ಮೆಟ್ರೋ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಪರಿಹರಿಸಲು ಬಿಎಂಆರ್​ಸಿಎಲ್​​ನಿಂದ ವಿಶೇಷ ಕಾರ್ಯಾಚರಣೆ

|

Updated on: Aug 09, 2023 | 10:40 AM

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಮೆಟ್ರೋ ಏರುವಾಗ ಸರದಿ ಸಾಲಿನಲ್ಲಿ ನಿಲ್ಲದೆ ನೂಕುನುಗ್ಗಲಾಗುತ್ತಿದ್ದು, ಈ ಸಮಯದಲ್ಲಿ ಅನುಚಿತ ವರ್ತನೆಯ ಘಟನೆಗಳು ನಡೆದಿರುವ ಬಗ್ಗೆ ಪ್ರಯಾಣಿಕರು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಬಿಎಂಆರ್​ಸಿಎಲ್​ ಹೊಸ ಯೋಜನೆಯೊಂದು ಪ್ರಾರಂಭಿಸಿದೆ.

ಮೆಟ್ರೋ ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಪರಿಹರಿಸಲು ಬಿಎಂಆರ್​ಸಿಎಲ್​​ನಿಂದ ವಿಶೇಷ ಕಾರ್ಯಾಚರಣೆ
ನಮ್ಮ ಮೆಟ್ರೋ
Follow us on

ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದ ಮೆಟ್ರೋ ನಿಲ್ದಾಣಗಳಲ್ಲಿ (Metro Station) ಜನದಟ್ಟಣೆ ಹೆಚ್ಚುತ್ತಿದೆ. ಮೆಟ್ರೋ ಏರುವಾಗ ಸರದಿ ಸಾಲಿನಲ್ಲಿ ನಿಲ್ಲದೆ ನೂಕುನುಗ್ಗಲಾಗುತ್ತಿದ್ದು, ಈ ಸಮಯದಲ್ಲಿ ಅನುಚಿತ ವರ್ತನೆಯ ಘಟನೆಗಳು ನಡೆದಿರುವ ಬಗ್ಗೆ ಪ್ರಯಾಣಿಕರು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಗೆ ದೂರು ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್​ಸಿಎಲ್​ ಈ ಸಮಸ್ಯೆಗಳನ್ನು ಪರಿಹರಿಸಲು “ವಿಶೇಷ ಕಾರ್ಯಾಚರಣೆ” (Special Operational Program) ಪ್ರಾರಂಭಿಸಿದೆ.

ಬಿಎಂಆರ್​ಸಿಎಲ್​ನ ವಿಶೇಷ ಕಾರ್ಯಕ್ರಮವು ಪ್ರಯಾಣಿಕರಿಗೆ ಕ್ರಮಬದ್ಧವಾದ ಬೋರ್ಡಿಂಗ್ ಅನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಮತ್ತು ನಿಲ್ದಾಣಗಳಲ್ಲಿ ನಿರ್ವಹಣೆಯನ್ನು ಹೆಚ್ಚಿಸುವ ಮೂಲಕ ಅವ್ಯವಸ್ಥೆಯನ್ನು ಕಡಿಮೆ ಮಾಡುತ್ತದೆ.

ಮೆಜೆಸ್ಟಿಕ್ ಮತ್ತು ಬೈಯಪ್ಪನಹಳ್ಳಿಯಂತಹ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಬಗ್ಗೆ ಪ್ರಯಾಣಿಕರು ನಿರಂತರವಾಗಿ ದೂರುತ್ತಿದ್ದಾರೆ. ಇಂತಹ ಕೆಲವು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಅನಾನುಕೂಲ ವಾತಾವರಣ ನಿರ್ಮಾಣವಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್, 318 ಬೋಗಿಗಳ ನಿರ್ಮಾಣದ ಗುತ್ತಿಗೆ ಪಡೆದ ಬಿಇಎಂಎಲ್‌

ಪ್ರಯಾಣಿಕರನ್ನು ಸರತಿ ಸಾಲು ವ್ಯವಸ್ಥೆಗೆ ಬದ್ಧವಾಗಿರುವಂತೆ ಉತ್ತೇಜಿಸಲು ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ, ಪ್ರಯಾಣಿಕರು ತಮ್ಮ ಫೋನ್‌ಗಳಲ್ಲಿ ಸಂಗೀತವನ್ನು ಕೇಳುವಾಗ ಹೆಡ್‌ಫೋನ್‌ಗಳನ್ನು ಬಳಸುವುದು ಕಡ್ಡಾಯವಾಗಿದೆ.

ಈ ಬಗ್ಗೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್​ ಯಶವಂತ ಚವಾಣ್‌ ಮಾತನಾಡಿ ಎಲ್ಲ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಪಷ್ಟವಾದ ಗುರುತುಗಳಿಂದಾಗಿ ಹಚ್ಚಿನ ಪ್ರಯಾಣಿಕರು ನಿಯಮಗಳನ್ನು ಪಾಲಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಕೆಲವು ಪ್ರಯಾಣಿಕರು ನಿರ್ಲಕ್ಷಿಸಿದ್ದಾರೆ. ಸರತಿ ಸಾಲು ವ್ಯವಸ್ಥೆ ಪ್ರತಿಕ್ರಿಯೆಯಾಗಿ ನಾವು ಎಲ್ಲ ನಿಲ್ದಾಣಗಳಲ್ಲಿ ವಿಶೇಷ ಕಾರ್ಯಾಚರಣೆ ಅಡಿಯಲ್ಲಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಸರಿಯಾದ ಸರತಿ ಸಾಲಿನಲ್ಲಿ ನಿಂತು ಏರುವಾಗ ಮತ್ತು ಇಳಿಯುವಾಗ ಫೋಟೋಕಾಲ್‌ಗಳನ್ನು ಅನುಸರಿಸಲು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ