AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ-ಗುರುವಾರ ಎಂದಿನಂತೆ ವಿದ್ಯುತ್ ಕಡಿತ, ವಿವರ ಇಲ್ಲಿದೆ

Bangalore Electricity: ಬುಧವಾರ ಮತ್ತು ಗುರುವಾರ ಉದ್ದೇಶಿತ ವಿದ್ಯುತ್ ನಿಲುಗಡೆಯಿಂದ ಪರಿಣಾಮ ಬೀರಬಹುದಾದ ಬೆಸ್ಕಾಂ ವೃತ್ತಗಳು, ವಿಭಾಗಗಳು, ಫೀಡರ್‌ಗಳು ಮತ್ತು ಪ್ರದೇಶಗಳು ಇಲ್ಲಿವೆ

Bengaluru Power Cut: ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ-ಗುರುವಾರ ಎಂದಿನಂತೆ ವಿದ್ಯುತ್ ಕಡಿತ, ವಿವರ ಇಲ್ಲಿದೆ
ಪವರ್ ಕಟ್
TV9 Web
| Updated By: ಸಾಧು ಶ್ರೀನಾಥ್​|

Updated on: Nov 08, 2022 | 11:10 AM

Share

ಕರ್ನಾಟಕದ ಏಕೈಕ ವಿದ್ಯುತ್ ವಿತರಕ ಕೆಟಿಪಿಸಿಎಲ್ -ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (Karnataka Power Transmission Corporation Limited- KTPCL) ಕೆಲವು ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಗುರುವಾರ (November 9-10) ಯೋಜಿತ ವಿದ್ಯುತ್ ಕಡಿತವನ್ನು ನಿರೀಕ್ಷಿಸಲಾಗಿದೆ.

ಕೆಟಿಪಿಸಿಎಲ್ ಸಂಸ್ಥೆಯ ಕೆಲವು ಅಪೂರ್ಣ ಯೋಜನೆಗಳು, ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಗುರುವಾರ ನಿಗದಿತವಾಗಿ ವಿದ್ಯುತ್ ಸ್ಥಗಿತಗೊಳ್ಳಬಹುದು ಎಂದು ಬೆಂಗಳೂರಿನ ವಿದ್ಯುತ್ ವ್ಯವಸ್ಥಾಪಕ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ Bangalore Electricity Supply Company -BESCOM) ತನ್ನ ವೆಬ್‌ಸೈಟ್‌ನಲ್ಲಿ ಸೂಚಿಸಿದೆ.

ಇವುಗಳಲ್ಲಿ ಹಳೆಯ 220 ಕಿಲೋವೋಲ್ಟ್‌ಗಳ (ಕೆವಿ) ಟವರ್‌ಗಳು ಮತ್ತು ಕಂಡಕ್ಟರ್‌ಗಳ ಬಿಡುಗಡೆ, ಅವುಗಳ ಬದಲಾಗಿ ಹೊಸದನ್ನು ಸ್ಟ್ರಿಂಗ್ ಮಾಡುವುದು, ಅಸ್ತಿತ್ವದಲ್ಲಿರುವ ಲೈನ್‌ಗಳನ್ನು ಡೈರೆಕ್ಟ್​​ ಕರೆಂಟ್​​ಗೆ (ಡಿಸಿ) ಪರಿವರ್ತಿಸುವ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಲ್ಲಿ ಹೆಚ್ಚಿನವುಗಳನ್ನು ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ತೆಗೆದುಕೊಳ್ಳಲಾಗುವುದು. ಆದ್ದರಿಂದ, ವಿದ್ಯುತ್ ಕಡಿತವು ಸುಮಾರು ಆರು ಗಂಟೆಗಳವರೆಗೆ ಇರುತ್ತದೆ.

ಬುಧವಾರ ಮತ್ತು ಗುರುವಾರ ಉದ್ದೇಶಿತ ವಿದ್ಯುತ್ ನಿಲುಗಡೆಯಿಂದ ಪರಿಣಾಮ ಬೀರಬಹುದಾದ ಬೆಸ್ಕಾಂ ವೃತ್ತಗಳು, ವಿಭಾಗಗಳು, ಫೀಡರ್‌ಗಳು ಮತ್ತು ಪ್ರದೇಶಗಳು ಇಲ್ಲಿವೆ:

ಬೆಸ್ಕಾಂ ವೃತ್ತ: ರಾಮನಗರ ಬೆಸ್ಕಾಂ ವಿಭಾಗ: ಕನಕಪುರ

ತೊಂದರೆಗೊಳಗಾಗುವ ಪ್ರದೇಶಗಳು: ತುಗಣಿ ಫೀಡರ್ಟ್​, ಹಾರೋಹಳ್ಳಿ, ಟಿಕೆ ಹಳ್ಳಿ, ಸೋಮನಹಳ್ಳಿ

ಬೆಸ್ಕಾಂ ಪ್ರತಿ ತಿಂಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರಿಂದ ವಿದ್ಯುತ್ ಕಡಿತವನ್ನು ಮೊದಲೇ ನಿಗದಿಪಡಿಸುತ್ತದೆ. ಕರ್ನಾಟಕದ ರಾಜಧಾನಿಯಲ್ಲಿ ನಿರಂತರ ಇತ್ತೀಚಿನ ಮಳೆ ಮತ್ತು ಅನಿರೀಕ್ಷಿತ ಹವಾಮಾನದಿಂದಾಗಿ ಇಂತಹ ಹಲವು ಅವಧಿ ಮೀರಿದ ಯೋಜನೆಗಳನ್ನು ಮುಂದುವರಿಸಬೇಕಾಗಿದೆ.

ಬಿಎಂಆರ್‌ಸಿಎಲ್‌ನಿಂದ ನಮ್ಮ ಮೆಟ್ರೋ ನಿರ್ಮಾಣ, ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ನೀರಿನ ಪೈಪ್‌ಗಳು ಮತ್ತು ಗ್ಯಾಸ್ ಲೈನ್‌ಗಳನ್ನು ಹಾಕುವುದು ಮತ್ತು ಇನ್ನೂ ಹಲವು ಯೋಜನೆಗಳ ವಿಳಂಬದಿಂದಾಗಿಯೂ ಜೊತೆಗೆ, ನಗರದ ಎಲ್ಲಾ ಓವರ್‌ಹೆಡ್ ಕೇಬಲ್‌ಗಳನ್ನು ಭೂಗತಗೊಳಿಸುವ ಯೋಜನೆಯೂ ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಆಗಾಗ ನಡೆಯುತ್ತಿರುತ್ತದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ