AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲೆ, ನಿಂದನೆ ಆರೋಪಿಸಿ ವಿದ್ಯಾರ್ಥಿಗಳಿಂದ ಟ್ವೀಟ್‌, ಆರೋಪ ತಳ್ಳಿ ಹಾಕಿದ ಪೊಲೀಸ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ13ರ ಮಧ್ಯರಾತ್ರಿ 2.30 ಸಮಯದಲ್ಲಿ ಸದ್ದುಗುಂಟೆಪಾಳ್ಯದ ಆಂಜನೇಯ ದೇಗುಲ ಬಳಿ ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಬೀಟ್ ಪೊಲೀಸರು ನಿಂದಿಸಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ಮುಸ್ಲಿಂರಾಗಿದಕ್ಕೆ ನಮ್ಮನ್ನು ಪೊಲೀಸರು ನೀವು ಪಾಕಿಸ್ತಾನದವರೆಂದು ನಿಂದಿಸಿದ್ದಾರೆ. ಅಲ್ಲದೆ ವಾರಂಟ್ ಇಲ್ಲದೆ ಬಲವಂತವಾಗಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿಎಎ, NRC ಪ್ರೊಟೆಸ್ಟ್ ಇನ್ಫೋ ಪೇಜ್​ನಲ್ಲಿ […]

ಹಲ್ಲೆ, ನಿಂದನೆ ಆರೋಪಿಸಿ ವಿದ್ಯಾರ್ಥಿಗಳಿಂದ ಟ್ವೀಟ್‌, ಆರೋಪ ತಳ್ಳಿ ಹಾಕಿದ ಪೊಲೀಸ್
ಸಾಧು ಶ್ರೀನಾಥ್​
|

Updated on: Jan 15, 2020 | 1:49 PM

Share

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ13ರ ಮಧ್ಯರಾತ್ರಿ 2.30 ಸಮಯದಲ್ಲಿ ಸದ್ದುಗುಂಟೆಪಾಳ್ಯದ ಆಂಜನೇಯ ದೇಗುಲ ಬಳಿ ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಬೀಟ್ ಪೊಲೀಸರು ನಿಂದಿಸಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಮುಸ್ಲಿಂರಾಗಿದಕ್ಕೆ ನಮ್ಮನ್ನು ಪೊಲೀಸರು ನೀವು ಪಾಕಿಸ್ತಾನದವರೆಂದು ನಿಂದಿಸಿದ್ದಾರೆ. ಅಲ್ಲದೆ ವಾರಂಟ್ ಇಲ್ಲದೆ ಬಲವಂತವಾಗಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿಎಎ, NRC ಪ್ರೊಟೆಸ್ಟ್ ಇನ್ಫೋ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.

ಇದಾದ ನಂತರ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಟ್ವೀಟ್‌ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ತಡರಾತ್ರಿ ಐವರು ಯುವಕರು ರಸ್ತೆ ಬದಿ ನಿಂತಿದ್ದರು. ಈ ವೇಳೆ ವಿಚಾರಿಸಲು ಯುವಕರ ಬಳಿ ಪೊಲೀಸರು ತೆರಳಿದ್ದರು. ಆದ್ರೆ ಪೊಲೀಸರನ್ನು ಕಂಡು ಇಬ್ಬರು ಯುವಕರು ಓಡಿ ಹೋಗಿದ್ದರು. ಪೊಲೀಸರು ಎಂದಾಗ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಾರೆ. ಐಡಿ ತೋರಿಸಿ ಯುವಕರನ್ನು ಠಾಣೆಗೆ ಕರ್ಕೊಂಡು ಬಂದಿದ್ದೇವೆ. ಈ ವೇಳೆ ಮೂವರನ್ನು ವಿಚಾರಣೆ ನಡೆಸಿ, ಸಣ್ಣ ಕೇಸ್ ಹಾಕಿ ಯುವಕರನ್ನು ಬಿಟ್ಟು ಕಳಿಸಿದ್ದೇವೆಂದು ಸ್ಪಷ್ಟನೆ ನೀಡಿದ್ದಾರೆ.