ಬಿಬಿಎಂಪಿ ಮಾರುಕಟ್ಟೆ ಮಳಿಗೆಗಳ ಅವೈಜ್ಞಾನಿಕ ಬಾಡಿಗೆ ವಿರುದ್ಧ ಸಿಡಿದೆದ್ದ ವರ್ತಕರು: ಪಾಲಿಕೆಗೆ ಬಾರದ 150 ಕೋಟಿ ರೂ.

ಬೆಂಗಳೂರಿನಲ್ಲಿ ಬಿಬಿಎಂಪಿ ಅಧೀನದ ಮಾರುಕಟ್ಟೆಗಳಲ್ಲಿ ಒಟ್ಟು 5,900 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು, ಇವುಗಳಿಂದ ಆದಾಯ ತೆಗೆಯುವುದೇ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಪಾಲಿಕೆಯ ನೂರಾರು ಕೋಟಿ ರೂಪಾಯಿ ಆದಾಯಕ್ಕೆ ವಿಘ್ನ ಎದುರಾಗಿದೆ. ಮತ್ತೊಂದೆಡೆ, ಸಣ್ಣ ವ್ಯಾಪಾರಿಗಳು ಪಾಲಿಕೆ ಅವೈಜ್ಞಾನಿಕವಾಗಿ ಬಾಡಿಗೆ ನಿಗದಿ ಮಾಡಿದ್ದರ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಬಿಬಿಎಂಪಿ ಮಾರುಕಟ್ಟೆ ಮಳಿಗೆಗಳ ಅವೈಜ್ಞಾನಿಕ ಬಾಡಿಗೆ ವಿರುದ್ಧ ಸಿಡಿದೆದ್ದ ವರ್ತಕರು: ಪಾಲಿಕೆಗೆ ಬಾರದ 150 ಕೋಟಿ ರೂ.
ಬಿಬಿಎಂಪಿ ಮಾರುಕಟ್ಟೆ ಮಳಿಗೆ (ಸಾಂದರ್ಭಿಕ ಚಿತ್ರ)

Updated on: Jul 29, 2025 | 7:43 AM

ಬೆಂಗಳೂರು, ಜುಲೈ 29: ಬಿಬಿಎಂಪಿ (BBMP) ತನ್ನ ಅಧೀನದಲ್ಲಿರುವ 118 ಮಾರುಕಟ್ಟೆಗಳಿಂದ ನಿರೀಕ್ಷಿತ ಆದಾಯ ಕಂಡುಕೊಳ್ಳುವಲ್ಲಿ ಹೆಣಗಾಡುತ್ತಿದೆ. ಮೂಲಗಳ ಪ್ರಕಾರ, ಬಿಬಿಎಂಪಿಯ ಎಲ್ಲಾ ವಲಯಗಳ ಮಾರುಕಟ್ಟೆಗಳಲ್ಲಿ 5,956 ಅಂಗಡಿಗಳಿದ್ದು, ಈವರೆಗೆ 152.17 ಕೋಟಿ ರೂ. ಆದಾಯ ಬರಬೇಕಿದೆ. ಆದರೆ 2025 ರ ಜೂನ್ ವರೆಗೆ ಕೇವಲ 2.14 ಕೋಟಿ ರೂ.ಗಳನ್ನು ಮಾತ್ರ ಸಂಗ್ರಹ ಮಾಡಿರುವುದಾಗಿ ಗೊತ್ತಾಗಿದೆ. ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳು ಪಾಲಿಕೆ ಲೆಕ್ಕಾಚಾರಕ್ಕೆ ಅಪಸ್ವರ ಎತ್ತಿದ್ದು, 2015 ರಲ್ಲಿ ಪಾಲಿಕೆ ನಿಗದಿ ಮಾಡಿದ್ದ ಹೊಸ ಬಾಡಿಗೆ ದರ ಅವೈಜ್ಞಾನಿಕವಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ನೀಡದೆ ಮೂರು ಪಟ್ಟು ಹೆಚ್ಚು ಬಾಡಿಗೆ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ ಎಂದು ಕೆಆರ್ ಮಾರುಕಟ್ಟೆ ಮಳಿಗೆದಾರರ ಸಂಘದ ಅಧ್ಯಕ್ಷ ದಿವಾಕರ್ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಯಾವ ವ್ಯಾಪ್ತಿಯಲ್ಲಿ ಎಷ್ಟು ಆದಾಯ ಸಂಗ್ರಹ ಬಾಕಿ?

ಬಿಬಿಎಂಪಿ ಪೂರ್ವ ವಲಯದ ಒಟ್ಟು 47 ಮಾರುಕಟ್ಟೆಗಳಲ್ಲಿ 1,742 ಮಳಿಗೆಗಳು ಇದ್ದು, 26.88 ಕೋಟಿ ರೂಪಾಯಿ ಬಾಡಿಗೆ ಹಣ ಬಾಕಿ ಉಳಿದಿದೆ. ಇನ್ನು ಪಶ್ಚಿಮ ವಲಯದಲ್ಲಿ 43 ಮಾರುಕಟ್ಟೆಗಳ ಪೈಕಿ 2,850 ಮಳಿಗೆಗಳಿಂದ 47.35 ಕೋಟಿ ರೂಪಾಯಿ ಹಣ ಬರಬೇಕಿದೆ. ದಕ್ಷಿಣ ವಲಯದ 26 ಮಾರುಕಟ್ಟೆಗಳ ಪೈಕಿ 1,332 ಮಳಿಗೆದಾರರು 74.41 ಕೋಟಿ ಹಾಗೂ ಬೊಮ್ಮನಹಳ್ಳಿ ವಲಯದ 31 ಮಳಿಗೆದಾರರು 1.27 ಕೋಟಿ ರೂ. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಟ್ರಾಫಿಕ್​ ಜಾಮ್​ಗೆ ಮುಕ್ತಿ ನೀಡಲು ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್​

ಇದನ್ನೂ ಓದಿ
ಯೂರಿಯಾ ಜತೆ ನ್ಯಾನೋ ಡಿಎಪಿ ಖರೀದಿ ಕಡ್ಡಾಯ: ರೈತರಿಗೆ ಮತ್ತೊಂದು ಆಘಾತ
ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್ ಮಾಡಿ ಊಟ ಮಾಡುವವರು ಈ ಸುದ್ದಿ ಓದಲೇಬೇಕು!
ಹಿರಿಯ ನಾಗರಿಕರ 'ದಂತಪಂಕ್ತಿ' ಯೋಜನೆಗೆ ವಯೋಮಿತಿ ಇಳಿಕೆ ಮಾಡಿದ ಸರ್ಕಾರ
ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಒಟ್ಟಾರೆಯಾಗಿ ಮಳಿಗೆದಾರರು ಹಾಗೂ ಬಿಬಿಎಂಪಿ ನಡುಗೆ ಬಾಡಿಗೆ ದರ ಸಂಬಂಧ ಅಸ್ಪಷ್ಟತೆ ಇನ್ನೂ ಮುಂದುವರೆದಿದೆ. ಅಗತ್ಯ ಸೌಲಭ್ಯಗಳನ್ನು ಕೊಡದೆ ಬಾಡಿಗೆ ದರಗಳನ್ನು ಬೇಕಾಬಿಟ್ಟಿ ನಿಗದಿ ಮಾಡುವುದು ಎಷ್ಟು ಸರಿ ಎಂದು ವ್ಯಾಪಾರಿಗಳು ಪ್ರಶ್ನಿಸಿದರೆ, ಮತ್ತೊಂದೆಡೆ ಪಾಲಿಕೆ ಮಾತ್ರ 150 ಕೋಟಿ ರೂ. ಬಾಕಿ ಉಳಿದಿದೆ ಎಂದು ಲೆಕ್ಕ ಕೊಡುತ್ತಿದೆ. ಇದಕ್ಕೆ ಯಾವಾಗ ತಾರ್ಕಿಕ ಅಂತ್ಯ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us