AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೋಚಕ ಕರಾಟೆ ಕದನಗಳು; ಜಪಾನ್ ವಿಶ್ವ ಕರಾಟೆ ಸ್ಪರ್ಧೆ ಆರಂಭ

ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

Follow us
ಸಾಧು ಶ್ರೀನಾಥ್​
|

Updated on:Jan 26, 2024 | 3:20 PM

ಬೆಂಗಳೂರು, ಜನವರಿ 26: 2200ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು, 2019ರ ಮಿಸ್ ಜಪಾನ್ (Japan) ನವೋಕೋ ಓಹಾರ ಗ್ರ್ಯಾಂಡ್ ಎಂಟ್ರಿ ಹಾಗೂ ನೂರಾರು ಪೋಷಕರ ಸಮಾಗಮ. ಸಾವಿರಾರು ಸ್ಪರ್ಧಾಳುಗಳ ಬಿಗ್​ಫೈಟ್. ಇದು ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾ (OSK Federation of India – India’s Largest Karate School) ಆರಂಭಿಸಿರುವ ಅಂತಾರಾಷ್ಟ್ರೀಯ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್​ಶಿಪ್​​ನ (International Karate and Kobudo Championship) ಮೊದಲ ದಿನದ ಹೈಲೈಟ್.

ಹೌದು, ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ಆರಂಭಗೊಂಡಿರುವ ಮೂರು ದಿನಗಳ ಕರಾಟೆ ಚಾಂಪಿಯನ್​ಶಿಪ್​​ಗೆ (RDC 24 International Karate Championship) ಅದ್ದೂರಿ ಚಾಲನೆ ಸಿಕ್ಕಿದೆ. ದೇಶದ ಅತಿ ದೊಡ್ಡ ಕರಾಟೆ ಸ್ಕೂಲ್ ಎನ್ನಿಸಿಕೊಂಡಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಈ ಚಾಂಪಿಯನ್​ಶಿಪ್​​ಗೆ ಮಿಸ್ ಜಪಾನ್ ಆಗಮಿಸಿದ್ದು, ಎಲ್ಲರತ್ತ ಕೈ ಬೀಸಿ ಗಮನ ಸೆಳೆದ್ರು.

ಅಲ್ಲದೇ, ಚಾಂಪಿಯನ್​ಶಿಪ್​​ಗೆ ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಲಾಯ್ತು. ಇದೇ ವೇಳೆ ಗಣ್ಯರ ಜೊತೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಏಷ್ಯಾ ಕರಾಟೆ ಫೆಡೆರೇಷನ್​ನ ಜಡ್ಜ್ ಆಗಿರೋ ಶಿಹಾನ್ ಸುರೇಶ್ ಕೆಣಿಚಿರಾ ಕೂಡ ವೇದಿಕೆ ಹಂಚಿಕೊಂಡಿದ್ರು.

ಇದಾದ ನಂತರ ಚಿಕ್ಕ ಮಕ್ಕಳ ಕುಮುಟೆ ಸ್ಪರ್ಧೆ ಆರಂಭವಾಯ್ತು. ಮಕ್ಕಳಿಂದ ಹಿಡಿದು ಒಟ್ಟು 6 ಕೋರ್ಟ್​​ಗಳಲ್ಲಿ ಕರಾಟೆ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಸ್ವತಃ ಜಪಾನ್ ಸ್ವಪ್ನ ಸುಂದರಿ ನವೋಕೊ ಓಹಾರ ಮೆಡಲ್ ಧರಿಸಿ, ಅಭಿನಂದಿಸಿದರು. ಒಟ್ಟಾರೆ, ರಿಪಬ್ಲಿಕ್ ಡೇ (Republic Day 2024) ಕರಾಟೆ ಚಾಂಪಿಯನ್​ಶಿಪ್​​ ಮೊದಲ ದಿನವೇ ಭಾರಿ ಯಶಸ್ಸು ಕಂಡಿದೆ. ಇನ್ನೂ ಎರಡು ದಿನ ಮತ್ತಷ್ಟು ರೋಚಕ ಕರಾಟೆ ಕದನಗಳು ನಡೆಯಲಿವೆ.

Published On - 3:17 pm, Fri, 26 January 24

ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
Daily Devotional: ದೇವರು ಯಾರಿಗೆ ಸಹಾಯ ಮಾಡುತ್ತಾನೆ ಗೊತ್ತಾ?
Daily Devotional: ದೇವರು ಯಾರಿಗೆ ಸಹಾಯ ಮಾಡುತ್ತಾನೆ ಗೊತ್ತಾ?
Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ
Daily Horoscope: ಕುಜ ಸಿಂಹ ರಾಶಿಯಲ್ಲಿ ಕೇತುವಿನೊಂದಿಗೆ ಸಂಚಾರ