AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ. ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. […]

ದಿನಾ ಬೀದಿ ನಾಯಿಗಳ ದಾಳಿ, ಕಚ್ಚಿದ್ರೂ BBMP ಕಮಕ್​ ಕಿಮಕ್​ ಅಂತಿಲ್ಲ!
ಸಾಂಕೇತಿಕ ಚಿತ್ರ
ಸಾಧು ಶ್ರೀನಾಥ್​
|

Updated on:Mar 02, 2020 | 12:24 PM

Share

ಬೆಂಗಳೂರು: ಕತ್ತಲಾದ್ರೆ ಸಾಕು.. ಒಬ್ಬೊಬ್ಬರೇ ಓಡಾಡಂಗೇ ಇಲ್ಲ.. ಕಂಡ ಕಂಡ ಏರಿಯಾಗಳಲ್ಲಿ ಸುಮ್ನೆ ನಡ್ಕೊಂಡು ಹೋಗಂಗೇ ಇಲ್ಲ. ಒಂದ್ ವೇಳೆ ಹೋದ್ರೋ ಅಷ್ಟೇ ಕಥೆ. ಕೈಯೋ ಕಾಲಿಗೋ ಅಥವಾ ಮೈಗೋ ಗಾಯ ಗ್ಯಾರಂಟಿ. ಯಾಕಂದ್ರೆ, ಒಬ್ಬೊಬ್ಬರೇ ಬರೋರನ್ನು ಹುರಿದು ಮುಕ್ಕೋಕೆ ಈ ರೌಡಿಗಳು ಕಾಯ್ತಾ ಇರ್ತವೆ.

ದಿನಕ್ಕೆ 30 ಜನರ ಮೇಲೆ ಬೀದಿ ನಾಯಿಗಳ ದಾಳಿ! ಬೆಂಗಳೂರಿನಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿ 11 ಗಂಟೆ ದಾಟ್ತಂದ್ರೆ ಸಾಕು ಶ್ವಾನಗಳ ಅಟ್ಟಹಾಸ ಮಿತಿ ಮೀರುತ್ತೆ. ಬೈಕುಗಳಲ್ಲಿ ಯಾರು ಓಡಾಡೋಕೆ ಆಗಲ್ಲ. ರಸ್ತೆ ಬದಿ ಜನ ತಿರುಗಾಡಂಗೂ ಇಲ್ಲ. ವಾಕಿಂಗು, ರೌಂಡ್ಸು ಅಂತಾ ಯಾರೂ ಆಚೆ ಬರೋ ಹಂಗೇ ಇಲ್ಲ. ಯಾಕಂದ್ರೆ, ಈ ಬೀದಿ ನಾಯಿಗಳು ಅವರ ಮೇಲೆ ದಾಳಿ ಮಾಡೋಕೆ ಕಾದು ಕುಳಿತಿರುತ್ತವೆ.

ಅಪ್ಪಿ ತಪ್ಪಿ ಒಬ್ಬೊಬ್ಬರೇ ಸಿಕ್ರೋ ಅವರ ಮೇಲೆ ದಾಳಿ ಮಾಡಿಬಿಡುತ್ತವೆ. ನಿತ್ಯ ಏನಿಲ್ಲ ಅಂದ್ರೂ ಸರಾಸರಿ 30ಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನಲ್ಲಿ ನಾಯಿಗಳು ಕಚ್ಚುತ್ತವೆ ಅನ್ನೋದನ್ನು ಸ್ವತಃ ಆರೋಗ್ಯ ಅಧಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸಾರ್ವಜನಿಕರ ಅಳಲು.

ಇವುಗಳ ಹಾವಳಿ ಮಿತಿಮೀರೋಕೆ ಕಾರಣವಿದೆ. ಸಿಟಿಯ ಗಲ್ಲಿ ಗಲ್ಲಿಯಲ್ಲೂ ಮಾಂಸದ ಅಂಗಡಿಗಳು, ಮಧ್ಯದಂಗಡಿಗಳು ಹೆಚ್ಚಾಗ್ತಿವೆ. ಇದ್ರಿಂದ ಬೀದಿ ನಾಯಿಗಳ ಕಾಟ ಕೂಡ ಹೆಚ್ಚಾಗ್ತಿದ್ದು, ಅವುಗಳಿಂದ ಕಡಿತಕ್ಕೊಳಗಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಶ್ವಾನಗಳ ನಿರ್ವಹಣೆಗೆಂದೇ ಪ್ರತಿವರ್ಷ ಕೋಟ್ಯಂತರ ಖರ್ಚು ಮಾಡುತ್ತೆ.

ಆದ್ರೆ ಈ ಹಾವಳಿ ಮಾತ್ರ ಇನ್ನೂ ತಪ್ಪಿಲ್ಲ. ಈ ಬಗ್ಗೆ ಕಮಿಷನರ್​ರನ್ನ ಕೇಳಿದ್ರೆ, ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಅಂತಾ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಈಗಾಗಲೇ ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಇದಕ್ಕೆ ಕಡಿವಾಣ ಹಾಕೋಕೆ ಎಲ್ಲ ಕ್ರಮಗಳನ್ನು ಜರುಗಿಸುತ್ತೇವೆ ಅಂತಿದ್ದಾರೆ.

ಒಟ್ನಲ್ಲಿ, ಸಿಲಿಕಾನ್ ಸಿಟಿ ಮಂದಿಗೆ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗ್ತಾ ಇದೆ. ಇನ್ನಾದರೂ ಇದಕ್ಕೆ ಬಿಬಿಎಂಪಿ ಕಡಿವಾಣ ಹಾಕುತ್ತಾ..? ನೋಡಬೇಕು.

Published On - 7:52 am, Mon, 2 March 20

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು