ಬೆಂಗಳೂರು: ಸಣ್ಣ ಆಕ್ಸಿಡೆಂಟ್ ಆಗೋಯ್ತು ಸರ್ ಎಂದವನಿಂದ ಸಾವನ್ನಪ್ಪಿದ್ದು ಇಬ್ಬರು; ಈಗ ಟೆಕ್ಕಿ ಪೊಲೀಸರ ಅತಿಥಿ

ಕೆ.ಆರ್.ಪುರಂನಲ್ಲಿ ಹಿಟ್‌ ಌಂಡ್ ರನ್‌ಗೆ ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟೋ ಕಾರು ಚಾಲಕ ಟೆಕ್ಕಿ ವೆಂಕಟ್ ಸಂತೋಷ್ ಅಭಿರಾಮ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಸಣ್ಣ ಆಕ್ಸಿಡೆಂಟ್ ಆಗೋಯ್ತು ಸರ್ ಎಂದವನಿಂದ ಸಾವನ್ನಪ್ಪಿದ್ದು ಇಬ್ಬರು; ಈಗ ಟೆಕ್ಕಿ ಪೊಲೀಸರ ಅತಿಥಿ
ಕೆ ಆರ್​ ಪುರಂ ಪೊಲೀಸ್​ ಠಾಣೆ, ಅಪಘಾತ
Edited By: ವಿವೇಕ ಬಿರಾದಾರ

Updated on: Jan 07, 2023 | 7:29 PM

ಬೆಂಗಳೂರು: ಕೆ.ಆರ್.ಪುರಂನಲ್ಲಿ ಹಿಟ್‌ ಆಂಡ್ ರನ್‌ಗೆ (Hit and Run) ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಕಾರಣನಾಗಿದ್ದ ಆಲ್ಟೋ ಕಾರು ಚಾಲಕ ಟೆಕ್ಕಿ ವೆಂಕಟ್ ಸಂತೋಷ್ ಅಭಿರಾಮ್​ನನ್ನು ಕೆ ಆರ್​ ಪುರಂ ಪೊಲೀಸರು ಬಂಧಿಸಿದ್ದಾರೆ.

ಹಿಟ್‌ ಆಂಡ್ ರನ್‌ ಪ್ರಕರಣ

ನಿನ್ನೆ (ಜ.6) ರಂದು ಆಟೋದಲ್ಲಿ ಕೆ.ಆರ್​ ಪುರಂ ಮಾರ್ಗವಾಗಿ ಆಟೋ ಚಾಲಕ ಖಾಲೀದ್, ಆತನ ಪತ್ನಿ ತಾಸೀನಾ, ಫಾಝಿಲಾ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಹಳೇ ಮದ್ರಾಸ್ ರಸ್ತೆಯ ಮೇಡಹಳ್ಳಿ ಸ್ಕೈವಾಕ್ ಬಳಿ ಆಟೋ ಬಂದ ವೇಳೆ, ಅತಿವೇಗದಲ್ಲಿ ಬಂದ ಆಂಧ್ರ ನೋಂದಣಿಯ (AP 39- LX 8153) ಆಲ್ಟೋ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿದ್ದ ಫಾಝಿಲಾ ಹಾಗೂ ತಸೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಎರಡು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟ್ ಸಂತೋಷ್ ಆಲ್ಟೋ ಕಾರು ಚಾಲನೆ ಮಾಡುತ್ತಿದ್ದನು. ವೆಂಕಟ್​​ ಆಂಧ್ರಪ್ರದೇಶದ ಗುಂಟೂರು ಮೂಲದವನಾಗಿದ್ದು, ಅಪಘಾತದ ಬಳಿಕ ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆ.ಆರ್.ಪುರಂ ಸಂಚಾರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಪಘಾತದ ದೃಶ್ಯಗಳು ಹೊಸಕೋಟೆ ಟೋಲ್‌ನಲ್ಲಿದ್ದ ಸಿಸಿಟಿವಿ ದೃಶ್ಯ ಸೆರೆಯಾಗಿದೆ.

ನಂತರ ಪೊಲೀಸರು ಟೋಲ್ ಅಮೌಂಟ್ ಕಟ್ಟಾಗಿದ್ದ ಫೋನ್ ನಂಬರ್ ಪಡೆದು ಪೊಲೀಸರು ಕ್ರಾಸ್ ಚೆಕ್ ಮಾಡಿದ್ದರು. ಪೊಲೀಸರು ಫೋನ್ ಮಾಡಿದಾಗ ಅಮಾಯಕನಂತೆ ಸಣ್ಣ ಆಕ್ಸಿಡೆಂಟ್ ಆಗೋಯ್ತು ಸರ್ ಅಂದಿದ್ದಾನೆ. ನಂತರ ಪೊಲೀಸರು ಹೊಸಕೋಟೆ ಮನೆಯಲ್ಲಿ ಟೆಕ್ಕಿಯನ್ನು ಬಂಧಿಸಿ, ಕಾರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನನ್ನ ತಪ್ಪಿಲ್ಲ ಅಂದಿದ್ದಾನೆ. ಸರ್ವೀಸ್ ರಸ್ತೆಯಿಂದ ಆಟೋ ಏಕಾಏಕಿ ಮೇನ್ ರೋಡ್​ಗೆ ಬಂತು. ಆಗ ಕಾರು, ಆಟೋಗೆ ಡಿಕ್ಕಿ ಹೊಡೆದಿದೆ ಎಂದಿದ್ದಾನೆ.

ಬೈಕ್​ಗೆ ಲಾರಿ ಡಿಕ್ಕಿಯಾಗಿ ಓರ್ವ ಸಾವು

ಬಳ್ಳಾರಿ: ಬೈಕ್​ಗೆ ಲಾರಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಬಳಿ ನಡೆದಿದೆ. ಹರ್ಷ(27) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು,  ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Sat, 7 January 23

Web contact

TV9 Kannada

Read More
Follow Us