ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು, ಆರೋಪಿ ಮತ್ತು ಮುಖ್ಯಪೇದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

| Updated By: ಆಯೇಷಾ ಬಾನು

Updated on: Sep 27, 2021 | 12:39 PM

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಟಾಲಿನ್‌ನನ್ನು ಸ್ಥಳ ಮಹಜರಿಗಾಗಿ ಸ್ಮಶಾಣಕ್ಕೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ತನ್ನ ಚಲಾಕಿ ಬುದ್ದಿ ಓಡಿಸಿದ ಆರೋಪಿ, ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದಾನೆ.

ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು, ಆರೋಪಿ ಮತ್ತು ಮುಖ್ಯಪೇದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆರೋಪಿ ಸ್ಟಾಲಿನ್
Follow us on

ಬೆಂಗಳೂರು: ಸ್ಥಳ ಮಹಜರು ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದು ಗುಂಡು ಹಾರಿಸಿ ಆರೋಪಿ ಸ್ಟಾಲಿನ್ನನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರವಿಂದ್ ಅಲಿಯಾಸ್ ಲೀ ಕೊಲೆ ಆರೋಪಿ ಸ್ಟಾಲಿನ್‌ನನ್ನು ಸ್ಥಳ ಮಹಜರಿಗಾಗಿ ಪೊಲೀಸರು ಕರೆದೊಯ್ದಿದ್ದರು ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಟಾಲಿನ್‌ನನ್ನು ಸ್ಥಳ ಮಹಜರಿಗಾಗಿ ಸ್ಮಶಾಣಕ್ಕೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ತನ್ನ ಚಲಾಕಿ ಬುದ್ದಿ ಓಡಿಸಿದ ಆರೋಪಿ, ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಮುಖ್ಯಪೇದೆ ಮಹೇಶ್ ಗಾಯಗೊಂಡಿದ್ದು ಆಗ ತಕ್ಷಣ ಅಶೋಕನಗರ ಇನ್ಸ್‌ಪೆಕ್ಟರ್‌ ಬೊಳೆತ್ತಿನ್‌ ಆತ್ಮರಕ್ಷಣೆಗಾಗಿ ಆರೋಪಿ ಸ್ಟಾಲಿನ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಸ್ಟಾಲಿನ್ ಮತ್ತು ಮುಖ್ಯಪೇದೆ ಮಹೇಶ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಹಿಂದೆ ಒಟ್ಟು ಆರು ಕೇಸ್ ಗಳನ್ನು ಹೊಂದಿದ್ದ ಸ್ಟಾಲಿನ್ ಈಗ ಮೂರು ಕೊಲೆ ಕೇಸ್ಗಳನ್ನು ಹೊಂದಿದ್ದಾನೆ. ಸ್ಟಾಲಿನ್ ಕೆಜಿ ಹಳ್ಳಿ ರೌಡಿ ಶೀಟರ್.

ಇದನ್ನೂ ಓದಿ: ದಹಿ ಕಚೋರಿ ಮಾರುತ್ತಾ ಹಗಲಿರುಳು ಶ್ರಮಿಸುತ್ತಿರುವ 14 ವರ್ಷದ ಬಾಲಕನಿಗೆ ಸಹಾಯ ಮಾಡಲು ಒಗ್ಗೂಡಿದ ನೆಟ್ಟಿಗರು