ಕರ್ನಾಟಕದ ಹಲವೆಡೆ ಹೆಚ್ಚಿದ ಕಲುಷಿತ ನೀರಿನ ಸಮಸ್ಯೆ; ಅಧಿಕಾರಿಗಳಿಂದ 3 ಲಕ್ಷ ನೀರಿನ ಮಾದರಿ ಸಂಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 25, 2024 | 8:45 PM

ಈ ಬಾರಿಯ ಬೇಸಿಗೆಯಲ್ಲಿ ಒಂದು ಕಡೆ ಸಿಕ್ಕಾಪಟೆ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದರು. ಮಳೆ ಇಲ್ಲದೆ ತೀವ್ರ ಬರ. ಇದರ ಮಧ್ಯ ಸಿಕ್ಕ ನೀರು ಕುಡಿದು ಜನರು ಆಸ್ಪತ್ರೆಗೆ ಸೇರಿದ ಸಾಕಷ್ಟು ಪ್ರಕರಣಗಳು ನಡೆದಿವೆ. ಅಲ್ಲದೇ ಕಲುಷಿತ ನೀರಿನಿಂದ ಹಲವು ಜೀವಗಳು ಬಲಿಯಾಗಿವೆ. ರಾಜ್ಯದ ಹಲವೆಡೆ ಕಲುಷಿತ ನೀರಿನ ಸಮಸ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಾಂತರ ಪ್ರದೇಶಗಳಲ್ಲಿ 3 ಲಕ್ಷ ನೀರಿನ ಮಾದರಿ ಸಂಗ್ರಹಿಸಿದೆ.

ಕರ್ನಾಟಕದ ಹಲವೆಡೆ ಹೆಚ್ಚಿದ ಕಲುಷಿತ ನೀರಿನ ಸಮಸ್ಯೆ; ಅಧಿಕಾರಿಗಳಿಂದ 3 ಲಕ್ಷ ನೀರಿನ ಮಾದರಿ ಸಂಗ್ರಹ
ಕಲುಷಿತ ನೀರಿನ ಸಮಸ್ಯೆ ಹಿನ್ನಲೆ 3 ಲಕ್ಷ ನೀರಿನ ಮಾದರಿ ಸಂಗ್ರಹ
Follow us on

ಬೆಂಗಳೂರು, ಜೂ.25: ಕರ್ನಾಟಕದ ಹಲವೆಡೆ ಕಲುಷಿತ ನೀರಿನ ಸಮಸ್ಯೆ(Contaminated water problem) ಹೆಚ್ಚಳ ಹಿನ್ನೆಲೆ ಎಚ್ಚೆತ್ತ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು, ಜೂನ್ 14ರಿಂದ ಜೂ.21ರವರೆಗೆ 3 ಲಕ್ಷ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಇನ್ನು ಈಗಾಗಲೇ ಸಂಗ್ರಹಿಸಿದ ನೀರಿನ ಮಾದರಿಯನ್ನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಜಲಮಂಡಳಿಗೆ ಪತ್ರ ಬರೆದಿದ್ದ ಡಿಕೆ ಶಿವಕುಮಾರ್

ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ಪ್ರಕರಣಗಳು ಹೆಚ್ಚಳವಾಗುತ್ತಿದ್ದ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಳೆದ ಮೇ.24 ರಂದು ಬಿಬಿಎಂಪಿ ಮುಖ್ಯ ಆಯುಕ್ತರು, ಜಲಮಂಡಳಿ ಅಧ್ಯಕ್ಷರು ಹಾಗೂ ನಗರ ಜಿ.ಪಂ ಸಿಇಒಗೆ ಪತ್ರ ಬರೆದಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರೈಕೆ ಮಾಡುತ್ತಿರುವ ನೀರನ್ನು ಪರೀಕ್ಷಿಸಿ. ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಸರಬರಾಜು ಮಾಡಿ ಎಂದಿದ್ದರು.

ಇದನ್ನೂ ಓದಿ:ಕಲುಷಿತ ನೀರು ಕುಡಿದು ಅಸ್ವಸ್ಥರಾಗ್ತಿರುವ ಕೇಸ್​​ ಹೆಚ್ಚಳ: ಬಿಬಿಎಂಪಿ, ಜಲಮಂಡಳಿಗೆ ಡಿಕೆಶಿ ಖಡಕ್ ಸೂಚನೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರು ಕುಡಿದಿದ್ದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಿದ್ದು, ಕುಡಿಯುವ ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ಕೊಟ್ಟಿದ್ದರು. ಇದೀಗ ಅಧಿಕಾರಿಗಳು 3 ಲಕ್ಷ ನೀರಿನ ಮಾದರಿಯನ್ನ ಸಂಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Tue, 25 June 24