AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ. ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. […]

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!
ಸಾಂಕೇತಿಕ ಚಿತ್ರ
ಸಾಧು ಶ್ರೀನಾಥ್​
|

Updated on:Mar 02, 2020 | 12:24 PM

Share

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ.

ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. ಬೈಕುಗಳಲ್ಲಿ ಯಾರು ಓಡಾಡೋಕೆ ಆಗಲ್ಲ. ರಸ್ತೆ ಬದಿ ಜನ ತಿರುಗಾಡಂಗೂ ಇಲ್ಲ. ವಾಕಿಂಗು, ರೌಂಡ್ಸು ಅಂತಾ ಯಾರೂ ಆಚೆ ಬರೋ ಹಂಗೇ ಇಲ್ಲ. ಯಾಕಂದ್ರೆ, ಈ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡೋಕೆ ಕಾದು ಕುಳಿತಿರುತ್ತವೆ.

ಅಪ್ಪಿ ತಪ್ಪಿ ಒಬ್ಬೊಬ್ಬರೇ ಸಿಕ್ರೋ ಅವರ ಮೇಲೆ ದಾಳಿ ಮಾಡಿಬಿಡುತ್ತವೆ. ನಿತ್ಯ ಏನಿಲ್ಲ ಅಂದ್ರೂ ಸರಾಸರಿ 30ಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನಲ್ಲಿ ನಾಯಿಗಳು ಕಚ್ಚುತ್ತವೆ ಅನ್ನೋದನ್ನು ಸ್ವತಃ ಆರೋಗ್ಯ ಅಧಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸಾರ್ವಜನಿಕರ ಅಳಲು.

ಇವುಗಳ ಹಾವಳಿ ಮಿತಿಮೀರೋಕೆ ಕಾರಣವಿದೆ. ಸಿಟಿಯ ಗಲ್ಲಿ ಗಲ್ಲಿಯಲ್ಲೂ ಮಾಂಸದ ಅಂಗಡಿಗಳು, ಮಧ್ಯದಂಗಡಿಗಳು ಹೆಚ್ಚಾಗ್ತಿವೆ. ಇದ್ರಿಂದ ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗ್ತಿದ್ದು, ಅವುಗಳಿಂದ ಕಡಿತಕ್ಕೊಳಗಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಶ್ವಾನಗಳ ನಿರ್ವಹಣೆಗೆಂದೇ ಪ್ರತಿವರ್ಷ ಕೋಟ್ಯಂತರ ಖರ್ಚು ಮಾಡುತ್ತೆ.

ಆದ್ರೆ ಈ ಹಾವಳಿ ಮಾತ್ರ ಇನ್ನೂ ತಪ್ಪಿಲ್ಲ. ಈ ಬಗ್ಗೆ ಕಮಿಷನರ್​ರನ್ನ ಕೇಳಿದ್ರೆ, ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಅಂತಾ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಈಗಾಗಲೇ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಇದಕ್ಕೆ ಕಡಿವಾಣ ಹಾಕೋಕೆ ಎಲ್ಲ ಕ್ರಮಗಳನ್ನು ಜರುಗಿಸುತ್ತೇವೆ ಅಂತಿದ್ದಾರೆ.

ಒಟ್ನಲ್ಲಿ, ಸಿಲಿಕಾನ್ ಸಿಟಿ ಮಂದಿಗೆ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗ್ತಾ ಇದೆ. ಇನ್ನಾದರೂ ಇದಕ್ಕೆ ಬಿಬಿಎಂಪಿ ಕಡಿವಾಣ ಹಾಕುತ್ತಾ..? ನೋಡಬೇಕು.

Published On - 7:52 am, Mon, 2 March 20

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ