ಬೆಂಗಳೂರಿನ ಇಂದಿರಾ ಕ್ಯಾಂಟೀನ್​ಗಳಲ್ಲಿ ಇನ್ಮುಂದೆ ಸಿಗಲಿವೆ ನಂದಿನಿ ಉತ್ಪನ್ನಗಳು

ಕೆಲ ದಿನಗಳ ಹಿಂದಷ್ಟೇ ಇಂದಿರಾ ಕ್ಯಾಂಟೀನ್​ನಲ್ಲಿ ವೆರೈಟಿ ವೆರೈಟಿ ಫುಡ್​ ನೀಡಲು ಹೊಸ ಮೆನು ಬಿಡುಗಡೆ ಮಾಡಲಾಗಿದ್ದು ಇದೀಗ ಬೆಂಗಳೂರಿನ ಇಂದಿರಾ ಕ್ಯಾಂಟೀನ್​ನಲ್ಲಿ ನಂದಿನಿ ಉತ್ಪನ್ನಗಳನ್ನೂ ನೀಡಲು ಚಿಂತನೆ ನಡೆದಿದೆ.

ಬೆಂಗಳೂರು: ಸಿದ್ದರಾಮಯ್ಯ(Siddaramaiah) ಈ ಹಿಂದೆ ಸಿಎಂ ಆಗಿದ್ದಾಗ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್(Indira Canteen) ಆರಂಭಿಸಿದ್ರು. ಆದ್ರೆ ಬಿಜೆಪಿ ಸರ್ಕಾರ(BJP) ಅಸ್ತಿತ್ವಕ್ಕೆ ಬಂದ ಮೇಲೆ ಈ ಕ್ಯಾಂಟೀನ್‌ಗಳು ಹಂತಹಂತವಾಗಿ ಮೂಲೆ ಗುಂಪಾಗಿದ್ದವು. ಇದನ್ನೆಲ್ಲಾ ಗಮನಿಸುತ್ತಲೇ ಇದ್ದ ಸಿದ್ದರಾಮಯ್ಯ ಈಗ ಮತ್ತೊಮ್ಮೆ ಸಿಎಂ ಆಗಿದ್ದು ತಮ್ಮ ಕನಸಿನ ಕೂಸಿನ ಯೋಜನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಇಂದಿರಾ ಕ್ಯಾಂಟೀನ್​ನಲ್ಲಿ ವೆರೈಟಿ ವೆರೈಟಿ ಫುಡ್​ ನೀಡಲು ಹೊಸ ಮೆನು ಬಿಡುಗಡೆ ಮಾಡಲಾಗಿದ್ದು ಇದೀಗ ಬೆಂಗಳೂರಿನ ಇಂದಿರಾ ಕ್ಯಾಂಟೀನ್​ನಲ್ಲಿ ನಂದಿನಿ ಉತ್ಪನ್ನಗಳನ್ನೂ(Nandini Products) ನೀಡಲು ಚಿಂತನೆ ನಡೆದಿದೆ.

ಕ್ವಾಲಿಟಿ ಹಾಗು ಕ್ವಾಂಟಿಟಿ ವಿಚಾರವಾಗಿ ಮೊದಲಿನಿಂದಲೂ ಅನೇಕ ದೂರುಗಳು ಬರ್ತಿದ್ರಿಂದ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದಂತೆ ಸೂಚಿಸಿದ್ದರು. ಹಾಗೂ ರಾಗಿ ಮುದ್ದೆ, ಸೊಪ್ಪು ಸಾರು ಸೇರಿದಂತೆ ರುಚಿಕರವಾದ ಹೊಸ ಮೆನುವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಸಿಲಿಕಾನ್ ಸಿಟಿಯಲ್ಲಿ ಇಂದಿರಾ ಕ್ಯಾಂಟೀನ್​ಗಳು ಮತಷ್ಟು ಹೈಟೆಕ್ ರೂಪ ಪಡೆಯಲ್ಲಿವೆ.

ಇದನ್ನೂ ಓದಿ: ಇನ್ಮಂದೆ ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲಿದೆ ವೆರೈಟಿ ಊಟ: ಇಲ್ಲಿದೆ ಹೊಸ ಮೆನು

ಇನ್ನುಮುಂದೆ ಬೆಂಗಳೂರಿನ ಇಂದಿರಾ ಕ್ಯಾಂಟೀನ್​ಗೆ ಹೋದ್ರೆ ಊಟದ ಜೊತೆ ನಂದಿನಿ ಐಸ್ ಕ್ರೀಮ್, ಚಾಕಲೇಟ್, ಬಿಸ್ಕೇಟ್, ಹಾಲು, ಮೊಸರು, ತುಪ್ಪಾ ಕೂಡಾ ಸಿಗುತ್ತೆ. ಈ ಬಗ್ಗೆ KMF ಹಾಗೂ ರಾಜ್ಯ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿದ್ದ 198 ಇಂದಿರಾ ಕ್ಯಾಂಟೀನ್​ಗಳ ಸಂಖ್ಯೆಯನ್ನ 250ಕ್ಕೆ ಏರಿಕೆ ಮಾಡಲು ಸಿಎಂ ಮುಂದಾಗಿದ್ದು ಇದರ ಜೊತೆ ನಂದಿನಿ ವ್ಯಾಪಾರ ವಹಿವಾಟು ಹೆಚ್ಚಿಸಲು ಇಂದಿರಾ ಕ್ಯಾಂಟೀನ್​ಗಳಲ್ಲಿಯೇ ಸರ್ಕಾರ ಹಾಗೂ KMF ಸಹಯೋಗದಲ್ಲಿ ನಂದಿನಿ ಮಳಿಗೆ ತೆರಯಲು ಚಿಂತನೆ ನಡೆದಿದೆ. ನಂದಿನಿ ಬೊಕ್ಕಸ ತುಂಬಲು ಸರ್ಕಾರ ಹಾಗೂ ನೂತನ ಕೆಎಮ್​ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಸ್ಟರ್ ಪ್ಲಾನ್ ಮಾಡಿದ್ದು ನಂದಿನಿ ಬ್ಯಾಂಡ್ ಹೆಚ್ಚಿಸಲು ಮುಂದಾಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:28 am, Thu, 22 June 23

Loading...
Unable to load recommendations.
Follow Us