AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಆರೋಪಿ ಪತ್ತೆಹಚ್ಚಲು ಬಾಡಿಗೆ ಕಾರ್ ಕೇಳಿದ ಪೊಲೀಸರು; ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!

ಕಾರಿನಲ್ಲಿ ಹೋಗಿ ಆರೋಪಿ ಕರೆತರುತ್ತೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಬಾಡಿಗೆಗೆ ಕಾರು ತರಲಾಗದೆ ಎಸ್​ಪಿ ಭೇಟಿಯಾಗಿ ಮನವಿ ಮಾಡಲಾಗಿತ್ತು. ವಿಚಾರ ತಿಳಿದು ತಮ್ಮ ಕಾರನ್ನೇ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ತುಮಕೂರು ಎಸ್​ಪಿ ದಂಡಿನಶಿವರ ಠಾಣೆಗೆ ಕಾರು ಕಳುಹಿಸಿದ್ದಾರೆ.

ತುಮಕೂರು: ಆರೋಪಿ ಪತ್ತೆಹಚ್ಚಲು ಬಾಡಿಗೆ ಕಾರ್ ಕೇಳಿದ ಪೊಲೀಸರು; ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!
ಠಾಣೆಗೆ ಸ್ವತಃ ತಮ್ಮ ಕಾರ್ ಕಳಿಸಿದ ಎಸ್​ಪಿ!
TV9 Web
| Edited By: |

Updated on: Jan 13, 2022 | 10:15 PM

Share

ಬೆಂಗಳೂರು: ನಕಲಿ ಅಂಕಪಟ್ಟಿ ಮಾರುತ್ತಿದ್ದ ಆರೋಪಿಯನ್ನು ಸಿಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆಯ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿ 54 ನಕಲಿ ಅಂಕಪಟ್ಟಿ, 1 ಲ್ಯಾಪ್​ಟಾಪ್, 3 ಮೊಬೈಲ್​ ಜಪ್ತಿ ಮಾಡಿದೆ. ನೋಯ್ಡಾದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಕಚೇರಿ ನಡೆಸಲಾಗುತ್ತಿತ್ತು. ಎಂ.ಜಿ. ರಸ್ತೆಯಲ್ಲಿ ಕಚೇರಿ ತೆರೆದು ಗ್ಯಾಂಗ್​ ದಂಧೆ ನಡೆಸುತ್ತಿತ್ತು. ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್​ ಪದವಿಯ ಅಂಕಪಟ್ಟಿ ಮಾರುತ್ತಿತ್ತು. ಇದೀಗ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಕಬ್ಬನ್​ ಪಾರ್ಕ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಲ್ಯ ವಿವಾಹ ಪ್ರಕರಣಗಳಲ್ಲಿ FIR ದಾಖಲಿಸಲು ವಿಳಂಬ; ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೆ ಡಿಸಿ ಸೂಚನೆ

ಬಾಗಲಕೋಟೆ: ಬಾಲ್ಯ ವಿವಾಹ ಪ್ರಕರಣಗಳಲ್ಲಿ FIR ದಾಖಲಿಸಲು ವಿಳಂಬ ಹಿನ್ನೆಲೆ ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೆ ಡಿಸಿ ಸೂಚನೆ ನೀಡಿದ್ದಾರೆ. ಮಹಿಳಾ ಅಭಿವೃದ್ಧಿ ಇಲಾಖೆ ಡಿಡಿ ಬಣಕಾರಗೆ ಸೂಚನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾ.ಕೆ. ರಾಜೇಂದ್ರ ಈ ಬಗ್ಗೆ ಸೂಚನೆ ಹೊರಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ 41 ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ 32 ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಉಳಿದ 9 ಪ್ರಕರಣಗಳಲ್ಲಿ FIR ದಾಖಲಿಸಲು ಸೂಚಿಸಲಾಗಿತ್ತು.

FIR ದಾಖಲಿಸಲು ಸೂಚಿಸಿದರೂ ದಾಖಲಿಸದ ಹಿನ್ನೆಲೆ, ಐವರು ಸಿಡಿಪಿಒಗಳಿಗೆ ನೋಟಿಸ್ ಜಾರಿಗೊಳಿಸಲು ಸೂಚನೆ ಕೊಡಲಾಗಿದೆ. ಶಿಲ್ಪಾ ಹಿರೇಮಠ, ಸಾವಿತ್ರಿ, ಅನುರಾಧಾ ಹಾದಿಮನಿ, ಅನ್ನಪೂರ್ಣ ಕುಬಕಡ್ಡಿ, ವೆಂಕಪ್ಪ ಗಿರಿತಿಮ್ಮಣ್ಣಗೆ ನೋಟಿಸ್ ಜಾರಿಗೊಳಿಸಲು ಸೂಚನೆ ನೀಡಲಾಗಿದೆ. ಈ ಐವರಿಗೂ ಶೋಕಾಸ್ ನೋಟಿಸ್ ಜಾರಿಗೆ ಸೂಚನೆ ಕೊಡುವ ಬಗ್ಗೆ ಡಿಸಿ ಆದೇಶ ನೀಡಿದ್ದಾರೆ.

ಬಾಡಿಗೆ ಕಾರು ಮಾಡಿಕೊಂಡು ಬಂದರೆ ಹಿಡಿದು ತರುತ್ತೇವೆ ಎಂದ ಪೊಲೀಸರು; ಠಾಣೆಗೆ ತಮ್ಮ ಕಾರು ಕಳಿಸಿದ ಎಸ್​ಪಿ

ತುಮಕೂರು: ಪ್ರಕರಣ ಒಂದರ ವಿಚಾರದಲ್ಲಿ ಠಾಣೆಗೆ ಎಸ್​ಪಿ ತಮ್ಮ ಕಾರು ಕಳಿಸಿದ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೋಡಿಹಳ್ಳಿಯಲ್ಲಿ ನಾಗೇಂದ್ರಪ್ಪ ಮೇಲೆ ಇಬ್ಬರು ಹಲ್ಲೆ ಮಾಡಿದ್ದರು. ನಾಗೇಂದ್ರಪ್ಪ ಮೇಲೆ ಶಿವಪ್ರಕಾಶ್, ಚಂದನ್​ ಹಲ್ಲೆ ಮಾಡಿದ್ದರು. ದಂಡಿನಶಿವರ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿತ್ತು. ಬಳಿಕ, ಕೊಲೆ ಯತ್ನ ಪ್ರಕರಣದಲ್ಲಿ ಶಿವಪ್ರಕಾಶ್ ಜಾಮೀನು ಪಡೆದಿದ್ದರು. ಆರೋಪಿ ಚಂದನ್ ​ಜಾಮೀನು ಪಡೆಯದೆ ಓಡಾಡಿಕೊಂಡಿದ್ದ. ಈ ವೇಳೆ, ನಾಗೇಂದ್ರಪ್ಪ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು.

ಪೊಲೀಸರು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಎಸ್​ಪಿಗೆ ದೂರು ನೀಡಲಾಗಿತ್ತು. ಬಾಡಿಗೆ ಕಾರು ಮಾಡಿಕೊಂಡು ಬಂದರೆ ಹಿಡಿದು ತರುತ್ತೇವೆ. ಕಾರಿನಲ್ಲಿ ಹೋಗಿ ಆರೋಪಿ ಕರೆತರುತ್ತೇವೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಬಾಡಿಗೆಗೆ ಕಾರು ತರಲಾಗದೆ ದೂರುದಾರರು ಎಸ್​ಪಿ ಭೇಟಿಯಾಗಿ ಮನವಿ ಮಾಡಲಾಗಿತ್ತು. ವಿಚಾರ ತಿಳಿದು ತಮ್ಮ ಕಾರನ್ನೇ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ತುಮಕೂರು ಎಸ್​ಪಿ ದಂಡಿನಶಿವರ ಠಾಣೆಗೆ ಕಾರು ಕಳುಹಿಸಿದ್ದಾರೆ.

ನೊಂದವರನ್ನು ಕಾರಿನಲ್ಲಿ ಕೂರಿಸಿ ಎಸ್​ಪಿ ಠಾಣೆಗೆ ಕಳುಹಿಸಿದ್ದಾರೆ. ಇದೇ ಕಾರಿನಲ್ಲಿ ತೆರಳಿ ಆರೋಪಿ ಬಂಧಿಸುವಂತೆ SP ಸೂಚನೆ ನೀಡಿದ್ದಾರೆ. ಚಾಲಕನಿಗೆ ಮಾಹಿತಿ ನೀಡಿ ದಂಡಿನಶಿವರ ಠಾಣೆ ಕಳಿಸಿದ್ದಾರೆ. ಆರೋಪಿಗಳು ಪೊಲೀಸರೊಬ್ಬರ ಸಂಬಂಧಿಯಾಗಿದ್ದ ಹಿನ್ನೆಲೆ, ಆರೋಪಿಗಳನ್ನು ಬಂಧಿಸದೆ ಪೊಲೀಸರು ಕಾಲಹರಣ ಮಾಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Crime News: ಅಂತಾರಾಜ್ಯ ಕಳ್ಳ ಬಂಧನ; 16 ಲಕ್ಷ ಮೌಲ್ಯದ 21 ಬೈಕ್‌ಗಳು ವಶಕ್ಕೆ, ಸಾಲಬಾಧೆಯಿಂದ ದಂಪತಿ ನೇಣಿಗೆ ಶರಣು

ಇದನ್ನೂ ಓದಿ: Crime News: ಮಗುವನ್ನು ಕೊಂದು ದಂಪತಿ ಆತ್ಮಹತ್ಯೆ, ಕಳ್ಳತನ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್