AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಣ್ಯ ಫ್ಲೈಓವರ್​ಗೆ ಕೇಬಲ್‌ಗಳ ಅಳವಡಿಕೆ; ಶೀಘ್ರವೇ ಭಾರೀ ವಾಹನ ಸಂಚಾರಕ್ಕೆ ಅವಕಾಶ

ಪೀಣ್ಯ ಫ್ಲೈಓವರ್ ಮೇಲೆ ಭಾರಿ ವಾಹನಗಳಿಗೆ ಅವಕಾಶ ನೀಡಿ ಎರಡು ವರ್ಷಗಳೇ ಕಳೆದಿದೆ.‌ ಆದರೆ ಕೆಲ ತಿಂಗಳಿಂದ ಭಾರೀ ವಾಹನಗಳ ಸಂಚಾರ ನಿಲ್ಲಿಸಲಾಗಿತ್ತು. ಇದೀಗಾ ಫ್ಲೈಓವರ್​ಗೆ ಕೇಬಲ್ ಅಳವಡಿಕೆಯ ಕೆಲಸ ಮುಗಿದಿದ್ದು, ಹೊಸ ವರ್ಷದಿಂದ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುವ ಸಾಧ್ಯತೆ ಇದ್ಯಂತೆ.‌

ಪೀಣ್ಯ ಫ್ಲೈಓವರ್​ಗೆ ಕೇಬಲ್‌ಗಳ ಅಳವಡಿಕೆ; ಶೀಘ್ರವೇ ಭಾರೀ ವಾಹನ ಸಂಚಾರಕ್ಕೆ ಅವಕಾಶ
ಪೀಣ್ಯ ಫ್ಲೈಓವರ್
Poornima Agali Nagaraj
| Edited By: |

Updated on: Oct 08, 2023 | 10:24 AM

Share

ಬೆಂಗಳೂರು, ಅ.08: ನಗರದ ಪೀಣ್ಯ ಫ್ಲೈ ಓವರ್ (Peenya Flyover) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ. ಈ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷದಿಂದ ಅದೆಷ್ಟೋ ದಿನಗಳಿಂದ ಭಾರೀ ವಾಹನಗಳ ಸಂಚಾರ ಸ್ತಬ್ದವಾಗಿಬಿಟ್ಟಿತ್ತು. ಆಲ್ಲದೇ ಫ್ಲೇ ಓವರ್‌ ಸಮಸ್ಯೆಯಿಂದ ಟ್ರಾಫಿಕ್‌ ಕಿರಿಕಿರಿ ಕೂಡ ಜನರನ್ನ ಬಾಧಿಸಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಮೇಲ್ಸೇತುವೆ ಸದೃಢತೆಗೆ ಕೇಬಲ್‌ಗಳ ಅಳವಡಿಕೆಗೆ ಐಐಎಸ್​ಸಿ (IISC) ತಜ್ಞರು ಸೂಚಿಸಿದ್ರು.‌ ಆದರ ಮೇರಿಗೆ ಮಧ್ಯಪ್ರದೇಶದ ಭೂಪಾಲ್‌ನಿಂದ 25 ಟನ್‌ ಕೇಬಲ್‌ ತರಿಸಿ ಕೆಮಿಕಲ್‌ ಅನಾಲಿಸಿಸ್‌ ಮಾಡಿ ಸಧ್ಯ 120 ಕಂಬಗಳಿಗೆ ಅರ್ಧದಷ್ಡು ಕೇಬಲ್‌ ಅಳವಡಿಕೆ ಮಾಡಲಾಗಿದೆ.

ಹೌದು, ಪೀಣ್ಯ ಫ್ಲೈಓವರ್ ನಲ್ಲಿ ಸಧ್ಯದಲ್ಲೆ ಲಾರಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಸಧ್ಯ ಫ್ಲೈಓವರ್​ನ ಎಲ್ಲಾ ಪಿಲ್ಲರ್​ಗಳಿಗೆ ಈಗಾಗಲೇ 240 ಕೇಬಲ್​ಗಳನ್ನ ಅಳವಡಿಕೆ ಮಾಡುತ್ತಿದ್ದು, ಎರಡು ವರ್ಷಗಳಿಂದ ಪರದಾಡುತ್ತಿದ್ದ ವಾಹನ ಸವಾರರಿಗೆ ಇನ್ಮುಂದೆ ಚಾಲನೆ ಸರಾಗವಾಗಲಿದೆ‌‌. ಸಧ್ಯ ಪಿಲ್ಲರ್ ಅಳವಡಿಕೆಯ ಕೆಲಸ ಅರ್ಧದಷ್ಡು ಮುಗಿದಿದ್ದು, ಐಐಎಸ್​ಸಿ ತಜ್ಞರ ಮಾಹಿತಿಯ ಆಧಾರದ ಮೇರಿಗೆ ಕೇಬಲ್ ಅಳವಡಿಸುತ್ತಿದ್ದು, ಒಟ್ಟು 120 ಪಿಲ್ಲರ್​ಗಳಿಗೆ ಒಟ್ಟು 1200 ಕೇಬಲ್​ಗಳನ್ನ ಅಳವಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ಒಂದೊಂದು ಪಿಲ್ಲರ್​ಗೆ ಎರೆಡೆರೆಡು ಅಳವಡಿಕೆ ಮಾಡಿ ನಂತರ 8 ಕೇಬಲ್​ಗಳನ್ನ ನಿಧಾನವಾಗಿ ಅಳವಡಿಕೆ ಮಾಡಲು ನಿರ್ಧರಿಸಿದ್ದು, ಮೊದಲ ಹಂತದ ಕೇಬಲ್ ಅಳವಡಿಕೆಯ ನಂತರ ಲಾರಿಗಳ ಓಡಾಟಕ್ಕೆ ಅವಕಾಶ ನೀಡಲಿದ್ದೇವೆ ಅಂತ ಐಐಎಸ್​ಸಿ ತಜ್ಞರು ಹೇಳ್ತಿದ್ದಾರೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರ ಗಮನಕ್ಕೆ, ಅ.11 ರಂದು ಬೆಂಗಳೂರಿನಿಂದ MEMU ರೈಲುಗಳ ಸಂಚಾರ ರದ್ದು

ಇನ್ನು, ಈ ಫ್ಲೈ ಓವರ್​ನಲ್ಲಿ ಸದ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇಬಲ್‌ ಬದಲಾವಣೆ ಅಳವಡಿಕೆಯಾಗಿ ಎಲ್ಲಾ ಕೆಲಸಗಳು ಅಂದುಕೊಂಡ ಸಮಯದೊಳಗೆ ಮುಗಿದ್ರೆ ಇನ್ನೂ ಎರಡು ತಿಂಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ. ಸಧ್ಯ ಟ್ರಾಫಿಕ್‌ ಕಿರಿಕಿರಿ, ವಾಹನ ದಟ್ಟಣೆಯಿಂದ ಸುಸ್ತಾಗಿರುವ ಈ ಮಾರ್ಗದ ವಾಹನ ಸವಾರರು, ಫ್ಲೈಓವರ್‌ ಯಾವಾಗ ಸರಿಯಾಗುತ್ತೆ ಅಂತಾ ಕಾಯುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​