AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೋಚಕ ಕರಾಟೆ ಕದನಗಳು; ಜಪಾನ್ ವಿಶ್ವ ಕರಾಟೆ ಸ್ಪರ್ಧೆ ಆರಂಭ

ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಸಾಧು ಶ್ರೀನಾಥ್​
|

Updated on:Jan 26, 2024 | 3:20 PM

Share

ಬೆಂಗಳೂರು, ಜನವರಿ 26: 2200ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು, 2019ರ ಮಿಸ್ ಜಪಾನ್ (Japan) ನವೋಕೋ ಓಹಾರ ಗ್ರ್ಯಾಂಡ್ ಎಂಟ್ರಿ ಹಾಗೂ ನೂರಾರು ಪೋಷಕರ ಸಮಾಗಮ. ಸಾವಿರಾರು ಸ್ಪರ್ಧಾಳುಗಳ ಬಿಗ್​ಫೈಟ್. ಇದು ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾ (OSK Federation of India – India’s Largest Karate School) ಆರಂಭಿಸಿರುವ ಅಂತಾರಾಷ್ಟ್ರೀಯ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್​ಶಿಪ್​​ನ (International Karate and Kobudo Championship) ಮೊದಲ ದಿನದ ಹೈಲೈಟ್.

ಹೌದು, ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಅಲ್ಲದೇ, ಚಾಂಪಿಯನ್​ಶಿಪ್​​ಗೆ ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಲಾಯ್ತು. ಇದೇ ವೇಳೆ ಗಣ್ಯರ ಜೊತೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಏಷ್ಯಾ ಕರಾಟೆ ಫೆಡೆರೇಷನ್​ನ ಜಡ್ಜ್ ಆಗಿರೋ ಶಿಹಾನ್ ಸುರೇಶ್ ಕೆಣಿಚಿರಾ ಕೂಡ ವೇದಿಕೆ ಹಂಚಿಕೊಂಡಿದ್ರು.

ಇದಾದ ನಂತರ ಚಿಕ್ಕ ಮಕ್ಕಳ ಕುಮುಟೆ ಸ್ಪರ್ಧೆ ಆರಂಭವಾಯ್ತು. ಮಕ್ಕಳಿಂದ ಹಿಡಿದು ಒಟ್ಟು 6 ಕೋರ್ಟ್​​ಗಳಲ್ಲಿ ಕರಾಟೆ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಸ್ವತಃ ಜಪಾನ್ ಸ್ವಪ್ನ ಸುಂದರಿ ನವೋಕೊ ಓಹಾರ ಮೆಡಲ್ ಧರಿಸಿ, ಅಭಿನಂದಿಸಿದರು. ಒಟ್ಟಾರೆ, ರಿಪಬ್ಲಿಕ್ ಡೇ (Republic Day 2024) ಕರಾಟೆ ಚಾಂಪಿಯನ್​ಶಿಪ್​​ ಮೊದಲ ದಿನವೇ ಭಾರಿ ಯಶಸ್ಸು ಕಂಡಿದೆ. ಇನ್ನೂ ಎರಡು ದಿನ ಮತ್ತಷ್ಟು ರೋಚಕ ಕರಾಟೆ ಕದನಗಳು ನಡೆಯಲಿವೆ.

Published On - 3:17 pm, Fri, 26 January 24

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ