ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ಪೊಲೀಸರಿಗೆ ದೂರು ಕೊಟ್ಟವನೇ ಸಿಕ್ಕಿಬಿದ್ದ, ವಿಕೃತ ಕಾಮಿಯ ನವರಂಗಿ ಆಟ ಬಯಲು

ಈ ಆರೋಪಿಯ ಕಾಮಚೇಷ್ಟೆ ತಿಳಿದರೆ ಎಂತವರು ಕೂಡ ಅಸಹ್ಯ ಎನ್ನದೆ ಸುಮ್ಮನಿರಲಾರರು. ಏಕೆಂದರೆ ಇವನು ಖಾಸಗಿ ಫೋಟೋಗಳನ್ನು ಫೋಸ್ಟ್ ಮಾಡಿ ಅದಕ್ಕೆ ಬರುವ ಕಮೆಂಟ್ ನಿಂದ ಸುಖ ಪಡುತ್ತಿದ್ದನಂತೆ. ಸದ್ಯ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ಪೊಲೀಸರಿಗೆ ದೂರು ಕೊಟ್ಟವನೇ ಸಿಕ್ಕಿಬಿದ್ದ, ವಿಕೃತ ಕಾಮಿಯ ನವರಂಗಿ ಆಟ ಬಯಲು
ಅಂಜಯ್ ಬಂಧಿತ ಆರೋಪಿ
Follow us
| Updated By: ಆಯೇಷಾ ಬಾನು

Updated on: Oct 11, 2023 | 9:04 AM

ಬೆಂಗಳೂರು, ಅ.11: ತನ್ನ ಪ್ರಿಯತಮೆಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ವಿಕೃತ ಕಾಮಿಯ ನವರಂಗಿ ಆಟ ಬಯಲಾಗಿದೆ. ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ (Arrest). ಈ ಆರೋಪಿಯ ಕಾಮಚೇಷ್ಟೆ ತಿಳಿದರೆ ಎಂತವರು ಕೂಡ ಅಸಹ್ಯ ಎನ್ನದೆ ಸುಮ್ಮನಿರಲಾರರು. ಏಕೆಂದರೆ ಇವನು ಖಾಸಗಿ ಫೋಟೋಗಳನ್ನು ಫೋಸ್ಟ್ ಮಾಡಿ ಅದಕ್ಕೆ ಬರುವ ಕಮೆಂಟ್ ನಿಂದ ಸುಖ ಪಡುತ್ತಿದ್ದನಂತೆ. ಸದ್ಯ ಈ ವಿಕೃತ ಮನಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿ ಜೊತೆಗೆ ಈತನ 12 ಜನ ಸ್ನೇಹಿತರು ಕೂಡ ಇದೇ ಮನಸ್ಸಿನವರು. ಇವರೆಲ್ಲ ಟೆಲಿಗ್ರಾಮ್​ನಲ್ಲಿ d3vil-official ಮತ್ತು discord ಎಂಬ ಹೆಸರಿನ ಗ್ರೂಪ್ ಮಾಡಿಕೊಂಡಿದ್ದರು. ಆ ಗ್ರೂಪ್​ನಲ್ಲಿ ತಮ್ಮ ತಮ್ಮ ಪ್ರಿಯತಮೆ, ಸ್ನೇಹಿತೆಯರ ನಗ್ನ ಫೋಟೋಗಳನ್ನು ಹಾಕುತ್ತಿದ್ದರು. ಹೀಗೆ ಸುಮಾರು ನೂರಕ್ಕು ಹೆಚ್ಚು ಯುವತಿಯರ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ @thediyahouse, @denofd3vil, @houseofd3vil, @heavenbyd3vil2 ಹೆಸರಿನ ಇನ್ಸ್ಟಾಗ್ರಾಮ್ ಖಾತೆ ತೆಗೆದು ಅದರಲ್ಲೂ ಅಪ್ಲೋಡ್ ಮಾಡಿದ್ದಾರೆ. ಫೋಟೋಗಳಿಗೆ ಬರುತ್ತಿದ್ದ ಅಸಹ್ಯ ಕಮೆಂಟ್​ಗಳನ್ನು ಓದಿ ಈ ಕಾಮುಕರು ಸುಖಿಸುತ್ತಿದ್ದರು ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಿಯಕರನ ನವರಂಗಿ ಆಟಕ್ಕೆ ಮೋಸ ಹೋದ ಯುವತಿ

ಇನ್ನೇನು ಆರೋಪಿ ಅಂಜಯ್ ಜೊತೆ ಮದುವೆ ಆಗಬೇಕು ಎಂಬ ಯೋಚನೆಯಲ್ಲಿದ್ದಾಗಲೇ ಪ್ರಿಯತಮೆಗೆ ತನ್ನ ಪ್ರೀಮಿಯ ನವರಂಗಿ ಆಟ ಗೊತ್ತಾಗಿದೆ. ತಮಿಳುನಾಡು ವೆಲ್ಲೂರು ಮೂಲದ ಅಂಜಯ್ ಹಾಗೂ ಯುವತಿ ಇಬ್ಬರೂ ಒಂದೇ ಊರಿನವರಾಗಿದ್ದರು. 10ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ರು. ಬಿ.ಪ್ಲಾನಿಂಗ್ ಅನ್ನೋ ಕೋರ್ಸ್ ಮಾಡಿದ್ದ ಇವರು ನಂತರ ಬೆಂಗಳೂರಿಗೆ ಬಂದು ಒಟ್ಟಿಗೆ ವಾಸವಾಗಿದ್ದರು. ಇವರ ಪ್ರೀತಿ ವಿಚಾರ ಎರಡು ಕುಟುಂಬಸ್ಥರಿಗೂ ಗೊತ್ತಿತ್ತು. ಅಲ್ಲದೇ ಮದುವೆ ಮಾಡಿಸುವ ತಯಾರಿ ಕೂಡ ಮಾಡಿಕೊಂಡಿದ್ರು.

ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ರೇಡ್ ಮಾಡುವ ಬೆದರಿಕೆ: ಹಣಕ್ಕೆ ಬೇಡಿಕೆ ಇಟ್ಟ ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸ್ರು

2021ರಲ್ಲಿಯೂ ಇನ್ಸ್ಟಾಗ್ರಾಮ್​ನಲ್ಲಿ ಯುವತಿ ಫೋಟೋ ಷೇರ್ ಆಗಿತ್ತು. ಆಗ ರಿಪೋರ್ಟ್ ಮಾಡಿ ಫೋಟೋ ತೆಗಿಸಲಾಗಿತ್ತು. ಮತ್ತೆ 2023 ಜೂನ್ ನಲ್ಲಿ ಯುವತಿಯ ಫೋಟೋ ಷೇರ್ ಆಗಿತ್ತು. ಆಗ ಈ ವಿಚಾರವನ್ನು ಯುವತಿ ತನ್ನ ಪ್ರಿಯತಮ ಅಂಜಯ್​ಗೆ ಹೇಳಿದ್ದಳು. ಯುವತಿ ಜೊತೆಗೆ CEN ಪೊಲೀಸ್ ಠಾಣೆಗೆ ಬಂದು ಆರೋಪಿ ಪತ್ತೆ ಮಾಡಿ ಫೋಟೋ ಡಿಲಿಟ್ ಮಾಡಿಸಿ ಎಂದು ಆರೋಪಿ ಅಂಜಯ್ ಪರಿ ಪರಿಯಾಗಿ ಪೊಲೀಸರ ಬಳಿ ಬೇಡಿಕೊಂಡಿದ್ದ. ಆತನ ಡ್ರಾಮಾ ನೋಡಿ ಯುವತಿ ಕಣ್ಣೀರು ಹಾಕಿದ್ದಳು. ತನ್ನ ಪ್ರಿಯಕರನಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ ಎಂದು ಖುಷಿ ಪಟ್ಟಿದ್ದಳು. ಆದರೆ ಈಗ ಕಾಮುಕನ ನವರಂಗಿ ಆಟ ಬಯಲಾಗಿದೆ.

ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ದ ಆಗ್ನೇಯ ವಿಭಾಗ ಸೆನ್ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಯ ವಿಕೃತ ಕಾಮ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಂಧಿಸಿ ಜೈಲಿಗಟ್ಟಲಾಗಿದೆ. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಾಗಿದ್ದು ಆರೋಪಿ BOT ಅನ್ನುವ ಅಪ್ಲಿಕೇಶನ್ ಡೆವಲಪ್ ಮಾಡ್ತಿದ್ದನಂತೆ. ಆ ಅಪ್ಲಿಕೇಶನ್​ನಲ್ಲಿ ಯಾರದ್ದೇ ಫೋಟೋ ಹಾಕಿದ್ರು ಬೆತ್ತಲೆಯಾಗಿ ತೋರಿಸುತ್ತಂತೆ. ಅದೇ ರೀತಿ ಸ್ನೇಹಿತೆ, ಸಂಬಂಧಿಕರ ಫೋಟೋ ಹಾಕಿ ಬೆತ್ತಲೆ ಚಿತ್ರ ನೋಡಿ‌ ವಿಚಿತ್ರ ಸುಖ ಪಡ್ತಿದ್ದ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು