AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಿಂದ ಆಟೋ ಹತ್ತುವಾಗ ಮಕ್ಕಳು ಮಿಸ್ಸಿಂಗ್, ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿದ ವಿವಿ ಪುರಂ ಪೊಲೀಸ್ರು

ಶಾಲೆಯಿಂದ ಆಟೋ ಹತ್ತುವಾಗ ಚಾಲಕನ ಕಣ್ತಪ್ಪಿಸಿ ಹೋಗಿ ದಾರಿ ತಪ್ಪಿಸಿಕೊಂಡಿದ್ದ ಮಕ್ಕಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿದ್ದಾರೆ.

ಶಾಲೆಯಿಂದ ಆಟೋ ಹತ್ತುವಾಗ ಮಕ್ಕಳು ಮಿಸ್ಸಿಂಗ್, ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿದ ವಿವಿ ಪುರಂ ಪೊಲೀಸ್ರು
ವಿವಿಪುರಂ ಪೊಲೀಸ್
ಜಗದೀಶ ಬಿ.
| Edited By: |

Updated on: Jul 28, 2023 | 10:54 AM

Share

ಬೆಂಗಳೂರು, (ಜುಲೈ 28): ಶಾಲೆಯಿಂದ (School) ಆಟೋ ಹತ್ತುವಾಗ ನಾಪತ್ತೆಯಾಗಿದ್ದ ಮಕ್ಕಳನ್ನು(Students) ಬೆಂಗಳೂರಿನ (Bengaluru) ವಿವಿ ಪುರಂ ಪೊಲೀಸರು (VV Puram Police)) ಸಿನಿಮೀಯ ರೀತಿಯಲ್ಲಿ ಪತ್ತೆ ಮಾಡಿದ್ದಾರೆ. 5 ವರ್ಷದ ಮಗುವಿನ ಬುದ್ಧಿವಂತಿಕೆಗೆ ಪೊಲೀಸರಿಗೆ ಸಿಕ್ಕ ಸುಳಿವಿನಿಂದ ಕೇವಲ ಮೂರೇ ಗಂಟೆಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು.. ಆಟೋದಿಂದ ಇಳಿದು ಹೋಗಿ ದಾರಿ ತಪ್ಪಿಸಿಕೊಂಡು ಸಂಕಷ್ಟ ಸಿಲುಕಿದ್ದ ಮಕ್ಕಳನ್ನು ವಿವಿಪುರಂ ಪೊಲಿಸರು ಪತ್ತೆ ಮಾಡಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಇದರಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

ಇದನ್ನೂ ಓದಿ: Thawar Chand Gehlot: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರನ್ನೇ ಬಿಟ್ಟು ಹಾರಿದ ವಿಮಾನ

ಚಾಲಕ ಅಂಗಡಿಗೆ ಹೋಗಿ ಬರುವಷ್ಟರಲ್ಲೇ ಮಕ್ಕಳು ಆಟೋ ಇಳಿದು ಸ್ವಲ್ಪ ದೂರ ನಡೆದು ಹೋಗಿದ್ದಾರೆ. ಬಳಿಕ ಅಲ್ಲಿಂದ ವಾಪಸ್ ಬರುವುದಕ್ಕೆ ದಾರಿ ಗೊತ್ತಾಗದೇ ಸಾಕಷ್ಟು ಕಡೆ ಸುತ್ತಾಡಿದ್ದಾರೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಓರ್ವ ಯುವತಿ ಬಳಿ ನಮಗೆ ಭಯ ಅಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಆ ಯುವತಿ ವಿದ್ಯಾರ್ಥಿಗಳ ಎಲ್ಲಾ ವಿಚಾರಿಸಿದ್ದಾಳೆ. ಆ ವೇಳೆ ಓರ್ವ ಬಾಲಕ ನನ್ನ ತಂದೆ ಫೋನ್ ನಂಬರ್ ಗೊತ್ತಿದೆ ಎಂದಿದ್ದು, ಬಳಿಕ ಆ ಯುವತಿ ಅಲ್ಲೇ ಇದ್ದ ಓರ್ವ ವ್ಯಕ್ತಿಗೆ ಈ ನಂಬರಿಗೆ ಒಂದು ಫೋನ್ ಮಾಡುವಂತೆ ಹೇಳಿದ್ದಾಳೆ. ಆ ಅಪರಿಚಿತ ವ್ಯಕ್ತಿ ಆ ಮಗುವಿನ ತಂದೆಗೆ ಕರೆ ಮಾಡಿ, ಮಕ್ಕಳು ಸ್ಯಾಟ್ ಲೈಟ್ ಬಸ್ ಸ್ಟಾಂಡ್ ಹತ್ತಿರ ಇದ್ದಾರೆ ಎಂದು ಮಾಹಿತಿ ನೀಡಿ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು, ಕೂಡಲೇ ವಿವಿಪುರಂ ಪೊಲೀಸ್ ಠಾಣೆಗೆ ದೌಡಾಯಿಸಿ ಮಗುವಿನ ವಿಚಾರವನ್ನು ತಿಳಿಸಿದ್ದಾರೆ.

ಆ ವ್ಯಕ್ತಿ ಮಾಡಿದ್ದ ಫೋನ್​ ನಂಬರ್ ಪಡೆದುಕೊಂಡ ಪೊಲೀಸರು, ಟವರ್ ಲೋಕೆಷನ್ ಮೂಲಕ ವಿಳಾಸ ಪತ್ತೆ ಹಚ್ಚಿದ್ದಾರೆ. ತಕ್ಷಣ 20 ಜನ ಪೊಲೀಸ್​ ಸಿಬ್ಬಂದಿ ಮಕ್ಕಳಿಗಾಗಿ ಸ್ಯಾಟ್ ಲೈಟ್ ಬಸ್​ ನಿಲ್ದಾಣದ ಆಸುಪಾಸಿನಲ್ಲಿ ಹುಡುಕಾಡಿದ್ದು, ಕೊನೆಗೆ ಫೋನ್​ ಬಂದಿದ್ದ ಲೋಕೇಷನ್​ನಿಂದ 1 ಕಿ.ಮೀ ದೂರದಲ್ಲಿ ನಿಂತಿದ್ದ ಇಬ್ಬರು ಮಕ್ಕಳು ಪತ್ತೆಯಾಗಿದ್ದಾರೆ. ನಂತರ ಪೊಲೀಸರು ಮಕ್ಕಳನ್ನು ಕರೆತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಮಕ್ಕಳ ಸುರಕ್ಷಿತವಾಗಿ ಸಿಕ್ಕಿದ್ದಾರೆ ಎಂದು ಪೋಷಕರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

ಓರ್ವ ಮಗು ತನ್ನ ತಂದೆಯ ಮೊಬೈಲ್​ ನಂಬರ್​ ನೀಡಿ ಕರೆ ಮಾಡಿಸಿದ್ದರಿಂದ ಪೊಲೀಸರು ಮೂರೇ ಮೂರು ಗಂಟೆಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆ ಸಮಯದಲ್ಲಿ ಬಾಲಕನಿಗೆ ತನ್ನ ತಂದೆ ನಂಬರ್​ ನೆನಪು ಮಾಡಿ ಕರೆ ಮಾಡಿಸಿದ್ದು ನಿಜ ಆ ಹುಡುಗನ ಬುದ್ಧಿವಂತಿಕೆ ಮೆಚ್ಚುವಂತದ್ದು.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ