AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನೀರಿನ ದಾಹ ತಣಿಸಲು 128 ವರ್ಷಗಳ ಹಳೆಯದಾದ ಸೋಲದೇವನಹಳ್ಳಿ ಪಂಪ್​ ಸ್ಟೇಷನ್​ಗೆ ಮರು ಜೀವ

ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್​ ಸ್ಟೇಷನ್ ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಏಪ್ರಿಲ್​ 20 ರಂದು ಪಂಪ ಸ್ಟೇಷನ್​ ಕಾರ್ಯಾರಂಭ ಮಾಡಲಿದೆ.

ಬೆಂಗಳೂರಿನಲ್ಲಿ ನೀರಿನ ದಾಹ ತಣಿಸಲು 128 ವರ್ಷಗಳ ಹಳೆಯದಾದ ಸೋಲದೇವನಹಳ್ಳಿ ಪಂಪ್​ ಸ್ಟೇಷನ್​ಗೆ ಮರು ಜೀವ
ಸೋಲದೇವನಹಳ್ಳಿ ಪಂಪ್​ ಸ್ಟೇಷನ್
Follow us
ವಿವೇಕ ಬಿರಾದಾರ
|

Updated on:Apr 15, 2024 | 8:45 AM

ಬೆಂಗಳೂರು, ಏಪ್ರಿಲ್​ 15: ನೀರಿಗಾಗಿ ಬೆಂಗಳೂರಿನ (Bengaluru) ಜನರು ಪರದಾಡುತ್ತಿದ್ದಾರೆ. ಉದ್ಭವವಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಲಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಪ್ರಯತ್ನದ ಒಂದು ಭಾಗವೆಂಬಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ (BWSSB) ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್​ ಸ್ಟೇಷನ್ (Soladevanahalli Pump Station)​​ ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ.

ಅಂದುಕೊಂಡಂತೆ ಎಲ್ಲವು ನಡೆದರೆ ಏಪ್ರಿಲ್​ 20 ರಂದು ಪಂಪ ಸ್ಟೇಷನ್​ ಕಾರ್ಯಾರಂಭ ಮಾಡಲಿದೆ. ಈ ಪಂಪ ಸ್ಟೇಷನ್​ ಮುಖಾಂತರ ಹೇಸರಗಟ್ಟ ಕೆರೆಯಿಂದ 0.3 ಟಿಎಂಸಿ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು.

ಬೆಂಗಳೂರು ಸುಸಜ್ಜಿತ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ದೇಶದ ಎರಡನೇ ನಗರವಾಗಿದೆ. 1873ರಲ್ಲಿ ಬೆಂಗಳೂರಿನಲ್ಲಿ ವಾಟರ್​ ಟ್ಯಾಂಕರ್​ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 1857-77 ಎರಡೂವರೆ ವರ್ಷಗಳ ಕಾಲ ಆವರಿಸಿದ ಬರಗಾಲದಿಂದ ನೀರಿನ ಮೂಲಗಳು ಬತ್ತಿ ಹೋದವು.

ಇದನ್ನೂ ಓದಿ: ಈ ಸಣ್ಣ ವಿಧಾನ ಅನುಸರಿಸಿ ದಿನಕ್ಕೆ 600 ಲೀಟರ್ ನೀರು ಉಳಿಸಿ: ಬೆಂಗಳೂರು ವೈದ್ಯೆಯ ಸಲಹೆ ಈಗ ವೈರಲ್

ಈ ಸಮಯದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೆ ಶೇಶಾದ್ರಿ ಅಯ್ಯರ ಅವರು ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದರು. ಅರ್ಕಾವತಿ ನದಿಯಿಂದ ಹೇಸರಘಟ್ಟ ಕೆರೆಗೆ ನೀರು ಹರಿಸಲು ​ ನಿರ್ಧರಿಸಿದರು. ಈ ಯೋಜನೆಗೆ ಮಹರಾಜ ಚಾಮರಾಜೇಂದ್ರ ಒಡೆಯರ ಅವರ ಹೆಸರು ಇಡಲಾಯಿತು.

ಪ್ರಸ್ತುತ ಹೇಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ನೀರು ಲಭ್ಯವಿದೆ. ಹೀಗಾಗಿ ಸೋಲದೇವನಹಳ್ಳಿ ಪಂಪಿಂಗ್​ ಸ್ಟೇಷನ್​ನಲ್ಲಿ ನೀರನ್ನು ಸಂಸ್ಕರಿಸಿ ಎಂಇಐ ಲೇಔಟ್​​ನಲ್ಲಿರುವ ಹೇಸರಘಟ್ಟ ಕೆರೆಯಲ್ಲಿ ಸಂಗ್ರಹಿಸಲಾಗುವುದು. ಬಳಿಕ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. 128 ವರ್ಷಗಳು ಹಳೆಯದಾದ ಪಂಪಿಂಗ್​ ಸ್ಟೇಷನ್​ ಅನ್ನು ಏಪ್ರಿಲ್​ 20 ರಂದು ಮರು ಪ್ರಾರಂಭಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಡಬ್ಲ್ಯೂಎಸ್​ಎಸ್​ಬಿ ಅಧ್ಯಕ್ಷ ವಿ ರಾಮಪ್ರಸಾತ್​ ಮನೋಹರ್​ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:45 am, Mon, 15 April 24

ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ