

ಪಾಗಲ್‌ ಪ್ರೇಮಿ ಹುಚ್ಚಾಟದಿಂದ ಆ್ಯಸಿಡ್‌ ದಾಳಿಗೊಳಗಾದ ಯುವತಿಯ ಪರಿಸ್ಥಿತಿ ಈಗ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಏನು? ದಾಳಿಕೋರನ ಬಗ್ಗೆ ಪೊಲೀಸ್ ಮಾಹಿತಿ ಎನಿದೆ?
ಆ್ಯಸಿಡ್ ದಾಳಿ ನಡೆಸಿದ ಜಾಗ
TV9 Web
| Edited By: ಆಯೇಷಾ ಬಾನು|

Updated on:May 09, 2022 | 6:09 PM

Share

ಬೆಂಗಳೂರು: ಪಾಗಲ್‌ಪ್ರೇಮಿ ನಾಗೇಶ್‌ ಯುವತಿ ಮೇಲೆ ಌಸಿಡ್‌ ಎರಚಿ ಎಸ್ಕೇಪ್‌ ಆಗಿ ಎರಡು ವಾರ ಆಗ್ತಾ ಬಂತು ಆದ್ರೆ ಇನ್ನೂ ಆರೋಪಿ ಪೊಲೀಸರ ಬಲೆಗೆ ಬಿದ್ದಿಲ್ಲ. ಯುವತಿ ದೇಹದಲ್ಲಿ ಆ್ಯಸಿಡ್ ಎರಚಿದ ಗಾಯ ಇನ್ನೂ ಹಸಿಹಸಿಯಾಗಿದೆ. ಪೋಷಕರ ಕಣ್ಣಂಚು ಇನ್ನೂ ಒದ್ದೆಯಾಗಿವೆ. ಆಸ್ಪತ್ರೆಯಲ್ಲಿರೋ ಯುವತಿ ಕ್ಷಣ ಕ್ಷಣಕ್ಕೂನರಕ ಯಾತನೆ ಅನುಭವಿಸ್ತಿದ್ದಾಳೆ. ಆದ್ರೆ ಯುವತಿಯ ಈ ಸ್ಥಿತಿಗೆ ಕಾರಣವಾಗಿರೋ ಆರೋಪಿ ಮಾತ್ರ ಇನ್ನೂ ಬಲೆಗೆ ಬಿದ್ದಿಲ್ಲ. ಇದುವರೆಗೂ ಆರೋಪಿಯ ಸುಳಿವು ಕೂಡ ಸಿಕ್ಕಿಲ್ಲ. ಸದ್ಯ ಆಸಿಡ್ ದಾಳಿಗೆ ಒಳಗಾದ ಯುವತಿಯ ಸ್ಥಿತಿ ಬಗ್ಗೆ ಸೆಂಟ್ ಜಾನ್ ಆಸ್ಪತ್ರೆಯ CMO ಮಾಹಿತಿ ನೀಡಿದ್ದಾರೆ.

ಯುವತಿ ಚಿಕಿತ್ಸೆ ಬಗ್ಗೆ ಮಾತನಾಡಿರುವ ಸೆಂಟ್ ಜಾನ್ ಆಸ್ಪತ್ರೆಯ CMO ಅರವಿಂದ್ ಕಸ್ತೂರಿ, ಇದುವರೆಗೂ ಯುವತಿಗೆ ಎರಡು ಬಾರಿ ಆಪರೇಷನ್ ಮಾಡಲಾಗಿದೆ. ಹಾಗೆ ಎರಡು ಬಾರಿ ಡ್ರೆಸ್ ಸಿಂಗ್ ಕೂಡ ಮಾಡಲಾಗಿದೆ. ಪೆಶೆಂಟ್ ಇನ್ನೂ ICU ನಲ್ಲಿಯೇ ಇದ್ದಾರೆ. ಯುವತಿಗೆ ಬಿಪಿ ಎಲ್ಲವೂ ನಾರ್ಮಲ್ ಆಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ಯುವತಿಗೆ ಜ್ವರ ಬಂದರೆ ಪರಿಸ್ಥಿತಿ ಕ್ರಿಟಿಕಲ್ ಆಗುತ್ತದೆ. ಜ್ವರ ಬಂದರೆ ಯುವತಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಸದ್ಯ ಯುವತಿಗೆ ICU ನಲ್ಲಿಯೇ ಪ್ಲಾಸ್ಟಿಕ್ ಸರ್ಜರಿ ಮತ್ತು ಸರ್ಜರಿಯ ತಂಡ ನೋಡಿಕೊಳ್ಳುತ್ತಿದೆ. ಒಂದು ತಿಂಗಳ ಕಾಲ ಯುವತಿ ಹಾಸ್ಪಿಟಲ್ ನಲ್ಲಿ ಇರಬೇಕಾಗುತ್ತದೆ. ಯುವತಿಗೆ ಆಸಿಡ್ ಅಟ್ಯಾಕ್ ನಿಂದಾಗಿ ದೇಹದಲ್ಲಿ 36% ಬರ್ನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿ ನಾಗೇಶ್ಗಾಗಿ ಪೊಲೀಸರ ಹುಡುಕಾಟ ಆರೋಪಿ ನಾಗೇಶ್‌ನನ್ನ ಪೊಲೀಸರು ಇನ್ನಿಲ್ಲದಂತೆ ಹುಡುಕಾಡ್ತಿದ್ದಾರೆ. ರಾಜ್ಯ ರಾಜ್ಯ ಸುತ್ತಿ ತಡಕಾಡ್ತಿದ್ದಾರೆ. ಮಠ, ಮಂದಿರ, ರೈಲ್ವೇ ನಿಲ್ದಾಣ ಸೇರಿದಂತೆ ಹುಡುಕಾಡದ ಜಾಗವಿಲ್ಲ. ಆದ್ರೆ ಆತನ ಬಗೆಗಿನ ಒಂದೇ ಒಂದು ಸುಳಿವು ಕೂಡ ಸಿಗ್ತಿಲ್ಲ. ಸದ್ಯ ಆರೋಪಿ ಪತ್ತೆಗಾಗಿ ನಾಗೇಶನ ಭಾವಚಿತ್ರ ಇರುವ ಕರಪತ್ರ ಹಂಚ್ತಿದ್ದು, ಪೊಲೀಸರು ವಿಡಿಯೋ ಮಾಡಿ‌ ಶೇರ್ ಮಾಡ್ತಿದ್ದಾರೆ. ಅಲ್ಲದೇ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ವಾಂಟೆಡ್ ಬೋರ್ಡ್ ಹಾಕ್ತಿದ್ದಾರೆ.

ಯುವತಿ ಫೋಟೋವನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಯುವತಿಯನ್ನ ಏಳು ವರ್ಷದಿಂದ ಒನ್‌ ವೇ ಲವ್ ಮಾಡ್ತಿದ್ದ ನಾಗೇಶ್, ಯುವತಿಯ ಭಾವಚಿತ್ರವನ್ನ ತನ್ನ ಬಳಿ ಇಟ್ಕೊಂಡಿದ್ದ. ಪಾಸ್ ಪೋರ್ಟ್ ಸೈಜ್ ಫೋಟೊವನ್ನು ತನ್ನ ರೂಮ್ ನಲ್ಲಿ ಇಟ್ಕೊಂಡಿದ್ದು ಪೊಲೀಸರು ಆತನ ಮನೆ ಪರಿಶೀಲಿಸಿದಾಗ ಗೊತ್ತಾಗಿದೆ. ಹಾಗಿದ್ರೆ ಈ ಫೋಟೊ ಈತನಿಗೆ ಸಿಕ್ಕಿದ್ದಾದರೂ ಹೇಗೆ? ಈತನಿಗೆ ಕೊಟ್ಟಿದ್ದಾದರೂ ಯಾರು ಅನ್ನೋದು ಆತ ಸಿಕ್ಕ ಬಳಿಕವಷ್ಟೇ ಗೊತ್ತಾಗಲಿದೆ.

ಬೆಂಗಳೂರು ಆ್ಯಸಿಡ್​ ದಾಳಿಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Mon, 9 May 22

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ