AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಬಸ್ ಸೀಜ್: ಪ್ರಯಾಣಿಕರ ಸಮೇತ ಠಾಣೆಗೆ ತಂದ ಟ್ರಾಫಿಕ್ ಪೊಲೀಸ್

KSRTC ಬಸ್ ಸೀಜ್: ಪ್ರಯಾಣಿಕರ ಸಮೇತ ಠಾಣೆಗೆ ತಂದ ಟ್ರಾಫಿಕ್ ಪೊಲೀಸ್

ರಮೇಶ್ ಬಿ. ಜವಳಗೇರಾ
|

Updated on:Sep 02, 2025 | 6:49 PM

Share

ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಟ್ರಾಫಿಕ್​​​ ಪೇದೆಯೊಬ್ಬರು, ಪ್ರಯಾಣಿಕರ ಸಮೇತ ಬಸ್ ಸೀಜ್​ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಬಳಿ ಈ ಘಟನೆ ನಡೆದಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್​, ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ‌ ಸ್ಟಾಪ್ ಕೊಡಲಾಗಿತ್ತು. ಇದರಿಂದ ಟ್ರಾಫಿಕ್ ಪೊಲೀಸ್, ಪ್ರಯಾಣಿಕರಿದ್ದ ಕೆಎಸ್​​ ಆರ್ ಟಿಸಿ ಬಸ್​ ಸೀಜ್ ಮಾಡಿ ಸಂಜಯ ನಗರ ಸಂಚಾರ ಠಾಣೆಗೆ ತಂದಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 02): ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಟ್ರಾಫಿಕ್​​​ ಪೇದೆಯೊಬ್ಬರು, ಪ್ರಯಾಣಿಕರ ಸಮೇತ ಬಸ್ ಸೀಜ್​ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಬಳಿ ಈ ಘಟನೆ ನಡೆದಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್​, ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ‌ ಸ್ಟಾಪ್ ಕೊಡಲಾಗಿತ್ತು. ಇದರಿಂದ ಟ್ರಾಫಿಕ್ ಪೊಲೀಸ್, ಪ್ರಯಾಣಿಕರಿದ್ದ ಕೆಎಸ್​​ ಆರ್ ಟಿಸಿ ಬಸ್​ ಸೀಜ್ ಮಾಡಿ ಸಂಜಯ ನಗರ ಸಂಚಾರ ಠಾಣೆಗೆ ತಂದಿದ್ದಾರೆ. ತುರ್ತಾಗಿ ಹೋಗಬೇಕು. ಬಸ್ ನಂಬರ್ ಪಡೆದು ಕೇಸ್ ಹಾಕಿ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ. ಎಂದರೂ ಕೇಳದ ಪೊಲೀಸಪ್ಪ ಬಸ್​ ಅನ್ನು ಪೊಲೀಸ್ ಠಾಣೆಗೆ ಓಡಿಸಿದ್ದಾನೆ. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ಪೊಲೀಸಪ್ಪನಿಗೆ ತರಾಟಗೆ ತೆಗೆದುಕೊಂಡಿದ್ದಾರೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದರೂ ಕೇಳದೆ ನಿರ್ಲಕ್ಷ್ಯ. ಕೊನೆಗೆ ಪ್ರಯಾಣಿಕರು‌ ಬೇರೆ ಬಸ್ ಗಳಲ್ಲಿ ತೆರಳಿದರು.

Published on: Sep 02, 2025 06:42 PM