Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲುಲು ಮಾಲ್​ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಯಲು, ವೀಕೆಂಡ್ ಬಂದ್ರೆ ಸಾಕು ಈತನಿಗೆ ಅದೇ ಕೆಲಸ

Bengaluru Lulu Mall groping case: ಬೆಂಗಳೂರಿನ ಲುಲು ಮಾಲ್​ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಇದೀಗ ಕೋರ್ಟ್​ಗೆ ಬಂದು ಶರಣಾಗಿದ್ದು, ಆತ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ಈತನನ್ನು ವಿಚಾರಣೆಗೊಳಡಿಸಿದಾಗ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಟಾಬಯಲಾಗಿವೆ.

ಲುಲು ಮಾಲ್​ ಚಪಲ ಚನ್ನಿಗನ ಮತ್ತಷ್ಟು ಕೃತ್ಯಗಳು ಬಯಲು, ವೀಕೆಂಡ್ ಬಂದ್ರೆ ಸಾಕು ಈತನಿಗೆ ಅದೇ ಕೆಲಸ
Follow us
Jagadish PB
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2023 | 8:16 AM

ಬೆಂಗಳೂರು, (ನವೆಂಬರ್ 04): ಬೆಂಗಳೂರಿನ ಲುಲು ಮಾಲ್​ನಲ್ಲಿ (Bengaluru Lulu Mall )ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ವಿಡಿಯೋ ವೈರಲ್​ ಆಗಿದ್ದು, ಇದೀಗ ಆ ವ್ಯಕ್ತಿ ಕೋರ್ಟ್​ಗೆ ಬಂದು ಶರಣಾಗಿದ್ದಾನೆ. ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಆಗಿರುವ ಅಶ್ವಥ್ ನಾರಾಯಣ (60) ಎನ್ನುವಾತನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಚಪಲ ಚನ್ನಿಗನ ಒಂದೊಂದೇ ಕೃತ್ಯಗಳು ಬಟಾಬಯಲಾಗಿವೆ.

ಪ್ರತೀ ವೀಕೆಂಡ್ ನಲ್ಲೂ ಆತನಿಗೆ ಇದೇ ದಂಧೆಯಾಗಿ ಮಾಡಿಕೊಂಡಿದ್ದ. ಅದರಂತೆ ಅಕ್ಟೋಬರ್ 29ರಂದು ಭಾನುವಾರ ಸಂಜೆ ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ಯುವತಿಯೋರ್ವಳ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಸಹ್ಯವಾಗಿ ವರ್ತಿಸಿದ್ದ. ಕೇವಲ ಈ ಯುವತಿ ಮಾತ್ರವಲ್ಲದೇ ಅಂದು ಅದೇ ಮಾಲ್ ನಲ್ಲಿ ಐದಾರು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಮಾಲ್​ನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಅಶ್ವಥ್ ನಾರಾಯಣನ ಚಪಲದ ಚಟ ಬಯಲಿಗೆ ಬಂದಿದೆ.

ಇದನ್ನೂ ಓದಿ: ಲುಲು ಮಾಲ್​ನಲ್ಲಿ ಯುವತಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದ ವ್ಯಕ್ತಿಯ ಗುರುತು ಪತ್ತೆ

ಬರೋಬ್ಬರಿ ಮೂರು ತಾಸು ಡ್ಯೂರೇಷನ್ ನ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದು, ಲುಲು ಮಾಲ್​ನ ಪರಿಶೀಲನೆ ವೇಳೆ ಘಟನೆಯ ದಿನ ಐದಾರು ಯುವತಿಯರ ಜೊತೆ ಅನುಚಿತ ವರ್ತನೆ ಮಾಡಿದ್ದಾನೆ. ಈ ಚಪಲ ಚೆನ್ನಿಗರಾಯನಿಗೆ ವೀಕೆಂಡ್ ಬಂತು ಅಂದ್ರೆ ಸಾಕು​ ಮನೆಗೆ ಹೋಗುತ್ತಿರಲಿಲ್ಲ. ಬರೀ ಮಾಲ್​ಗೆ ಹೋಗುವುದು ಮಹಿಳೆ ಹಾಗೂ ಯುವತಿರಿಗೆ ಡಿಕ್ಕಿ ಹೊಡೆಯುವುದು ಹಾಗೂ ಅವರ ದೇಹವನ್ನು ಮುಟ್ಟಿ ಆನಂದ ಪಡುವುದೇ ಈತನ ಕೆಲಸ. ಹೀಗಾಗಿ ಬೇರೆ ಬೇರೆ ಮಾಲ್ ಗಳಲ್ಲೂ ಈ ಹಿಂದೆ ಇದೇ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಗರದ ಹಲವು ಮಾಲ್ ಗಳ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಶಿಕ್ಷಕ,ಹೆಡ್ ಮಾಸ್ಟರ್ ಆಗಿದ್ದ ಅಶ್ವಥ ನಾರಾಯಣ ಒಳ್ಳೆಯ ಸಿಂಗರ್ ಆಗಿದ್ದ. ಆದ್ರೆ ಮಾಲ್ ನ ಸಿಸಿಟಿವಿ ಪರಿಶೀಲನೆ ವೇಳೆ ನಿವೃತ್ತ ಶಿಕ್ಷಕನ ಅಸಲಿ ಆಟ ಬಟಾಬಯಲಾಗಿದೆ. ಸದ್ಯ ಆರೋಪಿ ಕೋರ್ಟ್ ಗೆ ಬಂದು ಶರಣಾಗಿದ್ದು, ಪೊಲೀಸರು ಆರೋಪಿ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ
ದಾವಣಗೆರೆ: ಇದ್ದಕ್ಕಿದ್ದಂತೆ ಒಡೆದು ಹೋದ ಭದ್ರಾ ಕಾಲುವೆ
‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮ ಮಾತು
‘ಒಮ್ಮೆ ಬಂದು ನೊಡ್ಕೊಂಡು ಹೋಗೋ ಕಂದಾ’; ಸೋದರತ್ತೆ ನಾಗಮ್ಮ ಮಾತು
ಮಹದೇವಪ್ಪ ಮನೆಯಲ್ಲಿ ಎಸ್​ಸಿ ಎಸ್​ಟಿ ನಾಯಕರ ಸಭೆಯ ರಹಸ್ಯವೇನು?
ಮಹದೇವಪ್ಪ ಮನೆಯಲ್ಲಿ ಎಸ್​ಸಿ ಎಸ್​ಟಿ ನಾಯಕರ ಸಭೆಯ ರಹಸ್ಯವೇನು?
ಮೈಸೂರಿನ ಹಲವೆಡೆ ಆಲಿಕಲ್ಲು ಮಳೆ: ವರ್ಷದ ಮೊದಲ ಮಳೆಗೆ ಜನ ಖುಷ್
ಮೈಸೂರಿನ ಹಲವೆಡೆ ಆಲಿಕಲ್ಲು ಮಳೆ: ವರ್ಷದ ಮೊದಲ ಮಳೆಗೆ ಜನ ಖುಷ್
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ