AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ-ಗುರುವಾರ ಎಂದಿನಂತೆ ವಿದ್ಯುತ್ ಕಡಿತ, ವಿವರ ಇಲ್ಲಿದೆ

Bangalore Electricity: ಬುಧವಾರ ಮತ್ತು ಗುರುವಾರ ಉದ್ದೇಶಿತ ವಿದ್ಯುತ್ ನಿಲುಗಡೆಯಿಂದ ಪರಿಣಾಮ ಬೀರಬಹುದಾದ ಬೆಸ್ಕಾಂ ವೃತ್ತಗಳು, ವಿಭಾಗಗಳು, ಫೀಡರ್‌ಗಳು ಮತ್ತು ಪ್ರದೇಶಗಳು ಇಲ್ಲಿವೆ

Bengaluru Power Cut: ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ-ಗುರುವಾರ ಎಂದಿನಂತೆ ವಿದ್ಯುತ್ ಕಡಿತ, ವಿವರ ಇಲ್ಲಿದೆ
ಪವರ್ ಕಟ್
TV9 Web
| Edited By: |

Updated on: Nov 08, 2022 | 11:10 AM

Share

ಕರ್ನಾಟಕದ ಏಕೈಕ ವಿದ್ಯುತ್ ವಿತರಕ ಕೆಟಿಪಿಸಿಎಲ್ -ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (Karnataka Power Transmission Corporation Limited- KTPCL) ಕೆಲವು ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಗುರುವಾರ (November 9-10) ಯೋಜಿತ ವಿದ್ಯುತ್ ಕಡಿತವನ್ನು ನಿರೀಕ್ಷಿಸಲಾಗಿದೆ.

ಕೆಟಿಪಿಸಿಎಲ್ ಸಂಸ್ಥೆಯ ಕೆಲವು ಅಪೂರ್ಣ ಯೋಜನೆಗಳು, ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದ ಕೆಲವು ಭಾಗಗಳಲ್ಲಿ ಬುಧವಾರ ಮತ್ತು ಗುರುವಾರ ನಿಗದಿತವಾಗಿ ವಿದ್ಯುತ್ ಸ್ಥಗಿತಗೊಳ್ಳಬಹುದು ಎಂದು ಬೆಂಗಳೂರಿನ ವಿದ್ಯುತ್ ವ್ಯವಸ್ಥಾಪಕ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ Bangalore Electricity Supply Company -BESCOM) ತನ್ನ ವೆಬ್‌ಸೈಟ್‌ನಲ್ಲಿ ಸೂಚಿಸಿದೆ.

ಇವುಗಳಲ್ಲಿ ಹಳೆಯ 220 ಕಿಲೋವೋಲ್ಟ್‌ಗಳ (ಕೆವಿ) ಟವರ್‌ಗಳು ಮತ್ತು ಕಂಡಕ್ಟರ್‌ಗಳ ಬಿಡುಗಡೆ, ಅವುಗಳ ಬದಲಾಗಿ ಹೊಸದನ್ನು ಸ್ಟ್ರಿಂಗ್ ಮಾಡುವುದು, ಅಸ್ತಿತ್ವದಲ್ಲಿರುವ ಲೈನ್‌ಗಳನ್ನು ಡೈರೆಕ್ಟ್​​ ಕರೆಂಟ್​​ಗೆ (ಡಿಸಿ) ಪರಿವರ್ತಿಸುವ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಲ್ಲಿ ಹೆಚ್ಚಿನವುಗಳನ್ನು ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ತೆಗೆದುಕೊಳ್ಳಲಾಗುವುದು. ಆದ್ದರಿಂದ, ವಿದ್ಯುತ್ ಕಡಿತವು ಸುಮಾರು ಆರು ಗಂಟೆಗಳವರೆಗೆ ಇರುತ್ತದೆ.

ಬುಧವಾರ ಮತ್ತು ಗುರುವಾರ ಉದ್ದೇಶಿತ ವಿದ್ಯುತ್ ನಿಲುಗಡೆಯಿಂದ ಪರಿಣಾಮ ಬೀರಬಹುದಾದ ಬೆಸ್ಕಾಂ ವೃತ್ತಗಳು, ವಿಭಾಗಗಳು, ಫೀಡರ್‌ಗಳು ಮತ್ತು ಪ್ರದೇಶಗಳು ಇಲ್ಲಿವೆ:

ಬೆಸ್ಕಾಂ ವೃತ್ತ: ರಾಮನಗರ ಬೆಸ್ಕಾಂ ವಿಭಾಗ: ಕನಕಪುರ

ತೊಂದರೆಗೊಳಗಾಗುವ ಪ್ರದೇಶಗಳು: ತುಗಣಿ ಫೀಡರ್ಟ್​, ಹಾರೋಹಳ್ಳಿ, ಟಿಕೆ ಹಳ್ಳಿ, ಸೋಮನಹಳ್ಳಿ

ಬೆಸ್ಕಾಂ ಪ್ರತಿ ತಿಂಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರಿಂದ ವಿದ್ಯುತ್ ಕಡಿತವನ್ನು ಮೊದಲೇ ನಿಗದಿಪಡಿಸುತ್ತದೆ. ಕರ್ನಾಟಕದ ರಾಜಧಾನಿಯಲ್ಲಿ ನಿರಂತರ ಇತ್ತೀಚಿನ ಮಳೆ ಮತ್ತು ಅನಿರೀಕ್ಷಿತ ಹವಾಮಾನದಿಂದಾಗಿ ಇಂತಹ ಹಲವು ಅವಧಿ ಮೀರಿದ ಯೋಜನೆಗಳನ್ನು ಮುಂದುವರಿಸಬೇಕಾಗಿದೆ.

ಬಿಎಂಆರ್‌ಸಿಎಲ್‌ನಿಂದ ನಮ್ಮ ಮೆಟ್ರೋ ನಿರ್ಮಾಣ, ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ನೀರಿನ ಪೈಪ್‌ಗಳು ಮತ್ತು ಗ್ಯಾಸ್ ಲೈನ್‌ಗಳನ್ನು ಹಾಕುವುದು ಮತ್ತು ಇನ್ನೂ ಹಲವು ಯೋಜನೆಗಳ ವಿಳಂಬದಿಂದಾಗಿಯೂ ಜೊತೆಗೆ, ನಗರದ ಎಲ್ಲಾ ಓವರ್‌ಹೆಡ್ ಕೇಬಲ್‌ಗಳನ್ನು ಭೂಗತಗೊಳಿಸುವ ಯೋಜನೆಯೂ ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಆಗಾಗ ನಡೆಯುತ್ತಿರುತ್ತದೆ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್