ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೋಚಕ ಕರಾಟೆ ಕದನಗಳು; ಜಪಾನ್ ವಿಶ್ವ ಕರಾಟೆ ಸ್ಪರ್ಧೆ ಆರಂಭ

ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

Follow us
|

Updated on:Jan 26, 2024 | 3:20 PM

ಬೆಂಗಳೂರು, ಜನವರಿ 26: 2200ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು, 2019ರ ಮಿಸ್ ಜಪಾನ್ (Japan) ನವೋಕೋ ಓಹಾರ ಗ್ರ್ಯಾಂಡ್ ಎಂಟ್ರಿ ಹಾಗೂ ನೂರಾರು ಪೋಷಕರ ಸಮಾಗಮ. ಸಾವಿರಾರು ಸ್ಪರ್ಧಾಳುಗಳ ಬಿಗ್​ಫೈಟ್. ಇದು ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾ (OSK Federation of India – India’s Largest Karate School) ಆರಂಭಿಸಿರುವ ಅಂತಾರಾಷ್ಟ್ರೀಯ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್​ಶಿಪ್​​ನ (International Karate and Kobudo Championship) ಮೊದಲ ದಿನದ ಹೈಲೈಟ್.

ಹೌದು, ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಅಲ್ಲದೇ, ಚಾಂಪಿಯನ್​ಶಿಪ್​​ಗೆ ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಲಾಯ್ತು. ಇದೇ ವೇಳೆ ಗಣ್ಯರ ಜೊತೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಏಷ್ಯಾ ಕರಾಟೆ ಫೆಡೆರೇಷನ್​ನ ಜಡ್ಜ್ ಆಗಿರೋ ಶಿಹಾನ್ ಸುರೇಶ್ ಕೆಣಿಚಿರಾ ಕೂಡ ವೇದಿಕೆ ಹಂಚಿಕೊಂಡಿದ್ರು.

ಇದಾದ ನಂತರ ಚಿಕ್ಕ ಮಕ್ಕಳ ಕುಮುಟೆ ಸ್ಪರ್ಧೆ ಆರಂಭವಾಯ್ತು. ಮಕ್ಕಳಿಂದ ಹಿಡಿದು ಒಟ್ಟು 6 ಕೋರ್ಟ್​​ಗಳಲ್ಲಿ ಕರಾಟೆ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಸ್ವತಃ ಜಪಾನ್ ಸ್ವಪ್ನ ಸುಂದರಿ ನವೋಕೊ ಓಹಾರ ಮೆಡಲ್ ಧರಿಸಿ, ಅಭಿನಂದಿಸಿದರು. ಒಟ್ಟಾರೆ, ರಿಪಬ್ಲಿಕ್ ಡೇ (Republic Day 2024) ಕರಾಟೆ ಚಾಂಪಿಯನ್​ಶಿಪ್​​ ಮೊದಲ ದಿನವೇ ಭಾರಿ ಯಶಸ್ಸು ಕಂಡಿದೆ. ಇನ್ನೂ ಎರಡು ದಿನ ಮತ್ತಷ್ಟು ರೋಚಕ ಕರಾಟೆ ಕದನಗಳು ನಡೆಯಲಿವೆ.

Published On - 3:17 pm, Fri, 26 January 24

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ