AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ನವೆಂಬರ್​ನಲ್ಲಿ ಅರೆಸ್ಟ್ ಆದ ಪಾಸ್​ ಪೋರ್ಟ್​ ಗ್ಯಾಂಗ್​ ಭಾರತೀಯ ಪಾಸ್ ಪೋರ್ಟ್ ಅನ್ನು ಕಡ್ಲೆಪುರಿಯಂತೆ ಹಂಚುತ್ತಿತ್ತು, ಶಾಕಿಂಗ್!

ಈ ಗ್ಯಾಂಗ್ ವಿದೇಶಿಗರಿಗೆ ಭಾರತೀಯ ಪಾಸ್ ಪೊರ್ಟ್ ಮಾಡಿಕೊಡುತ್ತಿದ್ದರು. ನಕಲಿ ದಾಖಲೆಗಳ ಬಳಸಿ ಅದೆಷ್ಟೋ ಶ್ರೀಲಂಕಾದ ಪ್ರಜೆಗಳಿಗೆ ಭಾರತೀಯ ಪಾಸ್ ಪೋರ್ಟ್ ಮಾಡಿಕೊಟ್ಟಿದ್ದಾರೆ.

ಬೆಂಗಳೂರು: ನವೆಂಬರ್​ನಲ್ಲಿ ಅರೆಸ್ಟ್ ಆದ ಪಾಸ್​ ಪೋರ್ಟ್​ ಗ್ಯಾಂಗ್​ ಭಾರತೀಯ ಪಾಸ್ ಪೋರ್ಟ್ ಅನ್ನು ಕಡ್ಲೆಪುರಿಯಂತೆ ಹಂಚುತ್ತಿತ್ತು, ಶಾಕಿಂಗ್!
ಪಾಸ್‌ಪೋರ್ಟ್‌Image Credit source: NDTV
TV9 Web
| Edited By: |

Updated on:Feb 01, 2023 | 11:19 AM

Share

ಬೆಂಗಳೂರು: ಕಳೆದ ವರ್ಷ ನವೆಂಬರ್​ನಲ್ಲಿ ಬಸವನಗುಡಿ ಪೊಲೀಸರಿಂದ ಸಿಕ್ಕಿ ಬಿದಿದ್ದ ಪಾಸ್ ಪೋರ್ಟ್​ ಕಳ್ಳಾಟದ ಗ್ಯಾಂಗ್​ನ ಮತ್ತಷ್ಟು ಸ್ಪೋಟಕ ಸಂಗತಿ ಬಯಲಾಗಿದೆ. ಈ ಗ್ಯಾಂಗ್ ಮಾಡುತ್ತಿದ್ದ ಖತರ್ನಾಕ್ ಕೆಲಸಗಳ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರೇ ಶಾಕ್ ಆಗಿದ್ದಾರೆ.

ಈ ಗ್ಯಾಂಗ್ ವಿದೇಶಿಗರಿಗೆ ಭಾರತೀಯ ಪಾಸ್ ಪೊರ್ಟ್ ಮಾಡಿಕೊಡುತ್ತಿದ್ದರು. ನಕಲಿ ದಾಖಲೆಗಳ ಬಳಸಿ ಅದೆಷ್ಟೋ ಶ್ರೀಲಂಕಾದ ಪ್ರಜೆಗಳಿಗೆ ಭಾರತೀಯ ಪಾಸ್ ಪೋರ್ಟ್ ಮಾಡಿಕೊಟ್ಟಿದ್ದಾರೆ. ಪೊಲೀಸರು ತನಿಖೆಯ ಆಳಕ್ಕಿಳಿದಾಗ ಈ ಎಲ್ಲಾ ಸ್ಪೋಟಕ ಸಂಗತಿ ಬಯಲಾಗಿದೆ.

ಬಂಧಿತ ಅಮಿನ್ ಶೇಟ್ ವಿಚಾರಣೆ ವೇಳೆ ಬಯಲಾದ ಶ್ರೀಲಂಕಾ ಡೀಲ್

ವಿಚಾರಣೆ ವೇಳೆ ಅಮಿನ್ ಶೇಟ್ ನೀಡಿದ ಮಾಹಿತಿ ಆಧರಿಸಿ ಗುಜರಾತ್​ನಲ್ಲಿ ಶಿಬುನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಶಿಬು ಫ್ರಾನ್ಸ್ ನಲ್ಲಿ ಕೆಲಸ ಮಾಡಿದ್ದ. ಶೆಫ್ ಆಗಿದ್ದಾಗ ಶ್ರೀಲಂಕಾದ ಬ್ರೋಕರ್​ಗಳ ಪರಿಚಯವಾಗಿದೆ. ಈ ಮೂಲಕ ಶ್ರೀಲಂಕಾದ ಜನರು ಭಾರತಕ್ಕೆ ಬರುತಿದ್ದರು. ಶ್ರೀಲಂಕಾದಿಂದ ಬಂದವರಿಗೆ ಭಾರತೀಯ ಪಾಸ್ ಪೋರ್ಟ್​ ನೀಡಿ ಅವರಿಗೆ ನೆಲೆಸಲು ಸಹಾಯ ಮಾಡುತ್ತಿದ್ದನಂತೆ.

ಇದನ್ನೂ ಓದಿ: Fake passport: ಕೊಲೆ ಪ್ರಕರಣದ ತನಿಖೆ ವೇಳೆ ಪಾಸ್​​ಪೋರ್ಟ್ ಜಾಲ ಬೆಳಕಿಗೆ, ಗ್ಯಾಂಗ್ ಸೆರೆ

ಜಸ್ಟ್ ಮಿಸ್ ಆದ ಮಾಸ್ಟರ್ ಮೈಂಡ್

ಶಬರಿ ಮಲೆಯಲ್ಲಿ ನಡೆಯಬೇಕಿದ್ದ ಆಪರೇಷನ್​ನಲ್ಲಿ ಆರೋಪಿ, ಈ ಗ್ಯಾಂಗ್​ನ ಮಾಸ್ಟರ್ ಮೈಂಡ್ ಮಿಸ್ ಆಗಿದ್ದಾನೆ. ಈತ ಫ್ರಾನ್ಸ್ ನಲ್ಲಿರುವ ಪಾಸ್ ಫೋರ್ಟ್​ ದಂಧೆಯ ಕಿಂಗ್ ಪಿನ್. ಆತನಿಗಾಗಿ ಬಸವನಗುಡಿ ಪೊಲೀಸರು ಬಲೆ ಬೀಸಿದ್ದಾರೆ. ಜನವರಿ 14ರಂದು ಶಬರಿ ಮಲೈಗೆ ಬರುವುದಾಗಿ ಮಾಹಿತಿ ಇತ್ತು. ಹೀಗಾಗಿ ಮಾಹಿತಿ ಆಧರಿಸಿ ಅಂದು ಶಬರಿ ಮಲೈನಲ್ಲಿ ಪೊಲೀಸರು ಕಾದು ಕುಳಿತಿದ್ದರು. ಆದರೇ ಆತ ಬರದ ಕಾರಣ ಬರಿಗೈನಲ್ಲಿ ವಾಪಾಸ್ ಆಗಿದ್ದರು. ಸದ್ಯ ಪಾಸ್ ಪೋರ್ಟ್​ನ ಇಬ್ಬರು ಅಧಿಕಾರಿಗಳು ಸಹ ಪೊಲೀಸರಿಗೆ ಲಾಕ್ ಆಗಿದ್ದಾರೆ. ಜೊತೆಗೆ ಈವರೆಗೂ ಐವರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 14 ಜನರ ಬಂಧನವಾಗಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ವೇಳೆ ಅಸಲಿ ಪಾಸ್ ಫೋರ್ಟ್​ ಹಿಂದಿನ ನಕಲಿ ದಾಖಲೆಗಳ ಮಾಹಿತಿ ಬಯಲು ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:19 am, Wed, 1 February 23

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!